Don't Miss!
- News ಬಿಎಂಟಿಸಿ & ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ದಿಢೀರ್ ಹೆಚ್ಚಳಕ್ಕೆ ಕಾರಣ ಏನು?-ಇಲ್ಲಿದೆ ಮಾಹಿತಿ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ಎಲ್ಲ ಧಾರಾವಾಹಿಗಳ ಕಥೆ ಒಂದೇ ಆಗ್ಬಿಟ್ಟಿದೆ
ಈ ಹಿಂದೆಯಲ್ಲಾ ಬರಿ ಹೆಣ್ಣು ಮಕ್ಕಳು ಮಾತ್ರ ಟಿವಿ ಮುಂದೆ ಕೂತು ಸೀರಿಯಲ್ ಗಳನ್ನು ನೋಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಯುವಕ ಯುವತಿಯರು ಧಾರಾವಾಹಿಗಳನ್ನು ಬಿಡದೇ ನೋಡುವಂತಾಗಿದ್ದಾರೆ. ಇದಕ್ಕೆ ಕಾರಣ ಧಾರಾವಾಹಿಗಳ ಗುಣಮಟ್ಟ ಹಾಗೂ ಕಲಾವಿದರು. ಆದರೆ ಸದ್ಯ ಕನ್ನಡ ಕಿರುತೆರೆಯಲ್ಲಿ ಪ್ರಸಾರ ಆಗುತ್ತಿರುವ ಸಾಕಷ್ಟು ಪ್ರಖ್ಯಾತಿ ಪಡೆದುಕೊಂಡಿರುವ ಐದು ಧಾರಾವಾಹಿಗಳ ಕಥೆ ಒಂದೇ ಆಗಿದೆ.
ರೀ ಡೈರೆಕ್ಟರೇ.. ಇವತ್ತಾದ್ರೂ 'ರಾಧಾ ರಮಣ'ನ ಬಾಯಿ ಬಿಡ್ಸಿ, ಒಂದು ಮಾಡ್ಸಿ.. ಪ್ಲೀಸ್.!
ಬೇರೆ ಬೇರೆ ವಾಹಿನಿಯಲ್ಲಿ ಪ್ರಸಾರ ಆದರೂ ಕುಡ ಈ ನಾಲ್ಕು ಸೀರಿಯಲ್ ಕಥೆ ಒಂದೇ ಆಗಿರುವುದು ವಿಚಿತ್ರ. ಇದನ್ನ ನೋಡಿದ ಪ್ರೇಕ್ಷಕರು ಕೂಡ ಕೊಂಚ ಗೊಂದಲದಲ್ಲಿದ್ದಾರೆ. ಹಾಗಾದರೆ ಆ ಧಾರಾವಾಹಿಗಳು ಯಾವುವು? ಎಲ್ಲಾ ಸೀರಿಯಲ್ ಕಥೆ ಒಂದೇ ಆಗಲು ಕಾರಣವೇನು? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ.
'ಮಾಂಗಲ್ಯಂ ತಂತು ನಾನೇನಾ' ಸೀರಿಯಲ್ ನಲ್ಲಿ ಮದುವೆ
ಕಲರ್ ಸೂಪರ್ ನಲ್ಲಿ ಪ್ರಸಾರ ಆಗುತ್ತಿರುವ 'ಮಾಂಗಲ್ಯಂ ತಂತು ನಾನೇನಾ' ಧಾರಾವಾಹಿಯಲ್ಲಿ ಪ್ರಮುಖ ಘಟ್ಟ ತಲುಪಿದೆ. ಸೀರಿಯಲ್ ನಲ್ಲಿ ಸದ್ಯ ಮದುವೆ ಸಂಭ್ರಮ ಮನೆ ಮಾಡಿದೆ. ನಾಯಕ ತೇಜಸ್ವಿ ಹಾಗೂ ನಾಯಕಿ ಶ್ರಾವಣಿಯ ಒಲ್ಲದ ಮನಸ್ಸಿನ ಮದುವೆ ಜೋರಾಗಿ ನಡೆಯುತ್ತಿದೆ.
