Just In
- 3 min ago
200 ಕೋಟಿ ಕ್ಲಬ್ ಸೇರಿದ 'ಮಾಸ್ಟರ್': ದಾಖಲೆ ಬರೆದ ದಳಪತಿ ವಿಜಯ್
- 13 min ago
ಕೊರೊನಾ ನಡುವೆಯೂ 100 ಕೆಜಿ ಕೇಕ್ ಕತ್ತರಿಸಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಸಂಭ್ರಮಿಸಿದ ನಿಖಿಲ್
- 44 min ago
ಟೀಸರ್ ಬಿಡುಗಡೆ: ನಿಖಿಲ್ ಹುಟ್ಟುಹಬ್ಬಕ್ಕೆ ಬಂದ 'ರೈಡರ್'
- 46 min ago
ರಿಕ್ಕಿ ಚಿತ್ರಕ್ಕೆ 5 ವರ್ಷ: ಚೊಚ್ಚಲ ಸಿನಿಮಾಗೆ ಬೆನ್ನುತಟ್ಟಿದ ಪ್ರೇಕ್ಷಕ ಪ್ರಭುಗಳಿಗೆ ಧನ್ಯವಾದ
Don't Miss!
- News
ಶಿವಮೊಗ್ಗ ಸ್ಪೋಟ ಪ್ರಕರಣ: ಮೃತರ ಕುಟುಂಬಕ್ಕೆ ಪರಿಹಾರ ಘೊಷಣೆ ಮಾಡಿದ ಸಿಎಂ ಯಡಿಯೂರಪ್ಪ!
- Automobiles
ಸೀಟ್ ಬೆಲ್ಟ್ ಧರಿಸುವುದರ ಮಹತ್ವ ವಿವರಿಸಿದ ಪೊಲೀಸ್ ಅಧಿಕಾರಿ
- Sports
ಪೂಜಾರ ನಿಜವಾಗಿಯೂ ಸೈನಿಕನಂತೆ ಹೋರಾಡಿದ್ದರು: ಶಾರ್ದೂಲ್ ಠಾಕೂರ್
- Finance
ಗಿರಗಿಟ್ಲೆಯಾದ ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್; $ 30 ಸಾವಿರದ ಕೆಳಗೆ ವಹಿವಾಟು
- Education
Karnataka State Police Recruitment 2021: 545 ಸಬ್-ಇನ್ಸ್ ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಫಟಾಫಟ್ ಅಂತ ರೆಡಿಯಾಗುತ್ತೆ ಈ ಸಬ್ಬಕ್ಕಿ ವಡೆ...
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅವಳಿ-ಜವಳಿ ಆಯುಷಿ-ಖುಷಿಯಿಂದ 'ಅಗ್ನಿಸಾಕ್ಷಿ'ಗೆ ಹೊಸ ತಿರುವು
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ 'ಅಗ್ನಿಸಾಕ್ಷಿ' ಕೂಡ ಒಂದು. ಸದಾ ಒಂದಲ್ಲೊಂದು ಕುತೂಹಲ ಸೃಷ್ಟಿಸುತ್ತಲೇ ಸಾಗುತ್ತಿರುವ 'ಅಗ್ನಿಸಾಕ್ಷಿ' ಧಾರಾವಾಹಿಗೆ ಈಗ ಹೊಸ ತಿರುವು ಸಿಕ್ಕಿದೆ.
ವರ್ಷಗಟ್ಟಲೆ ಕಾಣಿಸಿಕೊಳ್ಳದ ಗೌತಮನ ಪತ್ನಿ ರಾಧಿಕಾ ಮತ್ತೆ ಪರದೆಯ ಮೇಲೆ ಕಾಣಿಸಿಕೊಂಡದ್ದು ವೀಕ್ಷಕರಲ್ಲಿ ಸಂತಸ ಮೂಡಿಸಿತ್ತು. ರಾಧಿಕಾ-ಗೌತಮ್ ಮಗಳು ಆಯುಷಿ. ಆಕೆ ಮಾತು ಬಾರದ ಮೂಗಿ ಎಂಬ ವಿಷಯವೂ ತಿಳಿದಿತ್ತು.
ಜೀವಂತವಾಗಿರುವ ಅಮ್ಮ-ಮಗಳ ಭೇಟಿ ಯಾವಾಗ ಇರಬಹುದು ಎಂಬ ವೀಕ್ಷಕರ ಕಾತರಕ್ಕೆ ಮತ್ತೊಂದು ಕುತೂಹಲ ಹುಟ್ಟುಹಾಕಿದ್ದು, ರಾಧಿಕಾಳಿಗೆ ಮತ್ತೊಬ್ಬ ಮಗಳೂ ಇದ್ದಾಳೆ ಎಂಬ ವಿಷಯ. ಅವಳೇ ಖುಷಿ.!
ಖುಷಿ ಮತ್ತು ಆಯುಷಿ ಅವಳಿ-ಜವಳಿ. ವಿಶೇಷ ಎಂದರೆ ಆಯುಷಿ ಮಾತು ಬಾರದ ಮುಗ್ಧ ಹುಡುಗಿ. ಆದರೆ ಖುಷಿ ಪಟಪಟ ಅಂತ ಮಾತನಾಡುವ ಗಟವಾಣಿ. ಖುಷಿಯನ್ನು ನೋಡಿದವರು ಆಯುಷಿ ಮೂಗಿಯಲ್ಲ ಎಂದು ವಾದ ಮಾಡಿದರೆ, ಮುಗ್ಧೆಯ ಮೇಲೆ ಗೂಬೆ ಕೂರಿಸುವುದು ಎಷ್ಟು ಸರಿ ಎನ್ನುವುದು ಇನ್ನೊಬ್ಬರ ವಾದ.
ಒಂದೇ ತಾಯಿಯ ಈ ಅವಳಿ-ಜವಳಿ ಮಕ್ಕಳು ಯಾವಾಗ ಭೇಟಿಯಾಗುತ್ತಾರೆ? ಅವರಿಬ್ಬರ ಪ್ರತಿಕ್ರಿಯೆ ಹೇಗಿರುತ್ತದೆ? ಮುಂದೆ ಕತೆ ಯಾವ ತಿರುವು ಪಡೆಯುತ್ತದೆ ಎಂಬ ಕಾತುರಕ್ಕೆ 'ಅಗ್ನಿಸಾಕ್ಷಿ'ಯನ್ನು ತಪ್ಪದೇ ನೋಡಿ...