Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಐಪಿಎಲ್ ಮ್ಯಾಚ್ ನಲ್ಲಿ ಸುವರ್ಣ ವಾಹಿನಿ ಮಾಧವ
ಐ.ಪಿ.ಎಲ್ ಮ್ಯಾಚ್ ಅಂದ್ರೆ ಎಲ್ಲರಿಗೂ ಕುತೂಹಲ ಜೊತೆಗೆ ಕುಳಿತು ನೋಡುವ ಆತುರ. ಅದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಮ್ಯಾಚ್ ಎಂದರೆ ಕನ್ನಡಿಗರಿಗೊಂದು ಮೈನವಿರೇಳಿಸುವ ಕ್ಷಣ. ಮೇ 4 ರ ಭಾನುವಾರ ರಾತ್ರಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ನಡೆದ ಸೆಣಸಾಟದಲ್ಲಿ ಕೊನೆಯ ಕ್ಷಣದ ಹೋರಾಟ ರೋಚಕವಾಗಿತ್ತು.
ಅಂತಿಮ
ಕ್ಷಣದಲ್ಲಿ
ಹೋರಾಡಿ
ಗೆದ್ದ
ವಿಜಯಶಾಲಿಗಳಿಗೆ
ಪ್ರಶಸ್ತಿ
ನೀಡುವ
ಕ್ಷಣದಲ್ಲಿ
ಸಾಕ್ಷಿಯಾದವರು
ಸುವರ್ಣ
ವಾಹಿನಿಯ
"ಮೀರಾ
ಮಾಧವ"
ಧಾರಾವಾಹಿಯ
ಮುಖ್ಯ
ಪಾತ್ರಧಾರಿ
ಮಾಧವ.
[ಕಡೆಗೂ
ಸಪ್ತಪದಿ
ತುಳಿದ
'ಮೀರಾ
ಮಾಧವ'
ಜೋಡಿ]
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿನ್ನೆ ನಡೆದ 7ನೇ ಆವೃತ್ತಿ ಐ.ಪಿ.ಎಲ್ ಟಿ-20 ಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ಮಧ್ಯೆ ನಡೆದ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಅಂದರೆ ಆರ್.ಸಿ.ಬಿ. ತಂಡದ ಮಿಚೆಲ್ ಸ್ಟಾರ್ಕ್ ಗೆ, ಸುವರ್ಣ ವಾಹಿನಿಯ ವಿಶೇಷ ಅತಿಥಿಯಾಗಿ ಭಾಗವಹಿಸಿ "ಕಣ್ಣಾ ಕೀಪ್ ಕಾಮ್ ಅವಾರ್ಡ್" ನ್ನು ನೀಡಿದರು.
ಅಂದರೆ ಪಂದ್ಯದ ಕೊನೆಯವರೆಗೂ ತಂಡವನ್ನು ಸಾವಧಾನವಾಗಿರಿಸಿ ಗೆಲುವಿನ ತಿರುವನ್ನು ಪಡೆಯಲು ಪ್ರಮುಖವಾಗಿರುವ ವ್ಯಕ್ತಿಗೆ ನೀಡುವ ಪ್ರಶಸ್ತಿ ಇದಾಗಿತ್ತು. ಐ.ಪಿ.ಎಲ್. ಪಂದ್ಯದ ಪ್ರಶಸ್ತಿಗಳನ್ನು ವಿತರಿಸಲು ಭಾಗವಹಿಸಿದ ಕನ್ನಡ ಕಿರುತೆರೆ ಪ್ರಪ್ರಂಚದ ಪ್ರಥಮ ವ್ಯಕ್ತಿ ನಮ್ಮ ಮಾಧವ ಎಂದರೂ ಅತಿಶಯೋಕ್ತಿಯಾಗಲಾರದು. 'ಮೀರಾಮಾಧವ' ಧಾರಾವಾಹಿ ಇತ್ತೀಚೆಗಷ್ಟೇ ಮಹತ್ತರ ತಿರುವನ್ನು ಪಡೆದು ಮದುವೆಯ ಶುಭಗಳಿಗೆಯನ್ನು ಸಂಭ್ರಮಿಸಿತ್ತು.
ನಮ್ಮ ಸುವರ್ಣ ವಾಹಿನಿಯ ಸೂಪರ್ ಹಿರೋ ಎಂದೇ ಈ ಮಾಧವನನ್ನು ಗುರುತಿಸಬಹುದು!! ಇಂತಹ ಐ.ಪಿ.ಎಲ್ ಮ್ಯಾಚ್ ನಲ್ಲಿ ನಮ್ಮ ಸುವರ್ಣ ವಾಹಿನಿಯ ತಾರೆ ಭಾಗವಹಿಸಿರುವುದು ಹೆಮ್ಮೆಯ ಸಂಗತಿ. (ಏಜೆನ್ಸ್ಸೀಸ್)