ಸೀತಾ-ವಲ್ಲಭ ಸೀರಿಯಲ್ ನಲ್ಲಿ ವಿವಾಹ ಸಂಭ್ರಮ
ಕಲರ್ ಕನ್ನಡ ವಾಹಿನಿಯಲ್ಲಿಯೇ ಪ್ರಸಾರ ಆಗುತ್ತಿರುವ 'ಸೀತಾ-ವಲ್ಲಭ' ಧಾರಾವಾಹಿಯಲ್ಲಿಯೂ ಮದುವೆ ಸಂಭ್ರಮ ಜೋರಾಗಿದೆ. ಇಲ್ಲಿಯೂ ನಾಯಕ-ನಾಯಕಿ ಇಷ್ಟವಿಲ್ಲದ ಮನಸ್ಸಿನಲ್ಲಿ ಮನೆಯವರ ಒತ್ತಾಯದ ಮೇರೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
'ಸರ್ವ ಮಂಗಳ ಮಾಂಗಲ್ಯೇ' ಸೀರಿಯಲ್ ನಲ್ಲೂ ಇದೇ
ಬೆಳ್ಳಿ ತೆರೆಯಿಂದ ಕಿರುತೆರೆಗೆ ಮತ್ತೆ ವಾಪಸ್ ಆಗಿ ಅಭಿನಯ ಮಾಡುತ್ತಿರುವ ಧಾರಾವಾಹಿ 'ಸರ್ವ ಮಂಗಳ ಮಾಂಗಲ್ಯೇ'. 'ಸರ್ವ ಮಂಗಳ ಮಾಂಗಲ್ಯೇ' ಸೀರಿಯಲ್ ನಲ್ಲಿಯೂ ಮದುವೆ ನಡೆಯುತ್ತಿದೆ. ಇಲ್ಲಿಯೂ ನಾಯಕ-ನಾಯಕಿ ಮುನಿಸಿನಲ್ಲಿಯೇ ಮದುವೆ ಆಗಿದ್ದಾರೆ.
ಜೀ ಕನ್ನಡದಲ್ಲಿ 'ಗಂಗಾ' ಮದುವೆ
ಜೀ ವಾಹಿನಿಯಲ್ಲಿ ಸಾಕಷ್ಟು ದಿನಗಳಿಂದ ಪ್ರಸಾರ ಆಗುತ್ತಿರುವ ಗಂಗಾ ಸೀರಿಯಲ್ ನಲ್ಲಿಯೂ ವಿವಾಹದ ಎಪಿಸೋಡ್ ನಡೆಯುತ್ತಿದೆ. ಗಂಗಾ ಮತ್ತು ಸಾಗರ್ ಮದುವೆ ಸಂಭ್ರಮ ಇನ್ನು ಕೆಲವೇ ದಿನಗಳಲ್ಲಿ ಜೀ ವಾಹಿನಿಯಲ್ಲಿ ಪ್ರಸಾರ ಆಗಲಿದೆ.
ಗೊಂದಲದಲ್ಲೇ ಮುಗಿದೋಯ್ತು ಕೃಷ್ಣವೇಣಿ ಮದುವೆ
ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಮತ್ತೊಂದು ಹೊಸ ಧಾರಾವಾಹಿ 'ಮನೆಯೇ ಮಂತ್ರಾಲಯ' ಈ ಸೀರಿಯಲ್ ನಲ್ಲಿಯೂ ಕೃಷ್ಣವೇಣಿ ಮದುವೆ ಅದ್ದೂರಿಯಾಗಿ ನಡೆಯುತ್ತಿದ್ದು ವಿಚಿತ್ರ ಎಂದರೆ ಇಲ್ಲಿಯೂ ಗೊಂದಲದಲ್ಲಿಯೇ ಮದುವೆ ಸಮಾರಂಭ ನಡೆಯುತ್ತಿದೆ.