Don't Miss!
- Automobiles ಶಿಯೋಮಿಯ ಈ ಎಲೆಕ್ಟ್ರಿಕ್ ಕಾರು ಸ್ಮಾರ್ಟ್ಫೋನ್ಗಳಂತೆ ಅಗ್ಗದ ಬೆಲೆ: ರೇಂಜ್ ಕೇಳಿದ್ರೆ ತಲೆ ತಿರುಗುತ್ತೆ!
- News Rameshwar Cafe: ರಾಮೇಶ್ವರ ಕೆಫೆ ಬಾಂಬ್ ಸ್ಪೋಟ ಪ್ರಕರಣ: ದಾಳಿಗೆ ಸಹಾಯ ಮಾಡಿದ ವ್ಯಕ್ತಿ ಬಂಧನ- ತೀರ್ಥಹಳ್ಳಿ ಉಗ್ರನೊಂದಿಗೆ ಸಂಪರ್
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Lifestyle 2024: ಮದುವೆ, ಗಾಡಿ ಖರೀದಿ, ಗೃಹ ಪ್ರವೇಶ ಹೀಗೆ ಶುಭ ಕಾರ್ಯಕ್ಕೆ ಏಪ್ರಿಲ್ನಲ್ಲಿರುವ ಶುಭ ದಿನಾಂಕಗಳಿವು
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Technology iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬದುಕಿನ ಎಪಿಸೋಡ್ ಮುಗಿಸಿದ ಪ್ರಶಾಂತ್ ಹಾಲ್ದೊಡ್ಡೇರಿ
ಜೀ ಕನ್ನಡ ವಾಹಿನಿಯ 'ರಾಧಾ ಕಲ್ಯಾಣ' ಧಾರಾವಾಹಿಯ ನಿರ್ದೇಶಕರೂ ಆಗಿದ್ದರು ಪ್ರಶಾಂತ್ ಹಾಲ್ದೊಡ್ಡೇರಿ. ಖ್ಯಾತ ನಾಟಕಕಾರ, ಟಿವಿ ಧಾರಾವಾಹಿಗಳ ನಿರ್ದೇಶಕ ಟಿ.ಎನ್.ಸೀತಾರಾಂ ಅವರ ಭೂಮಿಕಾ ತಂಡದ ಸದಸ್ಯರೂ ಆಗಿದ್ದರು.
ಅವರ ಹಠಾತ್ ನಿಧನಕ್ಕೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಅವರ ಅಭಿಮಾನಿಗಳು, ಹಿತೈಶಿಗಳು ಹಾಗೂ ಸ್ನೇಹಿತರು ಕಂಬನಿ ಗರೆದಿದ್ದಾರೆ.
ಅವರ ನಿಧನದ ಬಗ್ಗೆ ಅವರ ಆತ್ಮೀಯ ಗೆಳೆಯ ಹಾಗೂ ನಟ, ನಿರ್ದೇಶಕ, ರಂಗ ಕಲಾವಿದ ಬಿ ಸುರೇಶ್ ಅವರು ಕಂಬನಿ ಮಿಡಿದಿದ್ದು, ನನ್ನ ಆತ್ಮೀಯ ಗೆಳೆಯನೊಬ್ಬನನ್ನು ಕಳೆದುಕೊಂಡ ಸಂಕಟವೊಂದು ಕಾಡುತ್ತಿದೆ ಎಂದಿದ್ದಾರೆ.
ತುಮಕೂರು ಜಿಲ್ಲೆಯ ಸಿರಾ ತಾಲ್ಲೂಕಿನಲ್ಲಿರುವ ಪುಟ್ಟ ಗ್ರಾಮ ಹಾಲ್ದೊಡ್ಡೇರಿ ಗ್ರಾಮದ ವಂಶಸ್ಥರಾದ ಪ್ರಶಾಂತ್ ಹಾಲ್ದೊಡ್ಡೇರಿ ಅವರು ಪತ್ನಿ ಸುಷ್ಮಾ ಪ್ರಶಾಂತ್ ಹಾಗೂ ಪುತ್ರನನ್ನು ಅಗಲಿದ್ದಾರೆ. ಪ್ರಶಾಂತ್ ಹಾಲ್ದೊಡ್ಡೇರಿ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬಕ್ಕೆ ದೇವರು ನೀಡಲಿ ಎಂದು ಒನ್ಇಂಡಿಯಾ ಕನ್ನಡ ಬಳಗ ಪ್ರಾರ್ಥಿಸುತ್ತದೆ.
ಪ್ರಶಾಂತ್ ಹಾಲ್ದೊಡ್ಡೇರಿ ಅವರ ಅಗಲಿಕೆಯ ನೋವನ್ನು ಅವರ ಬಾಳಸಂಗಾತಿ ಸುಷ್ಮಾ ಅವರು ಫೇಸ್ ಬುಕ್ ನಲ್ಲಿ ತೋಡಿಕೊಂಡಿದ್ದು, ಓದುತ್ತಿದ್ದರೆ ನಿಜಕ್ಕೂ ಹೃದಯತುಂಬಿ ಬರುತ್ತದೆ...
"ನನ್ನ
ಇನಿಯ
ಇನ್ನಿಲ್ಲ.
ನನ್ನನ್ನು
ಒಬ್ಬೊಂಟಿಯಾಗೂ
ಬಿಟ್ಟಿಲ್ಲ
ಮಡಿಲಲ್ಲಿ
ಅವನದೇ
ತದ್ರೂಪು
ಮಗನನ್ನು
ಜೊತೆ
ಮಾಡಿ
ಹೋಗಿದ್ದಾನೆ.
ಹೋಗಿದ್ದಾನೆ?
ಇಲ್ಲ
ನನ್ನ
ನೆನಪಿನಂಗಳದಲ್ಲಿ
ನನ್ನ
ಮನದಲ್ಲಿ
ಸದಾ
ಮುಗುಳ್ನಗುತ್ತ
ನನ್ನಲ್ಲಿ
ಚೈತನ್ಯ
ತುಂಬುತ್ತಿರುತ್ತಾನೆ
ನನ್ನ
ಇನಿಯ
ಇನ್ನಿಲ್ಲ
ಮನೆಯಲ್ಲಿ,
ಇರುವನು
ಸದಾ
ನನ್ನ
ಮನದಲ್ಲಿ"
ವಿಧಿವಶರಾದ ತಾರೆಗಳು: ಕನ್ನಡ ನಟ ದಿಲೀಪ್ ವಿಧಿವಶ | ಹಾಸ್ಯ ನಟ ಕರಿಬಸವಯ್ಯ ಇನ್ನಿಲ್ಲ | ಎಂ ಎಸ್ ಕಾರಂತ್ ಇನ್ನು ನೆನಪು ಮಾತ್ರ