twitter
    For Quick Alerts
    ALLOW NOTIFICATIONS  
    For Daily Alerts

    ಜೀ ಕನ್ನಡಕ್ಕೆ ಕಾಲಿಟ್ಟ ಬಿಜಾಪುರದ ಆನೆ

    |

    ''ಆನೆ ಬಂತೊಂದ್ ಆನೆ... ಯಾವ್ ಊರ್ ಆನೆ.. ಬಿಜಾಪುರದ್ ಆನೆ..

    ಇಲ್ಲಿಗ್ ಯಾಕೆ ಬಂತು..

    ರಾವಣನ ಕಥೆ ಹೇಳಕ್ಕೆ ಬಂತು..''

    ಸುದೀಪ್ ಧ್ವನಿಯಲ್ಲಿ ಈ ಡೈಲಾಗ್ ಕೇಳುವ ಮಜವೇ ಬೇರೆ. ಈ ಖದರ್ ಡೈಲಾಗ್ ಮೂಲಕ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಸಿ‌ನಿಮಾ 'ದಿ ವಿಲನ್'. ಆದರೆ, ಈ ಚಿತ್ರದ ಬಿಡುಗಡೆ ಬಳಿಕ ಆಗಿದೆ ಬೇರೆ ಬಿಡಿ.

     'ದಿ ವಿಲನ್' ವಿಮರ್ಶೆ: ರಾಮನಾಗಿ ಪ್ರೀತಿಸು, ರಾವಣನಾಗಿ ಯೋಚಿಸು! 'ದಿ ವಿಲನ್' ವಿಮರ್ಶೆ: ರಾಮನಾಗಿ ಪ್ರೀತಿಸು, ರಾವಣನಾಗಿ ಯೋಚಿಸು!

    ನಟ ಶಿವರಾಜ್ ಕುಮಾರ್ ಹಾಗೂ ಸುದೀಪ್ ಮೊದಲ ಬಾರಿಗೆ ಒಟ್ಟಾಗಿ ನಟಿಸಿದ್ದ 'ದಿ ವಿಲನ್' ಚಿತ್ರ ಈಗ ಕಿರುತೆರೆಗೆ ಕಾಲಿಟ್ಟಿದೆ. ಮೊಟ್ಟ ಮೊದಲ ಬಾರಿಗೆ ಟಿವಿಯಲ್ಲಿ ಈ ಸಿನಿಮಾ ಬರುತ್ತಿದೆ.

    the villain movie will be telecasting in zee kannada soon

    ಜೀ ಕನ್ನಡ ವಾಹಿನಿಯಲ್ಲಿ ಈ ಸಿನಿಮಾ ಪ್ರಸಾರ ಆಗಲಿದ್ದು, ಪ್ರೊಮೋವನ್ನು ಹಂಚಿಕೊಳ್ಳಲಾಗಿದೆ. ಈ ಮೂಲಕ ಶೀಘ್ರದಲ್ಲೇ ಸಿನಿಮಾ ಪ್ರಸಾರ ಆಗುತ್ತಿದೆ ಎಂದು ತಿಳಿಸಲಾಗಿದೆ.

    ಅಂದಹಾಗೆ, ದಿ ವಿಲನ್ ಚಿತ್ರವನ್ನ ಪ್ರೇಮ್ ನಿರ್ದೇಶನ ಮಾಡಿದ್ದರು. ಆಮಿ ಜಾಕ್ಸನ್ ಈ ಸಿನಿಮಾದ ಮೂಲಕ ಕನ್ನಡಕ್ಕೆ ಕಾಲಿಟ್ಟಿದ್ದರು. ಬಾಕ್ಸ್ ಆಫೀಸ್ ನಲ್ಲಿ ಸಾಧಾರಣ ಗಳಿಕೆ ಮಾಡಿದರೂ ಸಿನಿಮಾ ಜನರ ಮನ ಗೆಲ್ಲಲಿಲ್ಲ. ಹೊಗಳಕೆಗಿಂತ ಟೀಕೆಗಳೆ ಚಿತ್ರಕ್ಕೆ ಜಾಸ್ತಿ ಬಂತು.

    English summary
    Kannada actor Shivaraj Kumar and Sudeep's The Villain movie will be telecasting in zee kannada soon.
    Wednesday, January 23, 2019, 13:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X