twitter
    For Quick Alerts
    ALLOW NOTIFICATIONS  
    For Daily Alerts

    'ಬ್ರಹ್ಮಾಸ್ತ್ರ': ಮದುವೆ ಮನೆಯಿಂದ ಮದುಮಗನೇ ನಾಪತ್ತೆ.!

    |

    ಉದಯ ಟಿವಿಯಲ್ಲಿ ಮೂಡಿಬರುತ್ತಿರುವ 'ಬ್ರಹ್ಮಾಸ್ತ್ರ' ಧಾರಾವಾಹಿಯ ಸಂತು-ಶಿವರಂಜಿನಿ ಮ್ಯಾರೇಜ್ ಸ್ಟೋರಿ ದಿನೇ ದಿನೇ ರೋಚಕ ತಿರುವುಗಳನ್ನು ಪಡೆಯುತ್ತಿದೆ.

    ಮದುವೆಯಾಗಲು ತಡೆಯಾಗಿದ್ದ ತಂಗಿ ಖುಷಿಯ ಕಿಡ್ನ್ಯಾಪ್ ಪ್ರಕರಣದಲ್ಲಿ ಸಂತು ಮಾಸ್ಟರ್ ಪ್ಲಾನ್ ಮಾಡಿದ್ದಾನೆ. ಸಂತು ತಂಗಿ ಖುಷಿ ಬದುಕಿದ್ದಾಳೆಂಬ ಸತ್ಯ ಬಯಲಾಗಿದೆ.

    ಉದಯ ಟಿವಿಯ 'ಬ್ರಹ್ಮಾಸ್ತ್ರ'ದಲ್ಲಿ 'ಸಂತು ಮ್ಯಾರೇಜ್ ಸ್ಟೋರಿ'ಉದಯ ಟಿವಿಯ 'ಬ್ರಹ್ಮಾಸ್ತ್ರ'ದಲ್ಲಿ 'ಸಂತು ಮ್ಯಾರೇಜ್ ಸ್ಟೋರಿ'

    ತನ್ನ ತಂಗಿಯನ್ನ ಕಾಪಾಡಲು ಮದುವೆ ಮನೆಯಿಂದಲೇ ಓಡಿ ಹೋಗಿದ್ದಾನೆ ಸಂತು. ಮದುವೆ ಮನೆಯಲ್ಲಿ ಮದುಮಗನೇ ಕಾಣಿಸುತ್ತಿಲ್ಲವೆಂದಾಗ ಅಲಮೇಲಮ್ಮ ಕೋಪಗೊಳ್ಳುತ್ತಾಳೆ. ಸಂತುನ ಹುಡುಕಿಸಲು ಜನರನ್ನ ಕಳುಹಿಸುತ್ತಾಳೆ.

    Udaya TV Brahmastra serial written update: Santhu escapes from marriage hall to save Khushi

    ಅತ್ತ ಬಾಬುರೆಡ್ಡಿಗೆ ಸಂತು ತಪ್ಪಿಸಿಕೊಂಡಿರುವ ಸುದ್ದಿ ಕೇಳಿ ಭಯ ಶುರುವಾಗುತ್ತದೆ. ಏನೂ ತೋಚದೆ ಅವನ ತಂಗಿಯನ್ನ ಸಾಯಿಸುವ ನಿರ್ಧಾರ ಮಾಡುತ್ತಾನೆ.

    ಇಂತಹ ಪರಿಸ್ಥಿತಿಯಲ್ಲಿ ಸಂತು ತನ್ನ ತಂಗಿಯನ್ನ ಹೇಗೆ ಕಾಪಾಡುತ್ತಾನೆ.?

    'ಬ್ರಹ್ಮಾಸ್ತ್ರ': ತಂಗಿಗಾಗಿ ಮದುವೆ ನಿರಾಕರಿಸುವನೇ ಸಂತು.?'ಬ್ರಹ್ಮಾಸ್ತ್ರ': ತಂಗಿಗಾಗಿ ಮದುವೆ ನಿರಾಕರಿಸುವನೇ ಸಂತು.?

    ಇದರ ನಡುವೆ ಶಿವರಂಜಿನಿಯನ್ನ ಮದುವೆಯಾದರೇ ಸಂತು ಸತ್ತು ಹೋಗುತ್ತಾನೆ ಎಂಬ ಜ್ಯೋತಿಷಿಯ ನುಡಿಗೆ ಭಯ ಪಡುವ ತಾಯಿ ಕೃಷ್ಣವೇಣಿ ನೇರವಾಗಿ ಮದುವೆ ನಿಲ್ಲಿಸಲು ಬರುತ್ತಿದ್ದಾಳೆ. ಎಲ್ಲಾ ಅಡೆ-ತಡೆಗಳ ಮಧ್ಯೆ ಸಂತು ಶಿವರಂಜಿನಿಯ ಮದುವೆ ನಡೆಯುತ್ತಾ ಅನ್ನೋದೇ ಮುಂದಿನ ಕುತೂಹಲ ಘಟ್ಟ.

    ವೀಕ್ಷಿಸಿ 'ಬ್ರಹ್ಮಾಸ್ತ್ರ' ಇಂದು (25.09.18) ರಾತ್ರಿ 8ಕ್ಕೆ ಉದಯ ಟಿವಿಯಲ್ಲಿ.

    English summary
    Udaya TV Brahmastra serial written update: Santhu escapes from marriage hall to save Khushi.
    Tuesday, September 25, 2018, 16:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X