Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಉದಯ ಟಿವಿಯ 'ಜೀವನದಿ'ಗೆ 50ನೇ ಸಂಚಿಕೆಯ ಸಂಭ್ರಮ
ಕಿರುತೆರೆಯಲ್ಲಿ ಉದಯ ಟಿವಿ ಎಂದರೆ ಎಂತಹವರಿಗೂ ಒಂದು ಬಾಂಧವ್ಯ ನೆನಪಾಗುತ್ತದೆ. ಏಕೆಂದರೆ 2 ದಶಕಗಳಿಂದ ಕನ್ನಡಿಗರ ಸಾಂಸ್ಕೃತಿಕ ರಾಯಭಾರಿಯಾಗಿರುವ ವಾಹಿನಿ ಉದಯ ಟಿವಿ. ಈಗ ಇದೇ ಉದಯ ವಾಹಿನಿ ಮತ್ತೊಂದು ಸಡಗರದಲ್ಲಿದೆ.
ಸಂದರ್ಶನ: 'ಜೀವನದಿ' ದೀಪಿಕಾಗೆ ಪುನೀತ್ ಎಂದರೆ ಬಲು ಇಷ್ಟ..
ಅದೇನೆಂದರೆ ಮೇ 8 ರಂದು ಪ್ರಾರಂಭವಾದ 'ಜೀವನದಿ' ಎಂಬ ಧಾರಾವಾಹಿ ಈಗ 50 ಸಂಚಿಕೆಗಳನ್ನು ಪೂರೈಸುತ್ತಿರುವುದು. ಈ ಧಾರಾವಾಹಿಯನ್ನು ಮೀಡಿಯಾ ಹೌಸ್ ಮತ್ತು ಸಂಗಮ ಫಿಲ್ಮ್ ನೆಟ್ವರ್ಕ್ ಲಾಂಛನದ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ಅಲ್ಲದೇ ಇದು ಲೇಖಕಿ ಸರಸ್ವತಿ ನಟರಾಜನ್ ರವರ 'ಜ್ಯೋತಿ' ಎಂಬ ಕಾದಂಬರಿಯಾಧರಿತ ಕಥೆಯನ್ನು ಹೊಂದಿದೆ.
'ಜೀವನದಿ' ಧಾರಾವಾಹಿಯಲ್ಲಿ ಹೆಣ್ಣು ಮಕ್ಕಳಿಗೆ ಜೀವನದಲ್ಲಿ ಸ್ಫೂರ್ತಿ ನೀಡುವ ಹಲವು ಅಂಶಗಳಿವೆ. ಕಾರಣ ಒಂದು ಹೆಣ್ಣು ಹೇಗೆ ತನ್ನ ಸಹನೆಯನ್ನೆ ಅಸ್ತ್ರವಾಗಸಿಕೊಂಡು ತನ್ನೆಲ್ಲ ಕಷ್ಟಗಳನ್ನು ಮೆಟ್ಟಿ ಜೀವನದಲ್ಲಿ ಗುರಿ ಮುಟ್ಟುತ್ತಾಳೆ ಎಂಬ ಕಥಾಹಂದರವನ್ನು ಹೊಂದಿದೆ.
ಪ್ರಕಾಶ್ ರೈ ರಿಂದ ಪ್ರಭಾವಿತರಾದ ಮನೋಜ್ 'ಜೀವನದಿಗೆ' ವಿಲನ್ ಆದ ಕತೆ!
ಧಾರಾವಾಹಿಯಲ್ಲಿ ಜ್ಯೋತಿಯ ಪಾತ್ರವನ್ನು ದೀಪಿಕಾ ವೆಂಕಟೇಶ್ ನಿರ್ವಹಿಸುತ್ತಿದ್ದು, ಮುಖ್ಯ ಭೂಮಿಕೆಯಲ್ಲಿ ಹಿರಿಯ ಕಲಾವಿದರಾದ ನಾಗೇಂದ್ರ ಶಾ, ಸುನೇತ್ರಾ ಪಂಡಿತ್, ಪುಷ್ಪಾ, ಅನಿಲ್ ಮುಂತಾದವರು ಇದ್ದಾರೆ. ಕಿರುತೆರೆಯ ಹಿರಿಯ ಬರಹಗಾರ ಮತ್ತು ನಿರ್ದೇಶಕ ಬಿ.ಸುರೇಶ್ ರವರ ಸಾರಥ್ಯ ಈ ಧಾರಾವಾಹಿಗೆ ಇದೆ. 50 ಸಂಚಿಕೆ ಪೂರ್ಣಗೊಂಡಿರುವ 'ಜೀವನದಿ' ಧಾರಾವಾಹಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದೆ.