Don't Miss!
- News ‘ದೇವೇಗೌಡ್ರು ಕೋಲಾರದಲ್ಲಿ ಕುಟುಂಬದವರಿಗೆ ಬಿಟ್ಟು ಕಾರ್ಯಕರ್ತರಿಗೆ ಟಿಕೆಟ್ ಯಾಕೆ ಕೊಟ್ರು ಗೊತ್ತಾ?’
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಐಪಿಎಲ್ ಮ್ಯಾಚ್ ನಲ್ಲಿ ಸುವರ್ಣ ವಾಹಿನಿ ಮಾಧವ
ಐ.ಪಿ.ಎಲ್ ಮ್ಯಾಚ್ ಅಂದ್ರೆ ಎಲ್ಲರಿಗೂ ಕುತೂಹಲ ಜೊತೆಗೆ ಕುಳಿತು ನೋಡುವ ಆತುರ. ಅದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಮ್ಯಾಚ್ ಎಂದರೆ ಕನ್ನಡಿಗರಿಗೊಂದು ಮೈನವಿರೇಳಿಸುವ ಕ್ಷಣ. ಮೇ 4 ರ ಭಾನುವಾರ ರಾತ್ರಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ನಡೆದ ಸೆಣಸಾಟದಲ್ಲಿ ಕೊನೆಯ ಕ್ಷಣದ ಹೋರಾಟ ರೋಚಕವಾಗಿತ್ತು.
ಅಂತಿಮ
ಕ್ಷಣದಲ್ಲಿ
ಹೋರಾಡಿ
ಗೆದ್ದ
ವಿಜಯಶಾಲಿಗಳಿಗೆ
ಪ್ರಶಸ್ತಿ
ನೀಡುವ
ಕ್ಷಣದಲ್ಲಿ
ಸಾಕ್ಷಿಯಾದವರು
ಸುವರ್ಣ
ವಾಹಿನಿಯ
"ಮೀರಾ
ಮಾಧವ"
ಧಾರಾವಾಹಿಯ
ಮುಖ್ಯ
ಪಾತ್ರಧಾರಿ
ಮಾಧವ.
[ಕಡೆಗೂ
ಸಪ್ತಪದಿ
ತುಳಿದ
'ಮೀರಾ
ಮಾಧವ'
ಜೋಡಿ]
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿನ್ನೆ ನಡೆದ 7ನೇ ಆವೃತ್ತಿ ಐ.ಪಿ.ಎಲ್ ಟಿ-20 ಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ಮಧ್ಯೆ ನಡೆದ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಅಂದರೆ ಆರ್.ಸಿ.ಬಿ. ತಂಡದ ಮಿಚೆಲ್ ಸ್ಟಾರ್ಕ್ ಗೆ, ಸುವರ್ಣ ವಾಹಿನಿಯ ವಿಶೇಷ ಅತಿಥಿಯಾಗಿ ಭಾಗವಹಿಸಿ "ಕಣ್ಣಾ ಕೀಪ್ ಕಾಮ್ ಅವಾರ್ಡ್" ನ್ನು ನೀಡಿದರು.
ಅಂದರೆ ಪಂದ್ಯದ ಕೊನೆಯವರೆಗೂ ತಂಡವನ್ನು ಸಾವಧಾನವಾಗಿರಿಸಿ ಗೆಲುವಿನ ತಿರುವನ್ನು ಪಡೆಯಲು ಪ್ರಮುಖವಾಗಿರುವ ವ್ಯಕ್ತಿಗೆ ನೀಡುವ ಪ್ರಶಸ್ತಿ ಇದಾಗಿತ್ತು. ಐ.ಪಿ.ಎಲ್. ಪಂದ್ಯದ ಪ್ರಶಸ್ತಿಗಳನ್ನು ವಿತರಿಸಲು ಭಾಗವಹಿಸಿದ ಕನ್ನಡ ಕಿರುತೆರೆ ಪ್ರಪ್ರಂಚದ ಪ್ರಥಮ ವ್ಯಕ್ತಿ ನಮ್ಮ ಮಾಧವ ಎಂದರೂ ಅತಿಶಯೋಕ್ತಿಯಾಗಲಾರದು. 'ಮೀರಾಮಾಧವ' ಧಾರಾವಾಹಿ ಇತ್ತೀಚೆಗಷ್ಟೇ ಮಹತ್ತರ ತಿರುವನ್ನು ಪಡೆದು ಮದುವೆಯ ಶುಭಗಳಿಗೆಯನ್ನು ಸಂಭ್ರಮಿಸಿತ್ತು.
ನಮ್ಮ ಸುವರ್ಣ ವಾಹಿನಿಯ ಸೂಪರ್ ಹಿರೋ ಎಂದೇ ಈ ಮಾಧವನನ್ನು ಗುರುತಿಸಬಹುದು!! ಇಂತಹ ಐ.ಪಿ.ಎಲ್ ಮ್ಯಾಚ್ ನಲ್ಲಿ ನಮ್ಮ ಸುವರ್ಣ ವಾಹಿನಿಯ ತಾರೆ ಭಾಗವಹಿಸಿರುವುದು ಹೆಮ್ಮೆಯ ಸಂಗತಿ. (ಏಜೆನ್ಸ್ಸೀಸ್)