twitter
    For Quick Alerts
    ALLOW NOTIFICATIONS  
    For Daily Alerts

    'ಕೋಟ್ಯಧಿಪತಿ'ಯಲ್ಲಿ ಕಮಾಲ್ ಮಾಡಿದ 10ನೇ ಕ್ಲಾಸ್ ಓದಿರುವ ವ್ಯಕ್ತಿ

    By Bharath Kumar
    |

    Recommended Video

    Kannadada kotyadipathi Season 3 : ತಿಮ್ಮಣ್ಣ ಆಟಕ್ಕೆ ಬೆರಗಾದ್ರು ಎಲ್ಲರೂ.! | Filmibeat Kannada

    'ಕನ್ನಡದ ಕೋಟ್ಯಧಿಪತಿ' ಕಾರ್ಯಕ್ರಮದಲ್ಲಿ ಈ ವಾರ ಶಿಕ್ಷಕರ ದಿನಾಚರಣೆಯ ವಿಶೇಷ ಸಂಚಿಕೆ ನಡೆಯುತ್ತಿದೆ. ಈ ಸುತ್ತಿನಲ್ಲಿ ಆಯ್ಕೆಯಾದ ಸ್ಪರ್ಧಿ ತಿಮ್ಮಣ್ಣ. ತಿಮ್ಮಣ್ಣ ಅವರು ಓದಿರುವುದು ಎಸ್ ಎಸ್ ಎಲ್ ಸಿ. ಬಾಗಲಕೋಟೆ ಮೂಲದ ತಿಮ್ಮಣ್ಣ ಅವರು ಸದ್ಯ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯಲ್ಲಿ ಪವರ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಖೋಖೋ ಹೇಳಿಕೊಡುತ್ತಾರೆ.

    ಏನಾದರೂ ಸಾಧಿಸಬೇಕು ಎಂಬ ಛಲ ಹೊಂದಿರುವ ತಿಮ್ಮಣ್ಣ ಅವರಿಗೆ ಎಲ್ಲರ ಮುಂದೆ ಚೆನ್ನಾಗಿರಬೇಕು ಎಂಬ ಆಸೆ. ಹಾಗಾಗಿ 'ನಾನು ಏನು ಎಂಬುದನ್ನ ಪ್ರೂವ್ ಮಾಡುವ ಅವಕಾಶ ಸಿಕ್ಕಿದೆ' ಎಂಬ ಉದ್ದೇಶದಿಂದ ಆಟ ಶುರು ಮಾಡಿದರು.

    ಅವಕಾಶ ಇದ್ದಿದ್ರೆ ರಕ್ಷಿತ್ ಶೆಟ್ಟಿ 'ಕೋಟ್ಯಧಿಪತಿ'ಯಲ್ಲಿ ಹೆಚ್ಚು ಹಣ ಗೆಲ್ತಿದ್ರು.! ಹಾಗಿದ್ರೆ ಎಷ್ಟು ಗೆದ್ರು.?ಅವಕಾಶ ಇದ್ದಿದ್ರೆ ರಕ್ಷಿತ್ ಶೆಟ್ಟಿ 'ಕೋಟ್ಯಧಿಪತಿ'ಯಲ್ಲಿ ಹೆಚ್ಚು ಹಣ ಗೆಲ್ತಿದ್ರು.! ಹಾಗಿದ್ರೆ ಎಷ್ಟು ಗೆದ್ರು.?

    ತಿಮ್ಮಣ್ಣ ಅವರ ಆಟ ಅದ್ಭುತವಾಗಿತ್ತು. ನಿಜಕ್ಕೂ ತಿಮ್ಮಣ್ಣ ಇಷ್ಟರ ಮಟ್ಟಿಗೆ ಆಟವಾಡುತ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಅದನ್ನ ಕಣ್ಣಾರೆ ನೋಡಿ ಪ್ರೇಕ್ಷಕರು ಕೂಡ ಒಂದು ಕ್ಷಣ ಅಚ್ಚರಿಯಾಗಿದ್ದಾರೆ. ಹಾಗಿದ್ರೆ, ಕೋಟ್ಯಧಿಪತಿಯಲ್ಲಿ ತಿಮ್ಮಣ್ಣ ಎಷ್ಟು ಗೆದ್ರು.? ಮುಂದೆ ಓದಿ....

    ಹನ್ನೊಂದನೇ ಪ್ರಶ್ನೆಗೆ ಸರಿ ಉತ್ತರ ನೀಡಿದ ತಿಮ್ಮಣ್ಣ

    ಹನ್ನೊಂದನೇ ಪ್ರಶ್ನೆಗೆ ಸರಿ ಉತ್ತರ ನೀಡಿದ ತಿಮ್ಮಣ್ಣ

    'ಕನ್ನಡದ ಕೋಟ್ಯಧಿಪತಿ'ಯ ಈ ವಾರ ಟೀಚರ್ಸ್ ಡೇ ವಿಶೇಷವಾಗಿ ಹಾಟ್ ಸೀಟ್ ನಲ್ಲಿ ಕೂತ ಸ್ಪರ್ಧಿ ತಿಮ್ಮಣ್ಣ ಅವರು ಮೊದಲ ಹನ್ನೊಂದನೇ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ನೀಡಿ ದೊಡ್ಡ ಮೊತ್ತವನ್ನ ಗೆದ್ದು ಕೊಂಡರು. ಆದ್ರೆ, ಹನ್ನೆರಡನೇ ಪ್ರಶ್ನೆಯಲ್ಲಿ ತಿಮ್ಮಣ್ಣ ಸಂಕಷ್ಟಕ್ಕೆ ಸಿಲುಕಿದರು.

