Don't Miss!
- Automobiles ಜೀವದ ಗೆಳೆಯನಿಗೆ ಸರ್ಪ್ರೈಸ್ ಆಗಿ 'ಬೈಕ್' ಉಡುಗೊರೆ ನೀಡಿದ ವಧು.. ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ!
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Lifestyle ಮೈ ತೂಕ ಕಡಿಮೆಯಾಗಲು ಈ ಪುದೀನಾ ನೀರು ಸಹಕಾರಿಯೇ? ಇದರ ಇತರ ಪ್ರಯೋಜನಗಳೇನು?
- News Poornachandra Tejaswi: ವಿಸ್ಮಯಲೋಕವನ್ನೇ ತೆರೆದಿಡುವ ತೇಜಸ್ವಿಯವರ ಪುಸ್ತಕಗಳು
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಅವಳು' ಮನೆಯಲ್ಲಿ ಇಂದು 'ಗಣಪ'ನ ಹಬ್ಬ
ಉದಯ ಟಿವಿಯಲ್ಲಿ ಈಗಾಗಲೇ ಹೊಸ ರೂಪದಲ್ಲಿ ಬರುತ್ತಿರುವ 'ಅವಳು' ಧಾರಾವಾಹಿ ಗಣೇಶನ ಹಬ್ಬ ಮಾಡುವುದರ ಮೂಲಕ ಈ ಹಬ್ಬಕ್ಕೆ ಮತ್ತಷ್ಟು ಮೆರುಗು ತರಲು ಸಜ್ಜಾಗಿದೆ.
ಇಂದು ಸಂಜೆ 6 ಗಂಟೆಗೆ 'ಅವಳು' ಗಣಪನ ವಿಶೇಷ ಸಂಚಿಕೆ ನಿಮ್ಮ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.
ಸಾಮಾನ್ಯ ಹಳ್ಳಿ ಹುಡುಗಿ ಪದ್ಮಾ ಮತ್ತು ಸೂಪರ್ ಸ್ಟಾರ್ ಡಿ.ಜೆ ನಡುವಿನ ಪ್ರೇಮಕಥೆಯೇ 'ಅವಳು'. ಮಾನಸಾಳ ಕುಟುಂಬವನ್ನ ಕೊಂದು ಅವಳ ಇಡೀ ಆಸ್ತಿಯನ್ನ ಮೋಸದಿಂದ ತನ್ನದಾಗಿಸಿಕೊಂಡಿರುವ ಭುವನೇಶ್ವರಿಯ ಮಗನೇ ಸೂಪರ್ ಸ್ಟಾರ್ ಡಿ.ಜೆ.
ಈಗಾಗಲೇ ಭುವನೇಶ್ವರಿಗೆ ಮಾನಸಾಳ ಮಗಳು ಪದ್ಮಾ ಬದುಕಿರುವ ಸತ್ಯ ಗೊತ್ತಾಗಿದೆ. ಹಾಗಾಗಿ ಅವಳನ್ನ ಹುಡುಕುತ್ತಿರುವ ಭುವನಾಳಿಗೆ ಪದ್ಮಾಳೇ ಎದುರಾದರೇ ಏನಾಗಬಹುದು?
ಬ್ರೇಕಿಂಗ್ ನ್ಯೂಸ್ ಮಾಡುವ ಪದ್ಮಾ
ಸಿನಿಮಾ ಚಿತ್ರೀಕರಣದಲ್ಲಿ ಡಿ.ಜೆ ಜೊತೆ ನಟಿಸುವ ಸಣ್ಣ ಪಾತ್ರ ಪದ್ಮಾಳಿಗೆ ಆಕಸ್ಮಿಕವಾಗಿ ಸಿಗುತ್ತದೆ. ಆದರೆ ಡಿ.ಜೆ ನ ಅಪ್ಪಿಕೊಳ್ಳಲು ಹಾಗೂ ಮುತ್ತು ಕೊಡಲು ನಿರಾಕರಿಸುತ್ತಾಳೆ. ಇದರಿಂದಾಗಿ ಡಿ.ಜೆ ಅವಮಾನಿತನಾಗುತ್ತಾನೆ. ಸಿನಿಮಾ ಇಂಡಸ್ಟ್ರಿಯಲ್ಲಿ ಪದ್ಮಾ ದೊಡ್ಡ ಸುದ್ದಿಯಾಗುತ್ತಾಳೆ.
ನಿಮ್ಮ ಉದಯ ಟಿವಿಯಲ್ಲಿ 'ಅವಳು' ಮಹಾ ಸಂಚಿಕೆ
ಡಿ.ಜೆ ಮನೆಯಲ್ಲಿ ಗಣೇಶ ಹಬ್ಬ
ತನ್ನ ಮಗನ ಸ್ಟಾರ್ ಇಮೇಜ್ ನ ಹಾಳು ಮಾಡಿರುವ ಪದ್ಮಾ ತನ್ನ ಶತ್ರು ಮಾನಸಾಳ ಮಗಳೆಂಬುವುದು ಗೊತ್ತಿಲ್ಲ. ಆದರೆ ಡಿ.ಜೆ ಮನೆಯಲ್ಲಿ ನಡೆಯುವ ಗಣೇಶ ಹಬ್ಬಕ್ಕೆ ಪದ್ಮಾ ಬಂದಿದ್ದಾಳೆ.
'ಬ್ರಹ್ಮಾಸ್ತ್ರ': ತಂಗಿಗಾಗಿ ಮದುವೆ ನಿರಾಕರಿಸುವನೇ ಸಂತು.?
ಪದ್ಮಾ ಜನ ರಹಸ್ಯ ಬಯಲು.?
ಗಣೇಶ ಹಬ್ಬದ ದಿನದಂದೇ ಪದ್ಮಾಳಿಗೆ ಗೊತ್ತಿರದ ಜನ್ಮ ರಹಸ್ಯ ತಿಳಿಯುತ್ತದೆಯೇ? ಮಾನಸಾಳಂತಿರುವ ಪದ್ಮಾಳನ್ನ ನೋಡಿ ಭುವನಾ ಸುಮ್ಮನಿರುವಳೇ? ಡಿ.ಜೆ ಮೆರೆಯುತ್ತಿರುವ ಆಸ್ತಿಯ ನಿಜವಾದ ವಾರಸ್ದಾರ ಪದ್ಮಾಳೆಂದು ಗೊತ್ತಾಗುವುದೇ?
'ಅವಳು' ವಿಶೇಷ ಸಂಚಿಕೆ
ಇವೆಲ್ಲವುಗಳ ಕುತೂಹಲಕಾರಿ ಸಂಚಿಕೆ ಇಂದಿನ ಗಣೇಶ ಹಬ್ಬದ 'ಅವಳು' ವಿಶೇಷ ಸಂಚಿಕೆ ಉದಯ ಟಿವಿಯಲ್ಲಿ ಸಂಜೆ 6ಕ್ಕೆ ಪ್ರಸಾರವಾಗುತ್ತದೆ.