Don't Miss!
- News karnataka Rain: ಬೆಂಗಳೂರಿನಲ್ಲಿ ಏ.23ರವರೆಗೆ ಮಳೆ- ಬೆಳಗಾವಿ ಮಂದಿಗೆ ಕುಂದಾ ಕೊಟ್ಟ ವರುಣ ಧಾರವಾಡ ಮಂದಿಗಿಂದು ಪೇಡಾ ಕೊಡ್ತಾನಾ?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಮಿತಾಬ್ ಬಚ್ಚನ್ 'ಕೌನ್ ಬನೇಗಾ ಕರೋಡ್ ಪತಿ'ಶೋನಲ್ಲಿ ಉಡುಪಿಯ ಸಮಾಜ ಸೇವಕ ರವಿ ಕಟಪಾಡಿ
ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುವ ಹಿಂದಿಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಕೌನ್ ಬನೇಗಾ ಕರೋಡ್ ಪತಿ ಸೀಸನ್ 12 ಪ್ರಸಾರವಾಗುತ್ತಿದೆ. ಈ ಪ್ರಸಿದ್ಧ ಶೋಗೆ ಈಗ ಉಡುಪಿಯ ಸಮಾಜ ಸೇವಕ ರವಿ ಕಟಪಾಡಿ ಆಯ್ಕೆಯಾಗಿದ್ದಾರೆ.
ಹೌದು, ರವಿ ಅವರ ಮಾನವೀಯ ಕೆಲಸ ಗುರುತಿಸಿ ವಾಹಿನಿ ಈ ಅವಕಾಶ ನೀಡಿದೆ. ರವಿ ಕಟಪಾಡಿ ಅವರ ಎಪಿಸೋಡ್ ಜನವರಿ 13ರಂದು ಅಂದರೆ ಇಂದು ಮುಂಬೈನಲ್ಲಿ ಶೂಟಿಂಗ್ ನಡೆಯಲಿದೆ. ಜನವರಿ 15ರಂದು ಈ ಕಾರ್ಯಕ್ರಮ ಪ್ರಸಾರವಾಗುವ ಸಾಧ್ಯತೆ ಇದೆ.
ರಾಖಿ ಸಾವಂತ್ ಗೆ ಸೀರೆ ಉಡಿಸಿದ ಅಭಿನವ್: ಪತ್ನಿಯ ಪ್ರತಿಕ್ರಿಯೆ ಹೀಗಿತ್ತು
ಈ ಬಗ್ಗೆ ರವಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. 'ಕೌನ್ ಬನೇಗಾ ಕರೋಡ್ ಪತಿ ಆಯೋಜಕರಿಂದ ಕರೆ ಬಂದಾಗ ಮೊದಲು ತಿರಸ್ಕರಿಸಿದ್ದೆ. ಆದರೆ ಮತ್ತೊಮ್ಮೆ ಕರೆ ಮಾಡಿ ಕೇಳಿಕೊಂಡಾಗ ಒಪ್ಪಿಗೆ ನೀಡಿದೆ' ಎಂದಿದ್ದಾರೆ. ಜೊತೆಗೆ ಎಲ್ಲರೂ ಬೆಂಬಲ ನೀಡುವಂತೆ ಕೇಳಿಕೊಂಡಿದ್ದಾರೆ.
ಒಪ್ಪಿಗೆ ನೀಡಿದ ಬಳಿಕ ರವಿ ಕಟಪಾಡಿ ಮನೆಗೆ ಕರೋಡ್ ಪತಿ ಟೀಂ ಆಗಮಿಸಿ ಪ್ರೋಮೋ ಶೂಟ್ ಮಾಡಿದ್ದಾರೆ. ಜೊತೆಗೆ ಅವರ ಸಾಮಾಜಿಕ ಕಾರ್ಯಗಳನ್ನು ದಾಖಲಿಸಿಕೊಂಡಿದ್ದಾರೆ. ಈಗಾಗಲೇ ರವಿ ಮುಂಬೈಗೆ ತೆರಳಿದ್ದು ಇಂದು ಅಮಿತಾಬ್ ಮುಂದೆ ಹಾಟ್ ಸೀಟಿನಲ್ಲಿ ಕೂರಲಿದ್ದಾರೆ. ಇದು ಶುಕ್ರವಾರ ಪ್ರಸಾರವಾಗುವ ಕೌನ್ ಬನೇಗಾ ಕರೋಡ್ ಪತಿ ಕರ್ಮವೀರ್ ವಿಶೇಷ ಎಪಿಸೋಡ್ ನಲ್ಲಿ ಪ್ರಸಾರ ಆಗುವ ನಿರೀಕ್ಷೆ ಇದೆ. ರವಿ ಎಷ್ಟು ಹಣ ಗೆದ್ದು ಬರುತ್ತಾರೆ ಎನ್ನುವ ಕುತೂಹಲ ಊರಿನ ಜನರಿಗೆ ಮನೆ ಮಾಡಿದೆ.
ಅಂದಹಾಗೆ ರವಿ ಕಟಪಾಡಿ ವಿಭಿನ್ನವಾದ ವೇಷ ಹಾಕಿಕೊಂಡು ಜನರನ್ನು ರಂಜಿಸಿ ಹಣ ಸಂಗ್ರಹಿಸುತ್ತಾರೆ. ಸಂಗ್ರಹಿಸಿದ ಹಣವನ್ನು ಮಾನವೀಯ ಕೆಲಗಳಿಗೆ ಬಳಸುತ್ತಾರೆ. ಬಡ ಮಕ್ಕಳ ಶಿಕ್ಷಣ, ಬಡವರ ಆರೋಗ್ಯ ಸೇರಿದಂತೆ ಸಾಕಷ್ಟು ಸಾಮಾಜಿಕ ಕೆಲಸಗಳಿಗೆ ಹಣವನ್ನು ನೀಡುತ್ತಾರೆ.
ಕಳೆದ ಆರು ವರ್ಷಗಳಿಂದ ರವಿ ಅವರು ಸುಮಾರು 52.50 ಲಕ್ಷ ರೂ. ಸಂಗ್ರಹಿಸಿದ್ದಾರೆ. ಈ ಹಣವನ್ನು 28 ಬಡ ಮಕ್ಕಳ ಚಿಕಿತ್ಸೆ ನೀಡಿದ್ದಾರೆ. ಕಳೆದ ವರ್ಷ ಕೋವಿಡ್-19 ಕಾರಣ ಹಣ ಸಂಗ್ರಹಿಸುವ ಬದಲು ವಿಶೇಷ ವೇಷ ಧರಿಸಿ ಕೊರೊನಾ ಬಗ್ಗೆ ಜಾಗೃತೆ ಮೂಡಿಸುವ ಕೆಲಸ ಮಾಡಿದ್ದಾರೆ.