'ಬ್ರಹ್ಮಾಸ್ತ್ರ': ಶಿವರಂಜಿನಿ-ಸಂತು ಮದುವೆಗೆ ಅಡ್ಡಿ ಮಾಡ್ತಿರೋರು ಯಾರು.?
ಉದಯ ಟಿವಿಯಲ್ಲಿ ಪ್ರಸಾರ ಆಗುತ್ತಿರುವ 'ಬ್ರಹ್ಮಾಸ್ತ್ರ' ಧಾರಾವಾಹಿಯಲ್ಲಿ ಈಗಾಗಲೇ ತೆಲುಗು ಹುಡುಗಿ ಶಿವರಂಜಿನಿಯನ್ನ ಕನ್ನಡದ ಹುಡುಗ ಸಂತು ಮದುವೆ ಆಗಲು ಏನೆಲ್ಲಾ ಕಷ್ಟಪಟ್ಟಿದ್ದಾನೆ ಎಂಬುವುದನ್ನ ನೀವೇ ನೋಡಿದ್ದೀರಿ.
ನಾಯಕ ನಾಯಕಿಯ ವಿವಾಹಕ್ಕೆ ವಿರೋಧ ವ್ಯಕ್ತ ಪಡಿಸಬಹುದಾದ ಅಲಮೇಲಮ್ಮನೇ ಇಲ್ಲಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆದರೆ ಈಗ ಮದುವೆಗೆ ಅಡ್ಡಗಾಲು ಹಾಕ್ತಿರೋದು ಯಾರು.?
ತಂಗಿ ಖುಷಿಯನ್ನ ಮನೆಗೆಲಸದವಳಾಗಿ ಅಲಮೇಲಮ್ಮನ ಮನೆಗೆ ಕರೆದುಕೊಂಡು ಬಂದು, ಸುಳ್ಳಿನ ಮೇಲೆ ಸುಳ್ಳು ಹೇಳಿ ಶಿವರಂಜಿನಿಯನ್ನ ಮದುವೆಯಾಗ್ತಿರೋದೇ ಸಂತುಗೆ ಬಂದ ಆಪತ್ತು.

ಕಿಡ್ನ್ಯಾಪ್ ಗೆ ಒಳಗಾದ ಖುಷಿ ಆಕ್ಸಿಡೆಂಟ್ ಆಗಿ ಸತ್ತು ಹೋಗಿದ್ದಾಳೆಯೇ ಅನ್ನೋ ಕುತೂಹಲದ ನಡುವೆ ಈಗೀನ ಸಂಚಿಕೆ ಸಾಗುತ್ತಿದೆ. ತಂಗಿಯನ್ನ ಕಾಣದೇ ಮದುವೆಯಾಗಲು ಹಿಂಜರಿಯುತ್ತಿರುವ ಸಂತುಗೆ ತಂಗಿ ಖುಷಿ ಸತ್ತು ಹೋದ ವಿಷ್ಯ ಗೊತ್ತಾದರೆ ಮದುವೆಯೇ ಬೇಡ ಎನ್ನಬಹುದು. ಆದರೆ ಮದುವೆ ಏನಾದರೂ ನಿಂತರೇ ಸಂತು ಪ್ರಾಣಕ್ಕೆ ಅಲಮೇಲಮ್ಮನಿಂದಲೇ ಅಪಾಯವಿದೆ.!
ಈ ಮದುವೆಗೆ ಇಷ್ಟೆಲ್ಲ ಅಡ್ಡಿಯಾಗುತ್ತಿರೋದರ ಹಿಂದೆ ಯಾರ ಕೈವಾಡವಿರಬಹುದು? ಶಿವರಂಜಿನಿಯ ಪ್ರಕಾರ ವೀರಪ್ರತಾಪನೇ ಖುಷಿಯ ಮೇಲೆ ಸೇಡು ತೀರಿಸಿರುವನೇ? ಮುಂದೆ ಸಂತು ಈ ಎಲ್ಲ ಸವಾಲುಗಳಿಂದ ಹೊರಬಂದು ಶಿವರಂಜಿನಿಯನ್ನ ಹೇಗೆ ಮದುವೆಯಾಗುತ್ತಾನೆ ಅನ್ನೋದೇ ಮುಂದಿನ ಕುತೂಹಲ ಘಟ್ಟ.
ವೀಕ್ಷಿಸಿ 'ಬ್ರಹ್ಮಾಸ್ತ್ರ' ಇಂದು (18.09.18) ರಾತ್ರಿ 8ಕ್ಕೆ ಉದಯ ಟಿವಿಯಲ್ಲಿ.


Click it and Unblock the Notifications











