Don't Miss!
- News ರಜನಿಕಾಂತ್, ವಿಜಯ್ ಸೇತುಪಥಿ, ಧನುಷ್.. ಯಾರೆಲ್ಲಾ ವೋಟ್ ಹಾಕಿದ್ರು?
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Automobiles Elevate: ಶ್ರೀಸಾಮಾನ್ಯನ ಬಿಎಂಡಬ್ಲ್ಯೂ.. ಹೋಂಡಾ ಎಲಿವೇಟ್ ಖರೀದಿಸಬೇಕೇ? ಆನ್-ರೋಡ್ ಬೆಲೆ ಎಷ್ಟು, EMI ಏನು?
- Finance ಆಪ್ ಸ್ಟೋರ್ನಿಂದ ವಾಟ್ಸಾಪ್, ಥ್ರೆಡ್ ತೆಗೆದುಹಾಕಿದ ಆಪಲ್!
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Technology Google Maps: ಗೂಗಲ್ ಮ್ಯಾಪ್ಸ್ ನಲ್ಲಿ ಹೊಸ ಸೌಲಭ್ಯ! ಹತ್ತಿರದ EV ಚಾರ್ಜಿಂಗ್ ಸ್ಟೇಷನ್ ಸರ್ಚ್ ಬಲು ಸುಲಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹುಟ್ಟಿದಾಗಿನಿಂದ ಜನರ ಪ್ರೀತಿ ನೋಡಿರುವ ನನಗೆ ವಿವಾದ ಯಾಕೆ ಬೇಕು: ಪುನೀತ್
ಸಿನಿಮಾ.. ಚಿತ್ರರಂಗ ಅಂದ್ಮೇಲೆ ಗಾಸಿಪ್, ವಿವಾದ ಸರ್ವೇ ಸಾಮಾನ್ಯ. ಸದಾ ಸುದ್ದಿಯಲ್ಲಿ ಇರಬೇಕು ಅಂದ್ರೆ ಬ್ಯಾಕ್ ಟು ಬ್ಯಾಕ್ ಹಿಟ್ಸ್ ಕೊಡ್ತಾ ಇರಬೇಕು. ಸಿನಿಮಾ ಮಾಡುತ್ತಲೇ ಇರಬೇಕು. ಹೀಗಾಗಲಿಲ್ಲ ಅಂದಾಗ ಕೆಲವರು ವಿವಾದಗಳನ್ನ ಮೈ ಮೇಲೆ ಎಳೆದುಕೊಳ್ತಾರೆ.
ಪ್ರಚಾರಕ್ಕಾಗಿ ಹಲವರು ವಿವಾದಗಳನ್ನು ಸೃಷ್ಟಿ ಮಾಡ್ತಾರೆ. ಸೋಷಿಯಲ್ ಮೀಡಿಯಾ ಮುಂಚೂಣಿಗೆ ಬಂದ ಮೇಲಂತೂ ಅಭಿಮಾನಿಗಳ ನಡುವೆ ಆಗಾಗ ಬೆಂಕಿ ಬೀಳುತ್ತಲೇ ಇರುತ್ತೆ. ಫೇಸ್ ಬುಕ್ ಮತ್ತು ಟ್ವಿಟ್ಟರ್ ಆಗಾಗ ಫ್ಯಾನ್ಸ್ ವಾರ್ ಗಳಿಗೆ ಸಾಕ್ಷಿ ಆಗ್ತಿರುತ್ತೆ.
Recommended Video
ಇಷ್ಟೆಲ್ಲ ಇರುವಾಗ ಸೈಲೆಂಟ್ ಆಗಿ ತೆರೆಗೆ ಬಂದು ಬಾಕ್ಸ್ ಆಫೀಸ್ ಉಡೀಸ್ ಮಾಡುವವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಹಾಗ್ನೋಡಿದ್ರೆ, ಅಪ್ಪು ಆಗಲಿ, ಅಣ್ಣಾವ್ರ ಕುಟುಂಬದವರಾಗಲಿ ವಿವಾದಗಳಿಗೆ ಸಿಲುಕಿದ್ದು ಕಮ್ಮಿ.
ಸ್ಟಾರ್ ಗಿರಿ ನಡುವೆ ವಿವಾದಗಳನ್ನು ಮ್ಯಾನೇಜ್ ಮಾಡುವುದು ಹೇಗೆ ಎಂಬ ಪ್ರಶ್ನೆಗೆ ಪುನೀತ್ ರಾಜ್ ಕುಮಾರ್ 'ಕನ್ನಡದ ಕೋಟ್ಯಧಿಪತಿ' ವೇದಿಕೆಯಲ್ಲಿ ಉತ್ತರ ಕೊಟ್ಟಿದ್ದಾರೆ. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...
