Don't Miss!
- Lifestyle ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- News ಮಂಡ್ಯದ ‘ಹಲವು ಸುಮಲತಾ’ ತಂತ್ರ ಬೆಂಗಳೂರು ಗ್ರಾಮಾಂತದಲ್ಲೂ ಬಂತಾ? ಮತ್ತೊಬ್ಬ ಡಾ ಸಿಎನ್ ಮಂಜುನಾಥ್ ಕಣಕ್ಕೆ!
- Sports IPL 2024: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಂಬಳ ನೀಡದೆ ಬೀಗ ಹಾಕಿದ ಕನ್ನಡ ಸುದ್ದಿ ವಾಹಿನಿ : 260ಕ್ಕೂ ಹೆಚ್ಚು ಪತ್ರಕರ್ತರು ಬೀದಿಗೆ
ಸ್ವರಾಜ್ ನ್ಯೂಸ್ ಕನ್ನಡ ಸುದ್ದಿವಾಹಿನಿಗೆ ರಾತ್ರೋ ರಾತ್ರಿ ಬೀಗ ಜಡಿಯಲಾಗಿದೆ. ಇದರಿಂದಾಗಿ 260ಕ್ಕೂ ಹೆಚ್ಚು ಪತ್ರಕರ್ತರು ಬೀದಿಗೆ ಬಿದ್ದಿದ್ದಾರೆ. ನ್ಯಾಯಕ್ಕಾಗಿ ಆಗ್ರಹಿಸಿ ಕೆಲ ಪತ್ರಕರ್ತರು ಧೈರ್ಯ ಮಾಡಿ, ಪೊಲೀಸರ ಮೊರೆ ಹೊಕ್ಕಿದ್ದಾರೆ.
ಹೈದರಾಬಾದ್ ಮೂಲದ ಹೀರಾ ಗ್ರೂಪ್ಸ್ ಸಂಸ್ಥೆಯ ಸಂಸ್ಥಾಪಕಿ ಹಾಗೂ ಎಂ.ಇ.ಪಿ ರಾಷ್ಟ್ರೀಯ ಅಧ್ಯಕ್ಷೆ ಡಾ. ನೌಹೀರಾ ಶೇಖ್ ಒಡೆತನದ ಟಿಟಿಸಿ ನ್ಯೂಸ್ ಅಧೀನದಲ್ಲಿ ಆರಂಭಗೊಂಡಿದ್ದ ಸ್ವರಾಜ್ ನ್ಯೂಸ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ತತ್ತರಿಸಿ, ಬಂದ್ ಆಗಿದೆ.
ರವಿ-ಮಾರುತಿ ಸಾರಥ್ಯದ ಫಸ್ಟ್ ನ್ಯೂಸ್ ಸೇರಿದ ಸೋಮಣ್ಣ
ಜನವರಿ 1 ರಿಂದ ಟಿಟಿಸಿ ನ್ಯೂಸ್ ಚಾನಲ್ ಎಂಬ ಹೆಸರಿನಲ್ಲಿ ಹೊಸ ಸುದ್ದಿ ವಾಹಿನಿ ಪ್ರಾರಂಭವಾಗಿತ್ತು. ಮಾರ್ಚ್ 17 ರಿಂದ ಸ್ವರಾಜ್ ಎಕ್ಸ್ಪ್ರೆಸ್ ಅಂತ ಹೆಸರು ಬದಲಾಯಿಸಲಾಯಿತು. ಅಂದೇ. ಸ್ಯಾಟಿಲೈಟ್ ಪ್ರಸಾರ ಪ್ರಾರಂಭವಾಯಿತು.
ಸ್ವರಾಜ್ ನ್ಯೂಸ್ ಎಕ್ಸ್ಪ್ರೆಸ್ ಹೀರಾ ರೀಟೇಲ್ ಹೈದರಾಬಾದ್ ಪ್ರೈವೇಟ್ ಲಿಮಿಟೆಡ್ ಅಂತ ಪ್ರಾರಂಬಿಸಲಾಗಿತ್ತು. ಬೆಂಗಳೂರು ಅಲ್ಲದೇ ಪ್ರತಿ ಜಿಲ್ಲೆಯಲ್ಲೂ ಕೂಡ 260 ಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಈಗ ಏಕೇಕಿ ಯಾವುದೇ ಯಾವುದೇ ಮುನ್ಸೂಚನೆ ನೀಡದೆ, ಬಾಗಿಲು ಬಂದ್ ಮುಚ್ಚಲಾಗಿದೆ.
ಬಿಬಿಸಿ ಲೈವ್ ರಿಪೋರ್ಟಿಂಗ್ ವೇಳೆ 'ಸೆಕ್ಸಿ ಸೌಂಡ್'
ಸಿಬ್ಬಂದಿಗಳಿಗೆ ನೀಡಬೇಕಾದ ಸಂಬಳ ಹಾಗೂ ಸವಲತ್ತುಗಳನ್ನ ನೀಡದೆ ರಾತ್ರೋ ರಾತ್ರಿ ಬೀಗ ಜಡಿದಿದ್ದಾರೆ. ಇನ್ನೂ ಇಲ್ಲಿರುವ ಸಿಬ್ಬಂದಿಗಳಿಗೆ ಆಗಸ್ಟ್ ತಿಂಗಳ ಸಂಬಳವೂ ಕೂಡ ನೀಡದೆ ವಂಚನೆ ಮಾಡಿದ್ದಾರೆ. ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಚುನಾವಣೆ ಗೋಸ್ಕರ ಈ ಚಾನಲ್ ಅನ್ನ ಬಳಸಿಕೊಂಡು ಪತ್ರಕರ್ತರಿಗೆ ಮೋಸ ಮಾಡಿದ್ದಾರೆ.
ಇನ್ನೂ ಈ ಎಲ್ಲಾ ಅಕ್ರಮ ಹಾಗೂ ಇಲ್ಲಿ ಆಗಿರುವ ಅನ್ಯಾಯದ ಬಗ್ಗೆ ಸಂಸ್ಥೆಯ ಮುಖ್ಯ ಸಂಪಾದಕ ಸಮೀ ಉಲ್ಲಾ ಯಾವುದೇ ಸಿಬ್ಬಂದಿಗಳಿಗೆ ಸ್ಪಂದಿಸುತ್ತಿಲ್ಲ. ಸಂಸ್ಥೆಯ ಸಂಪಾದಕಿ ನಾಝಿಯಾ ಕೌಸರ್ ತಮ್ಮದೇ ಸಮುದಾಯದ ಸಂಸ್ಥೆಯ ಮುಖ್ಯಸ್ಥೆ ಡಾ. ನೌಹೀರಾ ಶೇಖ್ ಪರ ಕಾರ್ಯ ನಿರ್ವಹಿಸುತ್ತಿದ್ದರು.
ಒಟ್ಟಾರೆ, ಐವರಿಂದ ನಮಗೆ ಅನ್ಯಾಯವಾಗಿದೆ ಎಂದು ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಸೆಪ್ಟೆಂಬರ್ 11ರಂದು ದೂರು ದಾಖಲಾಗಿಸಲಾಗಿದೆ. ಇದಲ್ಲದೆ, ಕಾರ್ಮಿಕ ಇಲಾಖೆಗೂ ದೂರು ಸಲ್ಲಿಸಲು ನೊಂದ ಪತ್ರಕರ್ತರು ಮುಂದಾಗಿದ್ದಾರೆ.