Don't Miss!
- Automobiles KTM Duke 125 ಬೆಲೆಗೆ ಯಾವೆಲ್ಲಾ ಬೈಕ್ಗಳು ಸಿಗುತ್ತೆ ಗೊತ್ತಾ?: ಪಲ್ಸರ್ನಿಂದ ಹಿಡಿದು MT 15 ವರೆಗೆ
- News ಸಿನಿಮಾದಲ್ಲಿ ರೀಲ್ ಬಿಟ್ಟಂತೆ ರಾಜಕೀಯದಲ್ಲೂ ರೀಲ್ ಬಿಟ್ಟರೆ ಜನ ಒಪ್ಪಲ್ಲ: ಡಿ ಕೆ ಸುರೇಶ್ ಹೀಗೆ ಹೇಳಿದ್ದು ಯಾರಿಗೆ?
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಮಹರ್ಷಿ ದರ್ಪಣ' ನಿರೂಪಕರಾಗಿ ಸರ್ ಎಂವಿ ಮರಿಮಗ
ಮುಂಜಾನೆ ಎದ್ದಾಗ ಮುಂದಿನ ದಿನಗಳು ಹೇಗಿರಬಹುದು ಎಂದು ತಿಳಿಯುವ ಕುತೂಹಲದ ಮನಸ್ಸುಗಳಿಗೆ ಸುವರ್ಣ ವಾಹಿನಿಯು ಪ್ರಸ್ತುತ ಪಡಿಸುತ್ತಿರುವ ಜ್ಯೋತಿಷ್ಯ ಕಾರ್ಯಕ್ರಮ 'ಮಹರ್ಷಿ ದರ್ಪಣ' ಇದೇ ಮೇ 17ರಿಂದ ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 8 ರಿಂದ ಆರಂಭವಾಗಲಿದೆ.
ಜ್ಯೋತಿಷ್ಯ
ಎನ್ನುವುದು
ಯಾವುದೇ
ಸಮಸ್ಯೆಗಳಿಗೆ
ಉತ್ತರ
ಅಲ್ಲ,
ಅದು
ಉತ್ತರ
ಹುಡುಕುವ
ಮಾರ್ಗದರ್ಶಿ.
ಇದರಲ್ಲಿ
ಯಾವ
ಡಂಬಾಚಾರಿಕೆಯೂ
ಇಲ್ಲದ
ವೈಜ್ಞಾನಿಕ
ಲೇಪ
ನೀಡುವ
ಕಾರ್ಯಕ್ರಮ
'ಮಹರ್ಷಿ
ದರ್ಪಣ'.
[ಪಾಕಪ್ರವೀಣರಾಗಬೇಕೆ,
ತಪ್ಪದೆ
ನೋಡಿ
'ಪಾಕಶಾಲೆ']
ಸ್ಫಟಿಕ ಜ್ಯೋತಿಷ್ಯ, ವಾಸ್ತು ಶಾಸ್ತ್ರ, ಮುಖ ಭವಿಷ್ಯ ಇನ್ನು ಮುಂತಾದ ಜ್ಯೋತಿಷ್ಯ ವಿಜ್ಞಾನದ ಮೂಲಕ ವೀಕ್ಷಕರ ಪ್ರಶ್ನೆಗಳಿಗೆ ಉತ್ತರ ನೀಡಲು ಸರ್ ಎಂ ವಿಶ್ವೇಶ್ವರಯ್ಯನವರ ಮರಿಮಗನಾದ ಶ್ರೀ ರಾಘವೇಂದ್ರ ಮೋಕ್ಷಗೊಂಡಂ ಕಾರ್ಯಕ್ರಮದಲ್ಲಿ ಉಪಸ್ಥಿತರಾಗಿರುತ್ತಾರೆ.
ಸುವರ್ಣವಾಹಿನಿಯ ಜನಪ್ರಿಯ ಧಾರಾವಾಹಿಗಳಲ್ಲೊಂದಾದ ಶ್ರೀ ರಾಘವೇಂದ್ರ ವೈಭವ ಖ್ಯಾತಿಯ ಸ್ವಾಮಿ ಪಾತ್ರಧಾರಿ ಪರಿಕ್ಷಿತ್ ಸಾರಥ್ಯದಲ್ಲಿ ಈ ಕಾರ್ಯಕ್ರಮ ಮೂಡಿಬರಲಿದೆ. ಇವರ ನಿರೂಪಣೆ ವಿಭಿನ್ನವಾಗಿದ್ದು ವೈವಿಧ್ಯಮಯವಾಗಿರುತ್ತದೆ.
ಅಲ್ಲದೇ ದಿನಭವಿಷ್ಯ ಪ್ರಶ್ನೋತ್ತರದೊಂದಿಗೆ ನಾವೆಂದೂ ನೋಡಿರದ ಅಪರೂಪದ ಪುಣ್ಯಕ್ಷೇತ್ರಗಳ ಅನಾವರಣ ಹಾಗೂ ಪರಿಚಯವನ್ನೂ ಮಾಡಿಸಿಕೊಡಲಿದ್ದಾರೆ. ಒಟ್ಟಿನಲ್ಲಿ ಮುಂಜಾನೆಯ ಭವಿಷ್ಯದೊಂದಿಗೆ ಒಂದಷ್ಟು ಮಾಹಿತಿಯನ್ನು ತಿಳಿದುಕೊಳ್ಳುವ ಅವಕಾಶ ಮಹರ್ಷಿ ದರ್ಪಣದಲ್ಲಿದೆ ತಪ್ಪದೇ ನೋಡಿ. (ಫಿಲ್ಮಿಬೀಟ್ ಕನ್ನಡ)