Don't Miss!
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- News Karnataka Rain: ರಾಜ್ಯಕ್ಕೆ ಶೇ.20ರಷ್ಟು ಮಳೆ ಕೊರತೆ: ಏಪ್ರಿಲ್ 25 ದಿನದಲ್ಲಿ ಸುರಿದ ಮಳೆ ವರದಿ ಇಲ್ಲಿದೆ
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬ್ರಹ್ಮಾಸ್ತ್ರ': ತಂಗಿಗಾಗಿ ಮದುವೆ ನಿರಾಕರಿಸುವನೇ ಸಂತು.?
ಉದಯ ಟಿವಿಯಲ್ಲಿ ಪ್ರಸಾರ ಆಗುತ್ತಿರುವ 'ಬ್ರಹ್ಮಾಸ್ತ್ರ' ಧಾರಾವಾಹಿಯಲ್ಲಿ ರೋಚಕ ತಿರುವು ಸಿಗುವ ಸೂಚನೆ ಸಿಕ್ಕಿದೆ.
ಪ್ರೀತಿಸುತ್ತಿರುವ ಶಿವರಂಜಿನಿಗಾಗಿ ಮನೆಗೆಲಸದವನಾಗಿ ಬಂದು, ಎಲ್ಲರ ಮನವೊಲಿಸಿ ಹಲವಾರು ಕಥೆ ಕಟ್ಟಿ, ಸಂತು ಕೊನೆಗೂ ಅವಳನ್ನ ಮದುವೆಯಾಗಲು ಮುಂದಾಗುತ್ತಾನೆ.
ಆದರೆ ಅಷ್ಟರಲ್ಲೇ ತಂಗಿ ಖುಷಿಯ ಕಿಡ್ನ್ಯಾಪ್ ಆಗಿ ಸಂಭ್ರಮವನ್ನ ಸಂಭ್ರಮಿಸಲಾಗದೇ ಒದ್ದಾಡುತ್ತಿರುತ್ತಾನೆ. ಮದುವೆ ಮನೆಯಂತೆ ಅಲಂಕಾರಗೊಂಡಿರುವ ರೂಮು, ಒಬ್ಬ ಪುರೋಹಿತ, ಹೋಮಕುಂಡ ಇವೆಲ್ಲವನ್ನ ನೋಡಿ ಬಂಧಿಯಾಗಿರುವ ಖುಷಿ ಗಾಬರಿಯಾಗುತ್ತಾಳೆ.
ತಾನೆಲ್ಲಿರುವೆ ಎಂಬ ಗೊಂದಲದ ನಡುವೆ ಮಂತ್ರ ಹೇಳುತ್ತಿರುವ ಪುರೋಹಿತನಲ್ಲಿ ಕೇಳಿದಾಗ ಇದು ತನ್ನದೇ ಮದುವೆ ಎಂಬ ಆಘಾತ ಅವಳಿಗೆ ಆಗುವುದು. ಅವಳನ್ನ ಅಪಹರಿಸಿರುವುದು ಯಾರು?
ಗೊಂದಲದಲ್ಲಿ ಸಂತು
ಖುಷಿ ಎಲ್ಲಿರುವಳೆಂದು ಸಂತು ಗೊಂದಲದಲ್ಲಿ ಕಂಗಾಲಾಗಿದ್ದಾನೆ. ಅವನ ದುಗುಡ ಬೇಸರವನ್ನ ಕಂಡ ವೀರ ಪ್ರತಾಪನಿಗೆ ಈ ಮದುವೆ ನಿಂತು ಹೋಗಿ ಅಲಮೇಲಮ್ಮನ ಮಾನ ಮರ್ಯಾದೆ ಹೋಗುವುದೆಂಬ ಆತಂಕ. ಹಾಗಾಗಿ ಸಂತು ಬಳಿ ಬಂದು ಮದುವೆ ನಡೆಯದೇ ಹೋದರೆ ಕೊಲೆ ಮಾಡುವುದಾಗಿ ಅವನನ್ನ ಅಲಮೇಲಮ್ಮ ಬೆದರಿಸುತ್ತಾಳೆ.
ಉದಯ ಟಿವಿಯ 'ಬ್ರಹ್ಮಾಸ್ತ್ರ'ದಲ್ಲಿ 'ಸಂತು ಮ್ಯಾರೇಜ್ ಸ್ಟೋರಿ'
ಫಜೀತಿಗೆ ಸಿಕ್ಕಿಬಿದ್ದ ಸಂತು
ಸಾವಿರ ಸುಳ್ಳು ಹೇಳಿ ಮದುವೆ ಮಾಡು ಎಂಬಂತೆ ಇಲ್ಲಿ ಸಂತು ಹಲವಾರು ಕಥೆ ಕಟ್ಟಿ ಇವಾಗ ಫಜೀತಿಗೆ ಸಿಕ್ಕಿಬಿದ್ದಿದ್ದಾನೆ. ಈ ಎಲ್ಲ ಆಘಾತಕಾರಿ ಬೆಳವಣಿಗೆ ಕಂಡು, ಇಲ್ಲಿಯವರೆಗೂ ಆಡಿದ ನಾಟಕವನ್ನೆಲ್ಲ ಅಲಮೇಲಮ್ಮನಿಗೆ ಹೇಳಿ ಈ ಮದುವೆ ಮುರಿದು ತಂಗಿನ ಹುಡುಕುವ ನಿರ್ಧಾರ ಮಾಡುತ್ತಾನೆ ಸಂತು.
'ಬ್ರಹ್ಮಾಸ್ತ್ರ'ದಲ್ಲಿ ಶಿವರಾತ್ರಿ ವಿಶೇಷ: ವೀಕ್ಷಿಸಿ ಇಂದು ರಾತ್ರಿ 8ಕ್ಕೆ
ಅಲಮೇಲಮ್ಮ ಸುಮ್ಮನೆ ಬಿಡ್ತಾಳಾ.?
ತನ್ನ ಬದ್ಧ ವೈರಿ ಕೃಷ್ಣವೇಣಿಯ ಮಗ ಸಂತು ಎಂದು ಗೊತ್ತಾದರೆ ಅಲಮೇಲಮ್ಮ ಅವನನ್ನ ಸುಮ್ಮನೆ ಬಿಡುವಳೇ? ಸಂತು ಈ ಇಲ್ಲ ಚಕ್ರವ್ಯೂಹದಿಂದ ಹೇಗೆ ಹೊರಬರುತ್ತಾನೆ ಅನ್ನೋದೇ ಸದ್ಯದ ಕುತೂಹಲ.
ಉದಯ ಟಿವಿಯಲ್ಲಿ ಮೂಡಿಬರಲಿದೆ ಹೊಸ ಧಾರಾವಾಹಿ 'ಬ್ರಹ್ಮಾಸ್ತ್ರ'
ಪ್ರಸಾರ ಯಾವಾಗ.?
ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ 'ಬ್ರಹ್ಮಾಸ್ತ್ರ' ಸಂಚಿಕೆಯಲ್ಲಿ ಇಂದು ದೊಡ್ಡ ತಿರುವು ಸಿಗಲಿದೆ. ವೀಕ್ಷಿಸಿ ಇಂದು ರಾತ್ರಿ 8 ಗಂಟೆಗೆ