Don't Miss!
- News ಬೆಂಗಳೂರಿನಲ್ಲಿ ಮೋದಿ ಮತಬೇಟೆ; ರಾಜ್ಯಕ್ಕೆ ಪ್ರಧಾನಿ ಮೋದಿಯ ಕೊಡುಗೆ ಏನಿದೆ?: ಡಾ.ಜಿ ಪರಮೇಶ್ವರ್
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Technology ನಿಮ್ಮ ಬಳಿ ರೆಡ್ಮಿಯ ಈ ಫೋನ್ ಇದ್ರೆ, ಇಲ್ಲಿದೆ ನಿಮಗೆ ಗುಡ್ನ್ಯೂಸ್!
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಗ್ಬಾಸ್: ಯಾರು ಎಷ್ಟು ಪಡೆದರು-ಯಾರಿಗೆ ಒಲಿಯಿತು ಅದೃಷ್ಟ?
ತೆಲುಗು ಬಿಗ್ಬಾಸ್ 4 ನಿನ್ನೆಯಷ್ಟೆ ಮುಗಿದಿದೆ. ಎಲ್ಲರ ನಿರೀಕ್ಷೆಯಂತೆ ಅಭಿಜಿತ್ ದುದ್ದಲ ಬಿಗ್ಬಾಸ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. 25 ಲಕ್ಷ ಬಹುಮಾನದ ಮೊತ್ತ ಮತ್ತು ಟ್ರೋಫಿಯನ್ನು ಮನೆಗೊಯ್ದಿದ್ದಾರೆ.
ಆದರೆ ಬಿಗ್ಬಾಸ್ ನಲ್ಲಿ ಗೆದ್ದವರು ಮಾತ್ರವೇ ಹಣ ಗಳಿಸುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವುದೇ. ಅಂತಿಮ ಹಂತದ ವರೆಗೆ ಬಂದವರಿಗೆ, ಹಲವು ಬಹುಮಾನಗಳು, ನಿರೂಪಕರಿಂದ ಖಾಸಗಿ ಬಹುಮಾನಗಳು ಪ್ರಾಪ್ತಿಯಾಗುತ್ತವೆ.
ತೆಲುಗು ಬಿಗ್ಬಾಸ್ ಗೆದ್ದ ಅಭಿಜೀತ್ಗೆ ಬಹುಮಾನಕ್ಕಿಂತ ಸಂಭಾವನೆಯೇ ಹೆಚ್ಚು!
ನಿನ್ನೆಯ ತೆಲುಗು ಬಿಗ್ಬಾಸ್ 4 ಫೈನಲ್ನಲ್ಲಿ ಹೀಗೆಯೇ ಆಗಿದೆ. ಅಭಿಜಿತ್ ಬಿಗ್ಬಾಸ್ 4 ನ ವಿನ್ನರ್ ಆದರು. ಆದರೆ ಇನ್ನೂ ಕೆಲವರಿಗೆ ಕೆಲವು ಬಹುಮಾನಗಳು ದೊರೆತವು. ಕೆಲವರ ಅದೃಷ್ಟ ನಿನ್ನೆಯ ಬಿಗ್ಬಾಸ್ ಫೈನಲ್ ವೇದಿಕೆ ಮೇಲೆ ಬದಲಾಯಿತು.
ಬಿಗ್ ಬಾಸ್ 4: ವಿಜೇತ ಸ್ಪರ್ಧಿಗಿಂತ ಹೆಚ್ಚು ಗಳಿಸಿದ್ದಾನೆ ಈ ಸ್ಪರ್ಧಿ
ಅಂತಿಮ ಹಂತದಲ್ಲಿ ಬಿಗ್ಬಾಸ್ ಮನೆಯಲ್ಲಿ ನಾಲ್ಕು ಮಂದಿ ಉಳಿದಿದ್ದರು. ಅಭಿಜಿತ್ ದುದ್ದಲ, ಶೋಹೆಲ್, ಮೆಹಬೂಬ್, ಅಖಿಲ್, ದೇವಿ.
25+10 ಲಕ್ಷ ಹಣ, ಸಿನಿಮಾದಲ್ಲಿ ಅವಕಾಶ
25 ಲಕ್ಷ ಪಡೆದು ಆಟವನ್ನು ಕ್ವಿಟ್ ಮಾಡಿದರು ಸೋಹೆಲ್. ವಿಶೇಷವೆಂದರೆ ಅವರಿಗೆ ನಾಗಾರ್ಜುನ ಪ್ರತ್ಯೇಕವಾಗಿ 10 ಲಕ್ಷ ಹಣ ಹಾಗೂ ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ಹೇಳಿದರು. ಅಷ್ಟೇ ಅಲ್ಲದೆ, ಚಿರಂಜೀವಿ ಸ್ವತಃ ನಾನೇ ನಿನ್ನ ಸಿನಿಮಾದ ಕಾರ್ಯಕ್ರಮಕ್ಕೆ ಬರುತ್ತೇನೆ ಎಂದು ಪ್ರಮಾಣ ಮಾಡಿದರು.
ಮೆಹಬೂಬ್ಗೆ 10 ಲಕ್ಷ
ಸ್ಪರ್ಧಿ ಮೆಹಬೂಬ್ಗೆ ನಟ ಚಿರಂಜೀವಿ 10 ಲಕ್ಷ ಹಣ ನೀಡುವುದಾಗಿ ವೇದಿಕೆ ಮೇಲೆ ಘೋಷಿಸಿದರು. ಖಾಲಿ ಕೈಯಲ್ಲಿ ಮರಳುತ್ತಿದ್ದ ಮೆಹಬೂಬ್ಗೆ ಇದು ಸಮಾಧಾನಕರ ಬಹುಮಾನದಂತೆ ಒದಗಿಬಂತು.
ದೇವಿಗೆ ಚಿರಂಜೀವಿ ಸಿನಿಮಾದಲ್ಲಿ ಅವಕಾಶ
ಇನ್ನು ದೇವಿಗೆ ಚಿರಂಜೀವಿ ದೊಡ್ಡ ಆಫರ್ ಅನ್ನೇ ನೀಡಿಬಿಟ್ಟರು. ದೇವಿಗೆ ತಮ್ಮ ಸಿನಿಮಾದಲ್ಲಿ ನಟಿಸುವ ಅವಕಾಶ ಕೊಟ್ಟರು ಚಿರಂಜೀವಿ. ದೇವಿ, ಚಿರಂಜೀವಿ ಅವರ ಮುಂದಿನ ಸಿನಿಮಾದಲ್ಲಿ ಅವರೊಟ್ಟಿಗೆ ನಟಿಸಲಿದ್ದಾರೆ.
Recommended Video
ಅಖಿಲ್ ಗೆ ಏನೂ ಸಿಗಲಿಲ್ಲ!
ರನ್ನರ್ ಅಫ್ ಆದ ಅಖಿಲ್ ಗೆ ಏನೂ ಸಿಗಲಿಲ್ಲ. ಅವರಿಗೆ ಪ್ರತ್ಯೇಕವಾಗಿ ಹಣ ಸಿಗಲಿಲ್ಲ. ಅಥವಾ ಸಿನಿಮಾದಲ್ಲಿ ಅವಕಾಶಗಳು ಸಹ ಸಿಗಲಿಲ್ಲ. ಈ ಬಗ್ಗೆ ಮೀಮ್ಗಳು ಹರಿದಾಡುತ್ತಿವೆ.