Don't Miss!
- Sports IPL 2024: ಮುಂಬೈ ಇಂಡಿಯನ್ಸ್ಗೆ ಆಘಾತದ ಮೇಲೆ ಆಘಾತ; ಸ್ಟಾರ್ ಬೌಲರ್ ಔಟ್
- News DV Sadananda Gowda: ಕಾಂಗ್ರೆಸ್ ನತ್ತ ಡಿ ವಿ ಸದಾನಂದಗೌಡ? ನಾಲ್ಕು ಕ್ಷೇತ್ರಗಳ ಆಫರ್ ಕೊಟ್ಟ ಕೈ ನಾಯಕರು?
- Lifestyle ಫ್ಲ್ಯಾಟ್ನಲ್ಲಿ ವಾಸಿಸಲು ಹೋಗುವಾಗ ಸಮೃದ್ಧಿ, ಆರೋಗ್ಯಕ್ಕಾಗಿ ವಾಸ್ತು ಹೀಗಿದೆಯೇ ಎಂದು ನೋಡಬೇಕು
- Technology ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಇನ್ಫಿನಿಕ್ಸ್ ನೋಟ್ 40 ಪ್ರೊ ಪ್ಲಸ್ 5G ಫೋನ್: ಫೀಚರ್ಸ್ ಹೇಗಿದೆ?
- Automobiles ಡಿ ಬಾಸ್ ಪತ್ನಿ ಖರೀದಿಸಿದ್ದು ಸಾಮಾನ್ಯ ಕಾರಲ್ಲ: ಬಂಗಲೆಯಂತಹ ಇಂಟೀರಿಯರ್!
- Finance ಭಾರತದಲ್ಲಿ ಚಿನ್ನದ ಬೆಲೆ ಇಳಿಕೆ, ನಿಮ್ಮ ನಗರದಲ್ಲಿ 24 ಕ್ಯಾರೆಟ್ ಚಿನ್ನದ ದರ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ವರ್ಷ ಉದಯ ಟಿವಿಯಲ್ಲಿ ಯುಗಾದಿ ಸಂಭ್ರಮ ಬಲು ಜೋರು
ಉದಯ ಟಿವಿ ಈ ಸಲ ಯುಗಾದಿ ಹಬ್ಬವನ್ನು ಅತಿ ಸಂಭ್ರಮದಿಂದ ಆಚರಿಸಿಕೊಂಡಿದೆ. ಯುಗಾದಿ ಹಬ್ಬ ಹೊಸ ಸಂವತ್ಸರದ ಜೊತೆಜೊತೆಗೆ ಬದುಕಲ್ಲು ಹೊಸ ಚೈತನ್ಯ ತುಂಬುವ ಹಬ್ಬ. ಭೂಮಿಯ ಮೇಲಿನ ಪ್ರತಿ ಜೀವಿಗು ಹೊಸತರ ಆರಂಭ. ಹಾಗಾಗಿಯೇ ಬದುಕು ಸಿಹಿಕಹಿಗಳ ಸಮ್ಮಿಲನವಾಗಲಿ ಎಂದು ಯುಗಾದಿ ಹಬ್ಬದ ದಿನ ಬೇವು ಬೆಲ್ಲವನ್ನು ಕೊಡುತ್ತಾರೆ.
ಈ ಯುಗಾದಿಯನ್ನ ಉದಯ ಟಿವಿ ಮಜುಬೂತಾಗಿಯೇ ಆಚರಿಸಿದೆ ಶಿವಮೊಗ್ಗೆಯಲ್ಲಿ. ಹೌದು ಉದಯ ಟಿವಿಯ ತಾರೆಯರು ಹಾಡುತ್ತಾ, ಕುಣಿಯುತ್ತಾ, ನಲಿಯುತ್ತಾ , ನಲಿಸುತ್ತಾ ಹೊಸ ಸಂವತ್ಸರಕ್ಕೆ ಸ್ವಾಗತವನ್ನು ಕೋರಿದ್ದಾರೆ. ನಿತ್ಯಾರಾಮ್ ಮತ್ತು ಜಯಶ್ರಿಯವರ ಪರ್ಫಾಮೆನ್ಸ್ ಅಂತು ವೀಕ್ಷಕರ ನಾಡಿಬಡಿತವನ್ನು ಜಾಸ್ತಿ ಮಾಡಿದ್ದರಲ್ಲಿ ಸುಳ್ಳಿಲ್ಲ ಇವರ ಜೊತೆ ದನಿಯಾದವರು ಕನ್ನಡದ ಹೆಮ್ಮೆಯ ಗಾಯಕ ರಾಜೇಶ್ ಕೃಷ್ಣನ್ ಮತ್ತು ಗಾಯಕಿ ಅನುರಾಧಾ ಭಟ್.
'ಯುಗಾದಿ ಸ್ವರ ಸಂಭ್ರಮ' - ಬೇವು ಬೆಲ್ಲದ ಜೊತೆಗೆ ಸರಿಗಮಪ
70ರ ದಶಕದ ಗೋಲ್ಡನ್ ಹಿಟ್ಸ್ ಹಾಡನ್ನು ಹಾಡುತ್ತಾ ವೀಕ್ಷಕರನ್ನು ಸಂಗೀತ ಸಾಗರದಲ್ಲಿ ತೇಲಿಸಿದರು. ಇವರೆಲ್ಲರ ಜೊತೆಜೊತೆಯಲಿ ಕಿಸ್ ತಂಡದ ಕಲಾವಿದರು ಕೂಡ ಹೆಜ್ಜೆ ಹಾಕಿದ್ದಾರೆ. ಇದಿಷ್ಟೇ ಅಲ್ಲ ಶನಿವಾರ ಬೆಳಿಗ್ಗೆ ಹನ್ನೊಂದಕ್ಕೆ 'ಹಳ್ಳಿಯಲ್ಲಿ ಯುಗಾದಿ' ಸ್ಪೆಷಲ್ ಪ್ರೋಗ್ರಾಮ್ ಕೂಡ ಪ್ರಸಾರವಾಗಲಿದೆ.
ಉದಯ ಟಿವಿಯಲ್ಲಿ ವಾರವೆಲ್ಲಾ ಯುಗಾದಿ ಸಂಭ್ರಮ
ಹಳ್ಳಿಗರ ಜೊತೆ ಉದಯ ತಾರೆಯರ ಗ್ರಾಮೀಣ ಕ್ರೀಡೆಗಳ ಟಾಸ್ಕ್ ಮತ್ತು ರೈತರ ಜೊತೆ ವನಭೋಜನ ಹೀಗೆ ಸಾಕಷ್ಟು ರೋಚಕತೆಯಿಂದ ಕೂಡಿದ ಕಾರ್ಯಕ್ರಮ ಇದಾಗಿದೆ. ಇಷ್ಟೆಲ್ಲ ರಸದೌತಣವಿರುವ ಯುಗಾದಿ ಸಂಭ್ರಮ ಕಾರ್ಯಕ್ರಮ ಇದೇ ಶನಿವಾರ ಮಧ್ಯಾಹ್ನ 12:30ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.