Don't Miss!
- News Toilet Photo Viral: ಕಡಿಮೆ ಖರ್ಚಿನಲ್ಲಿ 'ಲೀಕೆಜ್ ಟ್ಯಾಂಕರ್'ನಿಂದ ಟಾಯ್ಲೆಟ್ ನಿರ್ಮಾಣ: ನೀವೂ ಟ್ರೈ ಮಾಡಿ
- Sports IPL 2024: ಹೈದರಾಬಾದ್-ಡೆಲ್ಲಿ ನಡುವೆ ಮೆಗಾ ಫೈಟ್; ಟಾಸ್, ಆಡುವ 11ರ ಬಳಗದ ವರದಿ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ವರ್ಷ ಉದಯ ಟಿವಿಯಲ್ಲಿ ಯುಗಾದಿ ಸಂಭ್ರಮ ಬಲು ಜೋರು
ಉದಯ ಟಿವಿ ಈ ಸಲ ಯುಗಾದಿ ಹಬ್ಬವನ್ನು ಅತಿ ಸಂಭ್ರಮದಿಂದ ಆಚರಿಸಿಕೊಂಡಿದೆ. ಯುಗಾದಿ ಹಬ್ಬ ಹೊಸ ಸಂವತ್ಸರದ ಜೊತೆಜೊತೆಗೆ ಬದುಕಲ್ಲು ಹೊಸ ಚೈತನ್ಯ ತುಂಬುವ ಹಬ್ಬ. ಭೂಮಿಯ ಮೇಲಿನ ಪ್ರತಿ ಜೀವಿಗು ಹೊಸತರ ಆರಂಭ. ಹಾಗಾಗಿಯೇ ಬದುಕು ಸಿಹಿಕಹಿಗಳ ಸಮ್ಮಿಲನವಾಗಲಿ ಎಂದು ಯುಗಾದಿ ಹಬ್ಬದ ದಿನ ಬೇವು ಬೆಲ್ಲವನ್ನು ಕೊಡುತ್ತಾರೆ.
ಈ ಯುಗಾದಿಯನ್ನ ಉದಯ ಟಿವಿ ಮಜುಬೂತಾಗಿಯೇ ಆಚರಿಸಿದೆ ಶಿವಮೊಗ್ಗೆಯಲ್ಲಿ. ಹೌದು ಉದಯ ಟಿವಿಯ ತಾರೆಯರು ಹಾಡುತ್ತಾ, ಕುಣಿಯುತ್ತಾ, ನಲಿಯುತ್ತಾ , ನಲಿಸುತ್ತಾ ಹೊಸ ಸಂವತ್ಸರಕ್ಕೆ ಸ್ವಾಗತವನ್ನು ಕೋರಿದ್ದಾರೆ. ನಿತ್ಯಾರಾಮ್ ಮತ್ತು ಜಯಶ್ರಿಯವರ ಪರ್ಫಾಮೆನ್ಸ್ ಅಂತು ವೀಕ್ಷಕರ ನಾಡಿಬಡಿತವನ್ನು ಜಾಸ್ತಿ ಮಾಡಿದ್ದರಲ್ಲಿ ಸುಳ್ಳಿಲ್ಲ ಇವರ ಜೊತೆ ದನಿಯಾದವರು ಕನ್ನಡದ ಹೆಮ್ಮೆಯ ಗಾಯಕ ರಾಜೇಶ್ ಕೃಷ್ಣನ್ ಮತ್ತು ಗಾಯಕಿ ಅನುರಾಧಾ ಭಟ್.
'ಯುಗಾದಿ ಸ್ವರ ಸಂಭ್ರಮ' - ಬೇವು ಬೆಲ್ಲದ ಜೊತೆಗೆ ಸರಿಗಮಪ
70ರ ದಶಕದ ಗೋಲ್ಡನ್ ಹಿಟ್ಸ್ ಹಾಡನ್ನು ಹಾಡುತ್ತಾ ವೀಕ್ಷಕರನ್ನು ಸಂಗೀತ ಸಾಗರದಲ್ಲಿ ತೇಲಿಸಿದರು. ಇವರೆಲ್ಲರ ಜೊತೆಜೊತೆಯಲಿ ಕಿಸ್ ತಂಡದ ಕಲಾವಿದರು ಕೂಡ ಹೆಜ್ಜೆ ಹಾಕಿದ್ದಾರೆ. ಇದಿಷ್ಟೇ ಅಲ್ಲ ಶನಿವಾರ ಬೆಳಿಗ್ಗೆ ಹನ್ನೊಂದಕ್ಕೆ 'ಹಳ್ಳಿಯಲ್ಲಿ ಯುಗಾದಿ' ಸ್ಪೆಷಲ್ ಪ್ರೋಗ್ರಾಮ್ ಕೂಡ ಪ್ರಸಾರವಾಗಲಿದೆ.
ಉದಯ ಟಿವಿಯಲ್ಲಿ ವಾರವೆಲ್ಲಾ ಯುಗಾದಿ ಸಂಭ್ರಮ
ಹಳ್ಳಿಗರ ಜೊತೆ ಉದಯ ತಾರೆಯರ ಗ್ರಾಮೀಣ ಕ್ರೀಡೆಗಳ ಟಾಸ್ಕ್ ಮತ್ತು ರೈತರ ಜೊತೆ ವನಭೋಜನ ಹೀಗೆ ಸಾಕಷ್ಟು ರೋಚಕತೆಯಿಂದ ಕೂಡಿದ ಕಾರ್ಯಕ್ರಮ ಇದಾಗಿದೆ. ಇಷ್ಟೆಲ್ಲ ರಸದೌತಣವಿರುವ ಯುಗಾದಿ ಸಂಭ್ರಮ ಕಾರ್ಯಕ್ರಮ ಇದೇ ಶನಿವಾರ ಮಧ್ಯಾಹ್ನ 12:30ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.