Don't Miss!
- News ಹಾಸನದಲ್ಲಿ ಬಿಜೆಪಿಯ ಸಹಕಾರವಿಲ್ಲ, ಮಂಡ್ಯದಲ್ಲಿ ಸುಮಲತಾ ಸಹಾಯ ಮಾಡಿಲ್ಲ: ಮತ್ತೆ ಸಂಕಷ್ಟದಲ್ಲಿ ದಳಪತಿ
- Lifestyle ಮಳೆ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ ಕೊಟ್ಟ ಹವಾಮಾನ ಇಲಾಖೆ..!
- Automobiles Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
- Technology ಮೇ 1 ರಂದು ವಿವೋ T3x 5G ಮೊಬೈಲ್ ಮತ್ತೆ ಖರೀದಿಗೆ ಲಭ್ಯ!..ಅಗ್ಗದ ಬೆಲೆ ಇದೆ!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಉದಯ ಟಿವಿ'ಯಲ್ಲಿ ದಸರಾ ದರ್ಬಾರ್: ಶುಕ್ರವಾರ, ಶನಿವಾರ ಮಹಾರಂಜನೆ
ದಸರಾ ಹಬ್ಬದ ಪ್ರಯುಕ್ತ ನಿಮ್ಮ ನೆಚ್ಚಿನ ಉದಯ ಟಿವಿ ಕರುನಾಡ ವೀಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಹರಿಸಲಿದೆ. ಎರಡು ಹೊಚ್ಚ ಹೊಸ ಚಲನಚಿತ್ರಗಳು, ಸೀರಿಯಲ್ ಹಬ್ಬ ಮತ್ತು ಕೈರುಚಿ ಸೇರಿದಂತೆ ವಿಶೇಷ ಕಾರ್ಯಕ್ರಮಗಳು ಪ್ರಸಾರ ಆಗಲಿವೆ.
ನವರಾತ್ರಿಯ ಒಂಬತ್ತನೆಯ ದಿನವಾದ 'ಆಯುಧ ಪೂಜೆ'ಯಂದು ಕೈರುಚಿ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳು ತಮ್ಮ ಕೈರುಚಿಯನ್ನು ಉಣಬಡಿಸಲಿದ್ದಾರೆ. ಮುಂದೆ ಓದಿರಿ...
ವೈಶಾಲಿ 'ಕೈರುಚಿ'
'ಚಾರ್ಲಿ' ಹಾಗೂ 'ಭರ್ಜರಿ' ಸಿನಿಮಾಗಳಲ್ಲಿ ಅಭಿನಯಿಸಿರುವ ವೈಶಾಲಿ ತಮ್ಮ ಚಿತ್ರಗಳ ಅನುಭವವನ್ನು ಹಂಚಿಕೊಳ್ಳುತ್ತಾ, ಹಬ್ಬದ ಸ್ಪೆಷಲ್ ಗೆ ರುಚಿಕರವಾದ ಅಡುಗೆಯನ್ನು ತಿಳಿಸಿಕೊಡಲಿದ್ದಾರೆ.
ದೊಡ್ಮನೆ ಸೊಸೆ ಗಗನ
'ದೊಡ್ಮನೆ ಸೊಸೆ' ಧಾರಾವಾಹಿ ಖ್ಯಾತಿಯ ಗಗನ ಅವರು ದಸರಾ ಹಬ್ಬದ ಪ್ರಯುಕ್ತ ವಿಶೇಷ ಅಡುಗೆ ಹೇಳಿಕೊಡಲಿದ್ದಾರೆ. ಸೆಪ್ಟೆಂಬರ್ 29 ರಂದು ಮಧ್ಯಾಹ್ನ 12ಕ್ಕೆ 'ಕೈರುಚಿ' ಕಾರ್ಯಕ್ರಮ ಪ್ರಸಾರ ಆಗಲಿದೆ.
ಸಿನಿಮಾ ಪ್ರೀಮಿಯರ್ - ಕಥೆ, ಚಿತ್ರಕಥೆ, ನಿರ್ದೇಶನ ಪುಟ್ಟಣ್ಣ
'ಕಥೆ, ಚಿತ್ರಕಥೆ, ನಿರ್ದೇಶನ ಪುಟ್ಟಣ್ಣ' ಸಿನಿಮಾ ಮಧ್ಯಾಹ್ನ 1ಕ್ಕೆ ಪ್ರಸಾರ ಆಗಲಿದೆ. ನಟ ಕೋಮಲ್ ಕುಮಾರ್ ಹಾಗೂ ಪ್ರಿಯಾಮಣಿ ಅಭಿನಯದ ಈ ಸಿನಿಮಾದಲ್ಲಿ ಹಾರರ್ ಹಾಗೂ ಹಾಸ್ಯ ಮಿಶ್ರಿತ ಅಂಶಗಳಿವೆ. 2016ರ ಯಶಸ್ವಿ ಚಿತ್ರಗಳಲ್ಲಿ ಒಂದಾಗಿರುವ ಈ ಚಿತ್ರ ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ಉದಯ ಟಿವಿಯಲ್ಲಿ ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಪ್ರಸಾರವಾಗಲಿದೆ.
ಸೀರಿಯಲ್ ಹಬ್ಬ
ದಸರಾ ಹಬ್ಬದ ವಿಶೇಷವಾಗಿ ಉದಯ ಟಿವಿ ಆಯೋಜಿಸಿದ್ದ 'ಸೀರಿಯಲ್ ಹಬ್ಬ' ಶುಕ್ರವಾರ ಸಂಜೆ 4.30ಕ್ಕೆ ಪ್ರಸಾರಗೊಳ್ಳಲಿದೆ. ನವರಾತ್ರಿಯ ವಿಶೇಷವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಉದಯ ಟಿವಿಯ ಪ್ರಸಿದ್ಧ ಧಾರಾವಾಹಿಗಳಾದ 'ಜೋ ಜೋ ಲಾಲಿ', 'ಸರಯೂ' ಮತ್ತು 'ಕಾವೇರಿ' ತಂಡದ ತಾರೆಯರು ಕುಣಿದು ಕುಪ್ಪಳಿಸಿ, ಹಬ್ಬಕ್ಕೆ ಹೊಸ ಕಳೆ ತಂದಿದ್ದಾರೆ. '
ಸಿನಿಮಾ ಪ್ರೀಮಿಯರ್ - ರಾಜ್ ವಿಷ್ಣು
ಸೆಪ್ಟೆಂಬರ್ 30 ರಂದು ಸಂಜೆ 6ಕ್ಕೆ ಶರಣ್ ಹಾಗೂ ಚಿಕ್ಕಣ್ಣ ಅಭಿನಯದ ಈ ವರ್ಷದ ಯಶಸ್ವಿ ಚಿತ್ರಗಳಲ್ಲಿ ಒಂದಾದ ‘ರಾಜ್ ವಿಷ್ಣು' ಚಲನಚಿತ್ರ ನಿಮ್ಮ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.