Just In
Don't Miss!
- Sports
ಐಎಸ್ಎಲ್: ಅಂಕ ಹಂಚಿಕೊಂಡ ಹೈದರಾಬಾದ್ ಮತ್ತು ಮುಂಬೈ ಸಿಟಿ
- News
ಅಮಿತ್ ಶಾ ಆಗಮನ; ಬೆಳಗಾವಿಯಲ್ಲಿ ರೈತರ ಪ್ರತಿಭಟನೆ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Automobiles
2020ರ ಡಿಸೆಂಬರ್ ಅವಧಿಯಲ್ಲಿ ಕಾರು ಮಾರಾಟದಲ್ಲಿ ಭರ್ಜರಿ ಮುನ್ನಡೆ ಕಾಯ್ದುಕೊಂಡ ನ್ಯೂ ಜನರೇಷನ್ ಕ್ರೆಟಾ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಬಜೆಟ್ 2021: MSME ವಲಯಕ್ಕೆ ಏನು ಸಿಗಬಹುದು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮತ್ತೆ 'ಪುಟ್ಮಲ್ಲಿ'ಯಾದ ನಟಿ ಉಮಾಶ್ರೀ
'ಪುಟ್ನಂಜ' ಸಿನಿಮಾದ 'ಪುಟ್ಮಲ್ಲಿ ಪಾತ್ರ ಯಾರೂ ಮರೆಯಲು ಸಾಧ್ಯವಿಲ್ಲ. ಈ ಪಾತ್ರ ಉಮಾಶ್ರೀ ವೃತ್ತಿ ಜೀವನದ ಅತ್ಯುತ್ತಮ ಪಾತ್ರಗಳಲ್ಲಿ ಒಂದು. ಇದೀಗ ಉಮಾಶ್ರೀ ಮತ್ತೆ 'ಪುಟ್ಮಲ್ಲಿ'ಯಾಗತ್ತಿದೆ.
ಉಮಾಶ್ರೀ 'ಪುಟ್ಮಲ್ಲಿ' ಆಗುತ್ತಿದ್ದಾರೆ ಎಂದ ತಕ್ಷಣ ಮತ್ತೆ ಸಿನಿಮಾ ಮಾಡುತ್ತಿದ್ದಾರೆಯೇ ಎನ್ನುವ ಕುತೂಹಲ ಮೂಡುತ್ತದೆ. ಆದರೆ, ಉಮಾಶ್ರೀ ಈಗ 'ಪುಟ್ಮಲ್ಲಿ' ಆಗಿರುವುದು ಕಿರುತೆರೆಗಾಗಿ. ರಾಜಕೀಯದ ಕೆಲಸಗಳ ನಡುವೆ ನಟನೆ ಕಡಿಮೆ ಮಾಡಿದ್ದ ಉಮಾಶ್ರೀ ಇದೀಗ ಮತ್ತೆ ಕಿರುತೆರೆ ಬಂದಿದ್ದಾರೆ.
ಅಂಬರೀಶ್ ಸ್ಥಾನ ಅಭಿಷೇಕ್ ತುಂಬಲಿ' - ಉಮಾಶ್ರೀ ಭಾವುಕ ಮಾತು
ಸ್ಟಾರ್ ಸುವರ್ಣಯಲ್ಲಿ 'ಆರತಿಗೊಬ್ಬ ಕೀರ್ತಿಗೊಬ್ಬ' ಎನ್ನುವ ಹೊಸ ಧಾರಾವಾಹಿ ಬರುತ್ತಿದೆ. ಈ ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ಉಮಾಶ್ರೀ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕನ ತಾಯಿ ಪಾತ್ರ ಅವರದ್ದಾಗಿದೆ. ಮೊದಲು ಈ ಪ್ರಾಜೆಕ್ಟ್ ಒಪ್ಪಿಕೊಳ್ಳಲು ಹಿಂದೇಟು ಹಾಕಿದ್ದ ಉಮಾಶ್ರೀ ಕಥೆ ಇಷ್ಟ ಆಗಿ ಒಪ್ಪಿಕೊಂಡರಂತೆ.
ಪರಿಣಿಕ ಪ್ರೊಡಕ್ಷನ್ಸ್ ಈ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದೆ. 'ಅಗ್ನಿಸಾಕ್ಷಿ' ಖ್ಯಾತಿಯ ಮೈಸೂರು ಮಂಜು ಸೀರಿಯಲ್ ನಿರ್ದೇಶನ ಮಾಡುತ್ತಿದ್ದಾರೆ. ಪೂರ್ಣ ಚಂದ್ರ ತೇಜಸ್ವಿ, ಮೇಘನಾ ಶೆಣೈ, ಧನ್ಯಾ ನಟಿಸುತ್ತಿದ್ದಾರೆ. ಡಿಸೆಂಬರ್ 23 ರಿಂದ ಈ ಹೊಸ ಧಾರಾವಾಹಿ ಪ್ರಸಾರ ಆಗಲಿದೆ.
ವೇಶ್ಯೆಯ ಮಗಳೆಂದು ಪತಿಯಿಂದ ಅವಮಾನ: ಉಮಾಶ್ರೀ
ಅಂದಹಾಗೆ, ಈ ಹಿಂದೆ 'ಮುಸ್ಸಂಜೆ', 'ಕಿಚ್ಚು', 'ಅಮ್ಮನಿನಾಗಿ' ಎಂಬ ಧಾರಾವಾಹಿಗಳಲ್ಲಿ ನಟಿಸಿದ್ದು, ಇದೀಗ ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಮತ್ತೆ ಉಮಾಶ್ರೀ ಅಭಿಮಾನಿಗಳ ಅವರ ನಟನೆಯನ್ನು ನೋಡಬಹುದಾಗಿದೆ.