ಪುನೀತ್ ಗೆ ಎದುರಾದ ಪ್ರಶ್ನೆ
''ನಮ್ಮಲ್ಲಿ ಹಲವು ನಾಯಕ ನಟರು ಇದ್ದಾರೆ. ಅವರಿಗೆ ಅಗಾಧವಾದ ಫ್ಯಾನ್ ಫಾಲೋವಿಂಗ್ ಇದೆ. ಈ ಮಧ್ಯೆ ಹಗ್ಗ-ಜಗ್ಗಾಟ, ಫ್ಯಾನ್ಸ್ ವಾರ್ ನಡೆಯುತ್ತಲೇ ಇರುತ್ತದೆ. ಆದ್ರೆ ನೀವು ಮಾತ್ರ ಯಾವುದೇ ಫ್ಯಾನ್ಸ್ ವಾರ್ ನಲ್ಲಿ ವಿವಾದಕ್ಕೀಡಾಗಿಲ್ಲ. ವಿವಾದ ಮಾಡಿಕೊಳ್ಳದೇ ನಿಭಾಯಿಸುವುದು ಹೇಗೆ.?'' ಎಂದು 'ಕನ್ನಡದ ಕೋಟ್ಯಧಿಪತಿ'ಯ ಹಾಟ್ ಸೀಟ್ ನಲ್ಲಿ ಕೂತ ಪ್ರದೀಪ್ ಎಂಬುವರು ಪುನೀತ್ ರಾಜ್ ಕುಮಾರ್ ಗೆ ಕೇಳಿದರು.
'ನಾನು ತುಂಬಾ ತಪ್ಪುಗಳನ್ನು ಮಾಡಿದ್ದೀನಿ ಕ್ಷಮಿಸಿ': ಪೊಲೀಸರ ಬಳಿ ಕ್ಷಮೆ ಕೇಳಿದ ಅಪ್ಪು
ಪುನೀತ್ ಕೊಟ್ಟ ಉತ್ತರ ಏನು.?
''ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಅವರವರ ಖುಷಿಗೆ ಏನೇನೋ ಹಾಕಿಕೊಳ್ಳುತ್ತಿರುತ್ತಾರೆ. ಈ ಜನರ ಪ್ರೀತಿ, ಜಯಕಾರವನ್ನೆಲ್ಲ ನಾನು ಹುಟ್ಟಿದಾಗಿನಿಂದ ನನ್ನ ತಂದೆಯವರಿಂದ ನೋಡಿಕೊಂಡು ಬಂದಿದ್ದೇನೆ. ಐವತ್ತು ವರ್ಷಗಳಿಂದ ಜನ ನಮ್ಮ ಮೇಲೆ ಪ್ರೀತಿ ವಿಶ್ವಾಸ ತೋರಿಸಿಕೊಂಡು ನಮ್ಮನ್ನ ಬೆಳೆಸಿದ್ದಾರೆ. ಜನರ ಪ್ರೀತಿ ಇರುವಾಗ ನಾವ್ಯಾಕೆ ಕಾಂಟ್ರವರ್ಸಿ ಮಾಡಿಕೊಳ್ಳಬೇಕು.? ವಿವಾದ ನಮಗೆ ಬೇಡದೇ ಇರುವಂಥದ್ದು'' ಎಂದಿದ್ದಾರೆ ನಟ ಪುನೀತ್ ರಾಜ್ ಕುಮಾರ್
ಕೋಟ್ಯಧಿಪತಿಯಲ್ಲಿ ಬಿಗ್ ಟ್ವಿಸ್ಟ್: ಪವರ್ ಸ್ಟಾರ್ ಜಾಗಕ್ಕೆ ಹೊಸ ನಿರೂಪಕಿ
ಯಾರು ಈ ಪ್ರದೀಪ್.?
ತಿಪಟೂರು ಮೂಲದ 24 ವರ್ಷದ ಪ್ರದೀಪ್ ಗೆ ಶೇ.90 ರಷ್ಟು ಕಣ್ಣು ಕಾಣುವುದಿಲ್ಲ. ಹೀಗಿದ್ದರೂ, ಛಲದಿಂದ ಎಂ.ಎ ಮುಗಿಸಿದ್ದಾರೆ ಪ್ರದೀಪ್.
ಪ್ರದೀಪ್ ಗೆದ್ದಿದ್ದು ಎಷ್ಟು.?
'ಕನ್ನಡದ ಕೋಟ್ಯಧಿಪತಿ' ಕಾರ್ಯಕ್ರಮದಲ್ಲಿ ಪ್ರದೀಪ್ 3,20,000 ರೂಪಾಯಿಗಳನ್ನು ಗೆದ್ದರು. 6,40,000 ರೂಪಾಯಿಯ ಪ್ರಶ್ನೆಗೆ ತಪ್ಪಾಗಿ ಉತ್ತರ ಕೊಟ್ಟ ಪ್ರದೀಪ್ 3,20,000 ರೂಪಾಯಿಯನ್ನು ಪಡೆದರು.
ಚಿತ್ರಕೃಪೆ: ಕಲರ್ಸ್ ಕನ್ನಡ/ವೂಟ್