Just In
Don't Miss!
- Automobiles
ಅಮೆರಿಕಾ ಅಧ್ಯಕ್ಷರು ಪ್ರಯಾಣಿಸುವ ವಿಮಾನದ ಬಗೆಗಿನ ರೋಚಕ ಸಂಗತಿಗಳಿವು
- Lifestyle
ಎಷ್ಟೇ ಪ್ರಯತ್ನಿಸಿದರೂ ಸೊಂಟದ ಬೊಜ್ಜು ಕರಗದಿರಲು ಇದೇ ಕಾರಣ
- News
ರಾಮ ಮಂದಿರ ನಿರ್ಮಾಣಕ್ಕೆ 1 ಕೋಟಿ ರು ದೇಣಿಗೆ ನೀಡಿದ ಗೌತಮ್ ಗಂಭೀರ್
- Sports
ಏರ್ಪೋರ್ಟ್ನಿಂದ ನೇರವಾಗಿ ತಂದೆಯ ಸಮಾಧಿ ಬಳಿ ತೆರಳಿದ ವೇಗಿ ಸಿರಾಜ್
- Finance
ರಿಲಯನ್ಸ್ ಇಂಡಸ್ಟ್ರೀಸ್- ಫ್ಯೂಚರ್ ಸಮೂಹದ ವ್ಯವಹಾರಕ್ಕೆ ಸೆಬಿ ಸಮ್ಮತಿ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಾಧಕರ ಕುರ್ಚಿ ಮೇಲೆ ಹಿರಿಯ ನಿರ್ದೇಶಕ ನಾಗಾಭರಣ
ಕನ್ನಡ ಹಿರಿಯ ನಿರ್ದೇಶಕ ಟಿ ಎಸ್ ನಾಗಾಭರಣ ಈಗ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಅತಿಥಿಯಾಗಿದ್ದಾರೆ. ಸಾಧಕರ ಕುರ್ಚಿ ಮೇಲೆ ಕುಳಿತ ಅವರ ಫೋಟೋವನ್ನು ಪುತ್ರ ಪನ್ನಗ ಭರಣ ಹಂಚಿಕೊಂಡಿದ್ದಾರೆ.
ಕನ್ನಡ ಚಿತ್ರರಂಗ, ಕನ್ನಡ ಕಿರುತೆರೆ ಹಾಗೂ ಕನ್ನಡ ರಂಗಭೂಮಿಗೆ ದೊಡ್ಡ ಕೊಡುಗೆ ನೀಡುರುವ ಇವರನ್ನು ಸಾಧಕರ ಕುರ್ಚಿ ಮೇಲೆ ಕೂರಿಸಿ ಗೌರವ ನೀಡಲಾಗಿದೆ. ಅನೇಕರಿಗೆ ತಿಳಿಯದ ನಾಗಾಭರಣ ಅವರ ಜೀವದ ವಿಚಾರಗಳು ಈ ಕಾರ್ಯಕ್ರಮದಲ್ಲಿ ಹೊರ ಬರಲಿದೆ.
ಕೊನೆಗೂ ಸಾಧಕರ ಕುರ್ಚಿಯಲ್ಲಿ ಕುಳಿತ ಇನ್ಫೋಸಿಸ್ ನಾರಾಯಣ ಮೂರ್ತಿ ದಂಪತಿ
ನಾಗಾಭರಣ ಈವರೆಗೆ ಸುಮಾರು 34 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಇವುಗಳಲ್ಲಿ 19ಕ್ಕೂ ಹೆಚ್ಚು ಸಿನಿಮಾಗಳಿಗೆ ಪ್ರತಿಷ್ಠಿತ ಪ್ರಶಸ್ತಿಗಳು ಬಂದಿವೆ. ವಿವಿಧ ವಿಭಾಗದಲ್ಲಿ 15 ಚಿತ್ರಗಳಿಗೆ ರಾಜ್ಯ ಹಾಗೂ 8 ರಾಷ್ಟ್ರ ಪ್ರಶಸ್ತಿ ಲಭಿಸಿದೆ.
ಕಳೆದ 40 ವರ್ಷಗಳಿಂದ ನಾಗಾಭರಣ ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಗ್ರಹಣ, ಆಕಸ್ಮಿಕ, ಅನ್ವೇಷಣೆ, ಜನುಮದ ಜೋಡಿ, ಮೈಸೂರು ಮಲ್ಲಿಗೆ, ಚಿನ್ನಾರಿ ಮುತ್ತ, ನಾಗಮಂಡಲ, ಚಿಗುರಿದ ಕನಸು ಅವರ ನಿರ್ದೇಶನದ ಬೆಸ್ಟ್ ಸಿನಿಮಾಗಳಾಗಿವೆ.
ಈ ವಾರ 'ವೀಕೆಂಡ್ ವಿತ್ ರಮೇಶ್' ಪ್ರಸಾರ ಆಗೋಲ್ಲ
ಬೆನಕ ಎಂಬ ತಮ್ಮ ರಂಗ ತಂಡದ ಮೂಲಕ ಸಾಕಷ್ಟು ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ. ರಾಷ್ಟ್ರೀಯ ವಾಹಿನಿ ಹಾಗೂ ಪ್ರಾದೇಶಿಕ ವಾಹಿನಿಗಳಿಗೆ ಕೆಲವು ಧಾರಾವಾಹಿಗಳನ್ನು ಮಾಡಿದ್ದಾರೆ.
ಇಷ್ಟೊಂದು ಸಾಧನೆ ಮಾಡಿರುವ ಇದರ ಕಥೆ ವೀಕೆಂಡ್ ಕಾರ್ಯಕ್ರಮದಲ್ಲಿ ಪ್ರಸಾರ ಆಗುತ್ತಿದೆ. ಜೂನ್ 8 ರಂದು ಇವರ ಸಂಚಿಕೆ ಪ್ರಸಾರ ಆಗುವ ಸಾಧ್ಯತೆ ಇದೆ.