twitter
    For Quick Alerts
    ALLOW NOTIFICATIONS  
    For Daily Alerts

    ಹೋಗಿ ಬಾ ಜಾನಕಿ: 'ಮಗಳು ಜಾನಕಿ'ಗೆ ಭಾವುಕ ವಿದಾಯ ಹೇಳಿದ ಟಿಎನ್ ಸೀತಾರಾಮ್

    |

    ಕಿರುತೆರೆ ಪ್ರಿಯರ ನೆಚ್ಚಿನ ಧಾರಾವಾಹಿ 'ಮಗಳು ಜಾನಕಿ'ಯ ಪ್ರಸಾರ ಶುಕ್ರವಾರ (ಜೂನ್ 12) ಕೊನೆಯಾಗುತ್ತಿದೆ. ಟಿ.ಎನ್. ಸೀತಾರಾಮ್ ನಿರ್ದೇಶನದ ಈ ಧಾರಾವಾಹಿಯನ್ನು ವೀಕ್ಷಕರು ತಮ್ಮದೇ ಮನೆಯ ಕಥೆಯೆಂಬಂತೆ ನೋಡಿದ್ದರು. ಕೌಟುಂಬಿಕ ಕಲಹದ ಧಾರಾವಾಹಿಗಳ ನಡುವೆ ಮಧ್ಯಮ ವರ್ಗದ ಕುಟುಂಬದ ಕಥೆಯುಳ್ಳ 'ಮಗಳು ಜಾನಕಿ' ಜನರಿಗೆ ಹೆಚ್ಚು ಆಪ್ತವಾಗಿತ್ತು.

    Recommended Video

    ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡ ದುನಿಯಾ ವಿಜಯ್ | Duniya vijay | Huccha Venkat

    'ಮಗಳು ಜಾನಕಿ' ಪ್ರಸಾರವಾಗುತ್ತಿರುವ ಖಾಸಗಿ ವಾಹಿನಿ ನಷ್ಟದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುತ್ತಿದೆ. ಇಲ್ಲಿ ಹೊಸ ಕಾರ್ಯಕ್ರಮಗಳು ಕೂಡ ಪ್ರಸಾರವಾಗುತ್ತಿರಲಿಲ್ಲ. ಲಾಕ್ ಡೌನ್ ಅವಧಿ ಮುಗಿಯುವ ಮೊದಲೇ 'ಮಗಳು ಜಾನಕಿ'ಯ ಅಂತ್ಯ ಬಹಿರಂಗವಾಗಿತ್ತು. ಮೊದಲೇ ಚಿತ್ರೀಕರಣ ನಡೆಸಿದ್ದ ಕಂತುಗಳ ಪ್ರಸಾರ ಪೂರ್ಣಗೊಂಡಿದ್ದು, ಮಗಳು ಜಾನಕಿ ಅಕಾಲಿಕ ಅಂತ್ಯಗೊಳ್ಳುತ್ತಿದೆ. ಮುಂದೆ ಓದಿ...

    ಕೊನೆಯ ಕಂತು ಪ್ರಸಾರ

    ಕೊನೆಯ ಕಂತು ಪ್ರಸಾರ

    'ಮಗಳು ಜಾನಕಿ'ಯ ಕೊನೆಯ ಕಂತು ಶುಕ್ರವಾರ ಪ್ರಸಾರವಾಗಲಿದ್ದು, ಅದನ್ನು ನಿರ್ದೇಶಕ ಟಿಎನ್ ಸೀತಾರಾಮ್ ಅತ್ಯಂತ ಭಾವುಕರಾಗಿ ಒಂದೇ ಸಾಲಿನಲ್ಲಿ ತಿಳಿಸಿದ್ದಾರೆ. ಅವರ ಪದಗಳೇ ಅದರ ಹಿಂದಿನ ನೋವನ್ನು ಹೇಳುತ್ತಿರುವಂತಿದೆ.

    'ಮಗಳು ಜಾನಕಿ' ಧಾರಾವಾಹಿ ಅಂತ್ಯಕ್ಕೆ ಕಾರಣವೇನು?: ಟಿಎನ್ ಸೀತಾರಾಮ್ ನೀಡಿದ ಸ್ಪಷ್ಟನೆ'ಮಗಳು ಜಾನಕಿ' ಧಾರಾವಾಹಿ ಅಂತ್ಯಕ್ಕೆ ಕಾರಣವೇನು?: ಟಿಎನ್ ಸೀತಾರಾಮ್ ನೀಡಿದ ಸ್ಪಷ್ಟನೆ

    ಹೋಗಿ ಬಾ ಜಾನಕಿ

    ಹೋಗಿ ಬಾ ಜಾನಕಿ

    ತಮ್ಮ ಆಪ್ತರಾದವರಿಗೆ ಅಂತಿಮ ವಿದಾಯ ಹೇಳುವಂತೆ ಸೀತಾರಾಮ್ 'ಮಗಳು ಜಾನಕಿ'ಗೂ ಹೇಳಿದ್ದಾರೆ. 'ಹೋಗಿ ಬಾ ಜಾನಕಿ' ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಅವರ ಪೋಸ್ಟ್‌ಗೆ ಕೆಲವೇ ನಿಮಿಷಗಳಲ್ಲಿ ನೂರಾರು ಮಂದಿ ಕಾಮೆಂಟ್ ಮಾಡಿದ್ದು, ತಮ್ಮ ಬೇಸರ ಹಂಚಿಕೊಂಡಿದ್ದಾರೆ.

