Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತೆಲುಗು ಬಿಗ್ಬಾಸ್ ಆಯೋಜಕರ ಮೇಲೆ ಮತ್ತೊಂದು ಗಂಭೀರ ಆರೋಪ
ತೆಲುಗು ಬಿಗ್ಬಾಸ್ ಒಳ್ಳೆಯ ಟಿಆರ್ಪಿ ಯನ್ನೇ ಕಲೆಹಾಕುತ್ತಿದೆ. ಆದರೆ ಬಿಗ್ಬಾಸ್ ಆಯೋಜಕರ ಮೇಲೆ ಅನುಮಾನ ಹುಟ್ಟುವಂತೆ ಆರೋಪಗಳೂ ಸಹ ಕೇಳಿಬರುತ್ತಿವೆ.
ಕೆಲವು ದಿನಗಳ ಹಿಂದಷ್ಟೆ ಬಿಗ್ಬಾಸ್ ನಿಂದ ಹೊರಬಂದ ಸ್ಪರ್ಧಿ ಕರಾಟೆ ಕಲ್ಯಾಣಿ, ಬಿಗ್ಬಾಸ್ ಆಯೋಜಕರು ಎಲಿಮಿನೇಶನ್ ಅನ್ನು ಪಾರದರ್ಶಕವಾಗಿ, ನ್ಯಾಯಯುತವಾಗಿ ಮಾಡುತ್ತಿಲ್ಲ ಎಂದು ಆರೋಪ ಮಾಡಿದ್ದರು. ಈಗ ಮತ್ತೊಂದು ಆರೋಪವನ್ನು ಮತ್ತೊಬ್ಬ ಸ್ಪರ್ಧಿ ಮಾಡಿದ್ದಾರೆ.
ಶಿರಾ ಉಪಚುನಾವಣೆ ಕಣಕ್ಕೆ ಧುಮುಕಲಿದ್ದಾರೆ ಬಿಗ್ಬಾಸ್ ಮಾಜಿ ಸ್ಪರ್ಧಿ
ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದ ನಟಿ ಸ್ವಾತಿ ದೀಕ್ಷಿತ್, ಹೋದಷ್ಟೇ ಬೇಗ ಬಿಗ್ಬಾಸ್ ಮನೆಯಿಂದ ಹೊರಬಂದರು. ಆದರೆ ಹೊರಗೆ ಬಂದ ನಂತರ ಬಿಗ್ಬಾಸ್ ಮತ್ತು ನಾಗಾರ್ಜುನ ವಿರುದ್ಧ ಆರೋಪ ಮಾಡಿದ್ದಾರೆ.
ನಾನು ಒಳಗೆ ಹೋದಾಗ ಚೆನ್ನಾಗಿಯೇ ಆಟವಾಡಿದ್ದೆ, ಚೆನ್ನಾಗಿಯೇ ಪ್ರದರ್ಶನ ನೀಡಿದ್ದೆ. ಆದರೆ ನಾನು ಚೆನ್ನಾಗಿ ಆಡಿದ ಭಾಗಗಳನ್ನು ಆಯೋಜಕರು ಅಳಿಸಿ ಹಾಕಿ ಉಳಿದ ದೃಶ್ಯಗಳನ್ನಷ್ಟೆ ಪ್ರಸಾರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ ಸ್ವಾತಿ ದೀಕ್ಷಿತ್.
ತೆಲುಗು ಬಿಗ್ಬಾಸ್: ಸ್ಪರ್ಧಿಯೊಬ್ಬರ ಅಪಹರಣ, ಮನೆಯೊಳಗೆ ಸಖತ್ ಹೈಡ್ರಾಮಾ
'ಜನರಿಗೆ ಚೆನ್ನಾಗಿ ಮನರಂಜಿಸದಿದ್ದರೆ ಜನರು ಮತ ಹಾಕುವುದಿಲ್ಲ, ಸ್ವಾತಿ ಗೆ ಆದ ಗತಿಯೇ ನಿಮಗೂ ಆಗುತ್ತದೆ' ಎಂದು ನಾಗಾರ್ಜುನ ಎಪಿಸೋಡ್ನಲ್ಲಿ ಹೇಳಿದ್ದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸ್ವಾತಿ, ಹೊರಬಂದ ಆಟಗಾರರ ಬಗ್ಗೆ ನಾಗಾರ್ಜುನ ಹಾಗೆ ಹೇಳುವುದು ತರವಲ್ಲ, ನಾನು ಪೂರ್ಣ ಪರಿಶ್ರಮ ಹಾಕಿಯೇ ಆಟವಾಡಿದ್ದೆ' ಎಂದಿದ್ದಾರೆ.