Don't Miss!
- Lifestyle ಬಾಯಿ ರುಚಿಗೆ ಗರಿ ಗರಿ ನಿಪ್ಪಟ್ಟು..! ಮನೆಯಲ್ಲೇ ಮಾಡಿ ಟೆಸ್ಟಿ ತಿಂಡಿ
- Automobiles Kia: ಬ್ರೇಕ್ ಇಲ್ಲದ ಟ್ರಕ್ನಂತೆ ಮುನ್ನುಗ್ಗುತ್ತಿದೆ ಕಿಯಾ: ಈಗ ಸಣ್ಣ ಪಟ್ಟಣಗಳಲ್ಲೂ ಸಿಗಲಿದೆ!
- Sports RCB vs KKR: ಯಶ್ ಮೇಲೆ 'ದಯೆ' ತೋರುತ್ತಾರಾ ರಿಂಕು ಸಿಂಗ್?; ಜಿದ್ದು ತೀರಿಸಿಕೊಳ್ತಾರಾ ಆರ್ಸಿಬಿ ವೇಗಿ?
- Technology ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಡೀಪ್ಫೇಕ್ ದೊಡ್ಡ ಕಳವಳಕಾರಿ ಎಂದ ಮೋದಿ
- News ಚಿತ್ರದುರ್ಗದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ: ಅಭ್ಯರ್ಥಿ ಬದಲಿಸದಿದ್ದರೆ ಪಕ್ಷೇತರ ಸ್ಪರ್ಧೆ, ಏ.3ಕ್ಕೆ ನಾಮಪತ್ರ ಸಲ್ಲಿಕೆ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೋಗಿ ಬಾ ಜಾನಕಿ: 'ಮಗಳು ಜಾನಕಿ'ಗೆ ಭಾವುಕ ವಿದಾಯ ಹೇಳಿದ ಟಿಎನ್ ಸೀತಾರಾಮ್
ಕಿರುತೆರೆ ಪ್ರಿಯರ ನೆಚ್ಚಿನ ಧಾರಾವಾಹಿ 'ಮಗಳು ಜಾನಕಿ'ಯ ಪ್ರಸಾರ ಶುಕ್ರವಾರ (ಜೂನ್ 12) ಕೊನೆಯಾಗುತ್ತಿದೆ. ಟಿ.ಎನ್. ಸೀತಾರಾಮ್ ನಿರ್ದೇಶನದ ಈ ಧಾರಾವಾಹಿಯನ್ನು ವೀಕ್ಷಕರು ತಮ್ಮದೇ ಮನೆಯ ಕಥೆಯೆಂಬಂತೆ ನೋಡಿದ್ದರು. ಕೌಟುಂಬಿಕ ಕಲಹದ ಧಾರಾವಾಹಿಗಳ ನಡುವೆ ಮಧ್ಯಮ ವರ್ಗದ ಕುಟುಂಬದ ಕಥೆಯುಳ್ಳ 'ಮಗಳು ಜಾನಕಿ' ಜನರಿಗೆ ಹೆಚ್ಚು ಆಪ್ತವಾಗಿತ್ತು.
Recommended Video
'ಮಗಳು ಜಾನಕಿ' ಪ್ರಸಾರವಾಗುತ್ತಿರುವ ಖಾಸಗಿ ವಾಹಿನಿ ನಷ್ಟದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುತ್ತಿದೆ. ಇಲ್ಲಿ ಹೊಸ ಕಾರ್ಯಕ್ರಮಗಳು ಕೂಡ ಪ್ರಸಾರವಾಗುತ್ತಿರಲಿಲ್ಲ. ಲಾಕ್ ಡೌನ್ ಅವಧಿ ಮುಗಿಯುವ ಮೊದಲೇ 'ಮಗಳು ಜಾನಕಿ'ಯ ಅಂತ್ಯ ಬಹಿರಂಗವಾಗಿತ್ತು. ಮೊದಲೇ ಚಿತ್ರೀಕರಣ ನಡೆಸಿದ್ದ ಕಂತುಗಳ ಪ್ರಸಾರ ಪೂರ್ಣಗೊಂಡಿದ್ದು, ಮಗಳು ಜಾನಕಿ ಅಕಾಲಿಕ ಅಂತ್ಯಗೊಳ್ಳುತ್ತಿದೆ. ಮುಂದೆ ಓದಿ...