    ಬರಹ ರೂಪದಲ್ಲಿ ಕಥೆ ನೀಡಿ

    ಬರಹ ರೂಪದಲ್ಲಿ ಕಥೆ ನೀಡಿ

    ಖಾಸಗಿ ವಾಹಿನಿಯ ಇನ್ನೊಂದು ಚಾನೆಲ್‌ನಲ್ಲಿ ಧಾರಾವಾಹಿ ಪ್ರಸಾರ ಮಾಡುತ್ತಾರೆ ಎಂದು ಅನೇಕರು ನಿರೀಕ್ಷಿಸಿದ್ದರು. ಆದರೆ ವಿವಿಧ ಕಾರಣಗಳಿಂದ ಧಾರಾವಾಹಿಯನ್ನು ಇನ್ನೊಂದು ಚಾನೆಲ್‌ಗೆ ಶಿಫ್ಟ್ ಮಾಡುವಂತಿಲ್ಲ. ಚಾನೆಲ್ ಸ್ಥಗಿತಗೊಳ್ಳುತ್ತಿರುವುದರಿಂದ ಮಗಳು ಧಾರಾವಾಹಿಯನ್ನು ಅರ್ಧದಲ್ಲಿಯೇ ಸ್ಥಗಿತಗೊಳಿಸುವುದು ಅನಿವಾರ್ಯವಾಗಿದೆ. ಹೀಗಾಗಿ ಹೊಸ ಧಾರಾವಾಹಿ ಪ್ರಾರಂಭಿಸಿ ಈ ಕಥೆಯನ್ನು ಮುಂದುವರಿಸಿ ಎಂದು ಅನೇಕರು ಸಲಹೆ ನೀಡಿದ್ದಾರೆ. ಇನ್ನು ಕೆಲವರು ಉಳಿದ ಕಥೆಯನ್ನು ಬರಹದ ರೂಪದಲ್ಲಿಯಾದರೂ ನೀಡಿ ಎಂದು ಮನವಿ ಮಾಡಿದ್ದಾರೆ.

    'ಮಗಳು ಜಾನಕಿ' ಧಾರಾವಾಹಿ ಅಕಾಲಿಕ ಅಂತ್ಯ: ಸೀತಾರಾಮ್ ಹೇಳುವುದೇನು?'ಮಗಳು ಜಾನಕಿ' ಧಾರಾವಾಹಿ ಅಕಾಲಿಕ ಅಂತ್ಯ: ಸೀತಾರಾಮ್ ಹೇಳುವುದೇನು?

    ಹೊಸ ಧಾರಾವಾಹಿ ಮಾಡುತ್ತಾರಾ?

    ಹೊಸ ಧಾರಾವಾಹಿ ಮಾಡುತ್ತಾರಾ?

    'ಮಗಳು ಜಾನಕಿ'ಯ ಬಗ್ಗೆ ಅಭಿಮಾನ ಹೊಂದಿದ್ದ ಅನೇಕರು ಸೀತಾರಾಮ್ ಅವರಿಗೆ ಮತ್ತೊಂದು ಧಾರಾವಾಹಿ ಆರಂಭಿಸುವಂತೆ ಮನವಿ ಮಾಡುತ್ತಿದ್ದಾರೆ. ಸೀತಾರಾಮ್ ಕೂಡ ಹೊಸ ಧಾರಾವಾಹಿಯ ಬಗ್ಗೆ ಗಮನ ಹರಿಸುವ ಸುಳಿವು ನೀಡಿದ್ದಾರೆ.

    ಕಿರುತೆರೆಯ ಮೇಲೆ ಕೊರೊನಾ ಎಫೆಕ್ಟ್: ನಿರ್ದೇಶಕ ಸೀತಾರಾಮ್ ವಿಶ್ಲೇ‍ಷಣೆಕಿರುತೆರೆಯ ಮೇಲೆ ಕೊರೊನಾ ಎಫೆಕ್ಟ್: ನಿರ್ದೇಶಕ ಸೀತಾರಾಮ್ ವಿಶ್ಲೇ‍ಷಣೆ

    English summary
    Kannada serial Magalu Janaki will telecast its last episode on Friday, director TN Seetharam posted an emotional bid adieu on social media.
    Friday, June 12, 2020, 17:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X