    'ಕೋಟ್ಯಧಿಪತಿ'ಯಲ್ಲಿ ಕೈಗೆ ಬಂದಿದ್ದೆಲ್ಲಾ ಕಳೆದುಕೊಂಡ 'ಪುಟ್ಟಗೌರಿ' ಮಹೇಶ 'ಕೋಟ್ಯಧಿಪತಿ'ಯಲ್ಲಿ ಕೈಗೆ ಬಂದಿದ್ದೆಲ್ಲಾ ಕಳೆದುಕೊಂಡ 'ಪುಟ್ಟಗೌರಿ' ಮಹೇಶ

    ತಿಮ್ಮಣ್ಣಗೆ ಕೈಕೊಟ್ಟ ಪ್ರಶ್ನೆ

    ತಿಮ್ಮಣ್ಣಗೆ ಕೈಕೊಟ್ಟ ಪ್ರಶ್ನೆ

    ಭಾರತದಲ್ಲಿರುವ ಇಲ್ಲಿನ ಯಾವ ಸರೋವರ ಅಂದಾಜು 50 ಸಾವಿರ ವರ್ಷಗಳ ಹಿಂದೆ ಉಲ್ಕೆಯ ಅಪ್ಪಳಿಸುವಿಕೆಯಿಂದ ರೂಪುಗೊಂಡಿತು.?

    A ಪಿಚೋಲಾ ಸರೋವರ

    B ಚಿಲ್ಕಾ ಸರೋವರ

    C ವುಲಾರ್ ಸರೋವರ

    D ಲೋನಾರ್ ಸರೋವರ

    'ಕನ್ನಡದ ಕೋಟ್ಯಧಿಪತಿ'ಯಲ್ಲಿ 1 ಕೋಟಿ ಗೆದ್ದಿದ್ದು ಇವರೊಬ್ಬರೇ.!'ಕನ್ನಡದ ಕೋಟ್ಯಧಿಪತಿ'ಯಲ್ಲಿ 1 ಕೋಟಿ ಗೆದ್ದಿದ್ದು ಇವರೊಬ್ಬರೇ.!

    ಕ್ವೀಟ್ ಮಾಡಿದ ಸ್ಪರ್ಧಿ

    ಕ್ವೀಟ್ ಮಾಡಿದ ಸ್ಪರ್ಧಿ

    ಈ ಪ್ರಶ್ನೆಗೆ ಸರಿಯಾದ ಉತ್ತರ ಗೊತ್ತಾಗದ ಸ್ಪರ್ಧಿ ತಿಮ್ಮಣ್ಣ ಕನ್ನಡದ ಕೋಟ್ಯಧಿಪತಿ ಆಟವನ್ನ ಅರ್ಧಕ್ಕೆ ಕ್ವಿಟ್ ಮಾಡಿದರು. ಇದರ ಪರಿಣಾಮ ಗೆದ್ದಿದ್ದ ಹಣವನ್ನ ಬುದ್ದಿವಂತಿಕೆಯಿಂದ ಉಳಿಸಿಕೊಂಡು ಹೋದರು. ಅಂದ್ಹಾಗೆ, ಮೇಲಿನ ಆ ಪ್ರಶ್ನೆಗೆ ಸರಿ ಉತ್ತರ: D ಲೋನಾರ್ ಸರೋವರ

    25 ಲಕ್ಷ ಗೆಲ್ಲೋಕೆ ಹೋಗಿ ದೊಡ್ಡ ಮೊತ್ತವನ್ನ ಕಳೆದುಕೊಂಡ ಸೋಮಶೇಖರ್25 ಲಕ್ಷ ಗೆಲ್ಲೋಕೆ ಹೋಗಿ ದೊಡ್ಡ ಮೊತ್ತವನ್ನ ಕಳೆದುಕೊಂಡ ಸೋಮಶೇಖರ್

    6.40 ಲಕ್ಷ ಉಳಿಸಿಕೊಂಡ ತಿಮ್ಮಣ್ಣ

    6.40 ಲಕ್ಷ ಉಳಿಸಿಕೊಂಡ ತಿಮ್ಮಣ್ಣ

    ಒಂದು ವೇಳೆ ಆಟವನ್ನ ಮುಂದುವರಿಸಿದ್ದರೇ, ಸರಿ ಉತ್ತರ ನೀಡಲೇಬೇಕಾಗಿತ್ತು. ಸರಿ ಉತ್ತರ ಕೊಟ್ಟರೇ 12.5 ಲಕ್ಷ ಗೆಲ್ಲುತ್ತಿದ್ದರು. ಅದೇ ತಪ್ಪು ಉತ್ತರ ಕೊಟ್ಟಿದ್ದರೇ 3.20 ಲಕ್ಷಕ್ಕೆ ಜಾರುತ್ತಿದ್ದರು. ಅವರ ಬಳಿ ಯಾವುದೇ ಲೈಫ್ ಲೈನ್ ಇರಲಿಲ್ಲ. ಕೊನೆಗೂ ಯೋಚನೆ ಮಾಡಿದ ತಿಮ್ಮಣ್ಣ ಅವರು ಆಟವನ್ನ ಕ್ವಿಟ್ ಮಾಡಿ 6.40 ಲಕ್ಷವನ್ನ ಉಳಿಸಿಕೊಂಡರು.

    English summary
    'Kannadada Kotyadhipathi season 3' contestant thimmanna has won 6 lakh 40 thousand rupees.
    Friday, September 7, 2018, 13:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X