ಕೊನೆಯ ಕಂತು ಪ್ರಸಾರ
'ಮಗಳು ಜಾನಕಿ'ಯ ಕೊನೆಯ ಕಂತು ಶುಕ್ರವಾರ ಪ್ರಸಾರವಾಗಲಿದ್ದು, ಅದನ್ನು ನಿರ್ದೇಶಕ ಟಿಎನ್ ಸೀತಾರಾಮ್ ಅತ್ಯಂತ ಭಾವುಕರಾಗಿ ಒಂದೇ ಸಾಲಿನಲ್ಲಿ ತಿಳಿಸಿದ್ದಾರೆ. ಅವರ ಪದಗಳೇ ಅದರ ಹಿಂದಿನ ನೋವನ್ನು ಹೇಳುತ್ತಿರುವಂತಿದೆ.
'ಮಗಳು ಜಾನಕಿ' ಧಾರಾವಾಹಿ ಅಂತ್ಯಕ್ಕೆ ಕಾರಣವೇನು?: ಟಿಎನ್ ಸೀತಾರಾಮ್ ನೀಡಿದ ಸ್ಪಷ್ಟನೆ
ಹೋಗಿ ಬಾ ಜಾನಕಿ
ತಮ್ಮ ಆಪ್ತರಾದವರಿಗೆ ಅಂತಿಮ ವಿದಾಯ ಹೇಳುವಂತೆ ಸೀತಾರಾಮ್ 'ಮಗಳು ಜಾನಕಿ'ಗೂ ಹೇಳಿದ್ದಾರೆ. 'ಹೋಗಿ ಬಾ ಜಾನಕಿ' ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಅವರ ಪೋಸ್ಟ್ಗೆ ಕೆಲವೇ ನಿಮಿಷಗಳಲ್ಲಿ ನೂರಾರು ಮಂದಿ ಕಾಮೆಂಟ್ ಮಾಡಿದ್ದು, ತಮ್ಮ ಬೇಸರ ಹಂಚಿಕೊಂಡಿದ್ದಾರೆ.
ಬರಹ ರೂಪದಲ್ಲಿ ಕಥೆ ನೀಡಿ
ಖಾಸಗಿ ವಾಹಿನಿಯ ಇನ್ನೊಂದು ಚಾನೆಲ್ನಲ್ಲಿ ಧಾರಾವಾಹಿ ಪ್ರಸಾರ ಮಾಡುತ್ತಾರೆ ಎಂದು ಅನೇಕರು ನಿರೀಕ್ಷಿಸಿದ್ದರು. ಆದರೆ ವಿವಿಧ ಕಾರಣಗಳಿಂದ ಧಾರಾವಾಹಿಯನ್ನು ಇನ್ನೊಂದು ಚಾನೆಲ್ಗೆ ಶಿಫ್ಟ್ ಮಾಡುವಂತಿಲ್ಲ. ಚಾನೆಲ್ ಸ್ಥಗಿತಗೊಳ್ಳುತ್ತಿರುವುದರಿಂದ ಮಗಳು ಧಾರಾವಾಹಿಯನ್ನು ಅರ್ಧದಲ್ಲಿಯೇ ಸ್ಥಗಿತಗೊಳಿಸುವುದು ಅನಿವಾರ್ಯವಾಗಿದೆ. ಹೀಗಾಗಿ ಹೊಸ ಧಾರಾವಾಹಿ ಪ್ರಾರಂಭಿಸಿ ಈ ಕಥೆಯನ್ನು ಮುಂದುವರಿಸಿ ಎಂದು ಅನೇಕರು ಸಲಹೆ ನೀಡಿದ್ದಾರೆ. ಇನ್ನು ಕೆಲವರು ಉಳಿದ ಕಥೆಯನ್ನು ಬರಹದ ರೂಪದಲ್ಲಿಯಾದರೂ ನೀಡಿ ಎಂದು ಮನವಿ ಮಾಡಿದ್ದಾರೆ.
'ಮಗಳು ಜಾನಕಿ' ಧಾರಾವಾಹಿ ಅಕಾಲಿಕ ಅಂತ್ಯ: ಸೀತಾರಾಮ್ ಹೇಳುವುದೇನು?
ಹೊಸ ಧಾರಾವಾಹಿ ಮಾಡುತ್ತಾರಾ?
'ಮಗಳು ಜಾನಕಿ'ಯ ಬಗ್ಗೆ ಅಭಿಮಾನ ಹೊಂದಿದ್ದ ಅನೇಕರು ಸೀತಾರಾಮ್ ಅವರಿಗೆ ಮತ್ತೊಂದು ಧಾರಾವಾಹಿ ಆರಂಭಿಸುವಂತೆ ಮನವಿ ಮಾಡುತ್ತಿದ್ದಾರೆ. ಸೀತಾರಾಮ್ ಕೂಡ ಹೊಸ ಧಾರಾವಾಹಿಯ ಬಗ್ಗೆ ಗಮನ ಹರಿಸುವ ಸುಳಿವು ನೀಡಿದ್ದಾರೆ.