Don't Miss!
- News ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ಇಬ್ಬರು ಶಂಕಿತರ ಸುಳಿವು ಕೊಟ್ಟರೆ ₹20 ಲಕ್ಷ ಬಹುಮಾನ
- Sports RCB VS KKR: ಟಾಸ್ ಗೆದ್ದ ಕೆಕೆಆರ್ ಫೀಲ್ಡೀಂಗ್ ಆಯ್ಕೆ: ಆರ್ಸಿಬಿ ತಂಡದಲ್ಲಿ ಇಲ್ಲ ಬದಲಾವಣೆ
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೊನೆಗೂ ಪೊಲೀಸ್ ಆಗೆ ಬಿಟ್ಟಳು ಮಗಳು ಜಾನಕಿ: ಬರಲಿದೆ ಹೊಸ ಅಧ್ಯಾಯ
ಕನ್ನಡ ಕಿರುತೆರೆ ಲೋಕದಲ್ಲಿ ಸಿಕ್ಕಪಟ್ಟೆ ಚರ್ಚೆಯಾಗುತ್ತಿರುವ ಧಾರಾವಾಹಿ ಮಗಳು ಜಾನಕಿ. ಟಿ ಎನ್ ಸೀತಾರಾಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಮಗಳು ಜಾನಕಿ' ಧಾರಾವಾಹಿ ಈಗ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಟಿ ಎನ್ ಸೀತರಾಮ್ ಧಾರಾವಾಹಿಗಳೆಂದರೆ ಕುತೂಹಲ ಹೆಚ್ಚಾಗಿರುತ್ತೆ, ಪ್ರೇಕ್ಷಕರನ್ನು ಚಿಂತೆಗೆ ಹಚ್ಚುವಂತೆ ಇರುತ್ತೆ.
ಸದ್ಯ ಮಗಳು ಜಾನಕಿ ಧಾರಾವಾಹಿ ಕುತೂಹಲದ ಉತ್ತುಂಗಕ್ಕೆ ಬಂದು ನಿಂತಿದೆ. ಮಗಳು ಜಾನಕಿ ಧಾರಾವಾಹಿಗೆ ದೊಡ್ಡ ತಿರುವು ಪಡೆದುಕೊಳ್ಳುತ್ತಿದೆ. ಜಾನಕಿ ಖಾಕಿ ತೊಟ್ಟು ಖದರ್ ತೋರಿಸುವ ಕಾಲ ಸಮೀಪ ಬಂದಿದೆ. ಸಿ ಎಸ್ ಪಿ ಮಗಳು ಯಾವಾಗ ಪೊಲೀಸ್ ಆಗುತ್ತಾಳೆ ಎನ್ನುವುದು ಪ್ರೇಕ್ಷಕರ ಕಾಡುತ್ತಿದ್ದ ದೊಡ್ಡ ಪ್ರಶ್ನೆಯಾಗಿತ್ತು. ಆದ್ರೀಗ ಜಾನಕಿಯನ್ನು ಪೊಲೀಸ್ ಪಾತ್ರದಲ್ಲಿ ನೋಡುವ ಸಮಯ ಬಂದಿದೆ.
ಸಿ ಎಸ್ ಪಿ ಮಗ ಮಧುಕರ ಮನೆ ಬಿಟ್ಟು ಹೋಗುವ ನಿರ್ಧಾರ ಮಾಡಿದ್ದಾನೆ. ಮತ್ತೊಂದೆಡೆ ಜಾನಕಿ ಪೊಲೀಸ್ ಅಧಿಕಾರಿಯಾಗಲು ತಯಾರಿ ನಡೆಸುತ್ತಿದ್ದಾರೆ, ಜಾನಕಿ ಪತಿ ನಿರಂಜನ್ ಹೊಸ ಬ್ಯುಸಿನೆಸ್ ಶುರು ಮಾಡಲು ಸಜ್ಜಾಗುತ್ತಿದ್ದಾರೆ. ಇದರ ನಡುವೆ ಜಾನಕಿ ಪೊಲೀಸ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಮುಂದೆ ಓದಿ..
ಖಾಕಿ ಧರಿಸಿ ಎಂಟ್ರಿ ಕೊಟ್ಟ ಮಗಳು ಜಾನಕಿ
ಈ ಮೊದಲು ಅಂದ್ರೆ ಧಾರಾವಾಹಿ ಪ್ರಾರಂಭದಲ್ಲಿ ಜಾನಕಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪ್ರೋಮೊ ಅನ್ನು ಪ್ರಸಾರ ಮಾಡಲಾಗಿತ್ತು. ಆ ನಂತರ ಕತೆ ಏನೇನೊ ತಿರುವುಗಳನ್ನು ಪಡೆದು ಮುನ್ನುಗ್ಗುತ್ತಿತ್ತು. ಇದನ್ನ ಕಂಡ ಪ್ರೇಕ್ಷಕರು ಸಿ ಎಸ್ ಪಿ ಮಗಳು ಪೊಲೀಸ್ ಆಗುತ್ತಾಳಾ ಎನ್ನುವ ಚರ್ಚೆ ಪ್ರಾರಂಭವಾಗಿತ್ತು. ಆದ್ರೀಗ ಜಾನಕಿ ದಿಢೀರನೆ ಪೊಲೀಸ್ ಆಗಿ ಎಂಟ್ರಿ ಕೊಟ್ಟಿದ್ದಾರೆ.
ಬುಲೆಟ್ ಏರಿ ಬಂದ ಜಾನಕಿ
ಇಷ್ಟು ದಿನ ಜಾನಕಿ ಸೀರೆ ತೊಟ್ಟು ಪಕ್ಕಾ ಗೃಹಿಣಿಯಾಗಿ, ಅಳುಮುಂಜಿ ಜಾನಕಿಯಾಗಿ ಕಾಣಿಸಿಕೊಳ್ಳುತ್ತಿದ್ದರು. ಆದ್ರೀಗ ಜಾನಕಿ ಬದಲಾಗಿದ್ದಾರೆ. ಜಾನಕಿ ಲೆವೆಲ್ ಬದಲಾಗಿದೆ, ಜಾನಕಿ ಈಗ ಐ ಪಿ ಎಸ್ ಅಧಿಕಾರಿಯಾಗಿ ಎಂಟ್ರಿ ಕೊಡಲಿದ್ದಾರೆ. ಬುಲೆಟ್ ಏರಿ ಬರುವ ಜಾನಕಿ ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಜಾನಕಿ ಕನಸು ನನಸಾಗುವ ಸಮಯ ಹತ್ತಿರ ಬಂದಿದೆ.
ಸೋಮವಾರದಿಂದ ಹೊಸ ಅಧ್ಯಾಯ ಪ್ರಾರಂಭ
ಮುಂದಿನ ಸೋಮವಾರದಿಂದ ಮಗಳು ಜಾನಕಿ ಧಾರಾವಾಹಿಯ ಹೊಸ ಅಧ್ಯಾಯ ಪ್ರಾರಂಭವಾಗಲಿದೆ. ಸದ್ಯ ಜಾನಕಿ ಪೊಲೀಸ್ ಅಧಿಕಾರಿಯಾಗಲು ತಯಾರಿ ಮಾಡುತ್ತಿದ್ದಾರೆ. ಜಾನಕಿಯ ತಯಾರಿ ನೋಡಿ ಪ್ರೇಕ್ಷಕರು ಅಚ್ಚರಿ ಪಟ್ಟುಕೊಳ್ಳುತ್ತಿದ್ದಾರೆ. ಸದ್ಯ ಪೊಲೀಸ್ ತಯಾರಿಯಲ್ಲಿರುವ ಜಾನಕಿ ಐ ಪಿ ಎಸ್ ಆಗಲು ಇನ್ನು ಕೆಲವು ದಿನಗಳು ಬೇಕಾಗುತ್ತಂತೆ. ಆದ್ರೆ ಈಗಲೆ ಭರ್ಜರಿ ತಯಾರಿಯಲ್ಲಿದ್ದಾರೆ ಜಾನಕಿ.
ಅಪ್ಪ ಭಾರ್ಗಿ ವಿರುದ್ಧ ತಿರುಗಿ ನಿಲ್ಲುತ್ತಾಳಾ ಜಾನಕಿ
ಮಗಳು ಪೊಲೀಸ್ ಅಧಿಕಾರಿಯಾಗುತ್ತಿದ್ದಾಳೆ ಅಂದ್ರೆ ಎಂತಾ ಅಪ್ಪನಿಗಾದ್ರು ಹೆಮ್ಮೆ ಎನಿಸುತ್ತೆ. ಆದ್ರೆ ಜಾನಕಿ ಪೊಲೀಸ್ ಆಗುವುದನ್ನ ನೋಡಲು ಭಾರ್ಗಿ ಕೈಯಲ್ಲಿ ಸಾದ್ಯವಾಗುತ್ತಿಲ್ಲ. ಭಾರ್ಗಿಯ ಅವ್ಯವಹಾರ, ಮೋಸ, ವಂಚನೆ ಮಗಳಿಗೆ ಗೊತ್ತಾಗುತ್ತೆ ಎನ್ನುವ ಭಯದಲ್ಲಿದ್ದಾರೆ ಭಾರ್ಗಿ. ಹೇಗಾದರು ಮಾಡಿ ಮಗಳು ಪೊಲೀಸ್ ಆಗುವುದನ್ನ ತಡೆಯಬೇಕೆಂದು ಸಂಚು ರೂಪಿಸುತ್ತಿದ್ದಾರೆ ಅಪ್ಪ ಚಂದು ಭಾರ್ಗಿ. ಆದ್ರೆ ಅದನ್ನೆಲ್ಲ ಮೀರಿ ಮಗಳು ಪೊಲೀಸ್ ಆಗಿ ಎಂಟ್ರಿ ಕೊಡುತ್ತಾಳೆ.
ನಿರಂಜನ್, ಮಧುಕರ, ಚಂಚಲ ಕತೆ
ಜಾನಕಿಗೆ ಪತಿ ನಿರಂಜನ್ ಮೇಲೆ ಪ್ರೀತಿ ಪ್ರಾರಂಭವಾಗಿದೆ. ನಿರಂಜನ್ ಸದ್ಯ ಹೊಸ ಬ್ಯುಸಿನೆಸ್ ಮಾಡಲು ಮುಂದಾಗಿದ್ದಾರೆ. ಮತ್ತೊಂದೆಡೆ ಸಿ ಎಸ್ ಪಿ ಮುದ್ದಿನ ಮಗ ಮಧುಕರ್ ಮನೆ ಬಿಟ್ಟುಹೋಗುವ ನಿರ್ಧಾರ ಮಾಡಿದ್ದಾರೆ. ಚಂಚಲ ಹೋಮ್ ಮಿನಿಸ್ಟರ್ ಮಗ ಚಿರಂತನ್ ಚೌಧರಿ ಯನ್ನು ಪ್ರೀತಿಸುತ್ತಿದ್ದಾರೆ. ಇದೆಲ್ಲ ಯಾವ ಹಂತಕ್ಕೆ ಬಂದು ನಿಲ್ಲುತ್ತದೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿದೆ.