'ಒಗ್ಗರಣೆ ಡಬ್ಬಿ'ಯಲ್ಲಿ ಉಪ್ಪಿಯ 'ಉಪ್ಪಿಟ್ಟು' ವಿಶೇಷ
ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಜನಪ್ರಿಯ ಕಾರ್ಯಕ್ರಮ 'ಒಗ್ಗರಣೆ ಡಬ್ಬಿ'. ಗೃಹಿಣಿಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿರುವ ಈ ಕಾರ್ಯಕ್ರಮದಲ್ಲಿ ತಯಾರಿಸಲಾದ ಖಾದ್ಯಗಳ ಪುಸ್ತಕವೂ ಸೂಪರ್ ಹಿಟ್ ಆಗಿದೆ. ಈ ಯಶಸ್ವಿ ಪುಸ್ತಕದ ಮೂರನೇ ಸಂಚಿಕೆಯನ್ನು ರಿಯಲ್ ಸ್ಟಾರ್ ಉಪೇಂದ್ರ ಬಿಡುಗಡೆ ಮಾಡಿದ್ದಾರೆ.
ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ನಡೆದ 'ಒಗ್ಗರಣೆ ಡಬ್ಬಿ ವರಮಹಾಲಕ್ಷ್ಮಿ ಹಬ್ಬದ ವಿಶೇಷ' ಕಾರ್ಯಕ್ರಮದ ಚಿತ್ರೀಕರಣ ಸಂದರ್ಭದಲ್ಲಿ ಉಪೇಂದ್ರ ಈ ಪುಸ್ತಕವನ್ನು ಬಿಡುಗಡೆಗೊಳಿಸಿದರು. [ಜೀ ಕನ್ನಡ 'ಒಗ್ಗರಣೆ ಡಬ್ಬಿ' ಘಮಲಿಗೆ 500ರ ಸಂಭ್ರಮ]

ವರಮಹಾಲಕ್ಷ್ಮಿ ಹಬ್ಬದ ವಿಶೇಷ ಸಂಚಿಕೆಯಲ್ಲಿ ಉಪೇಂದ್ರ ಅವರೇ ಸ್ವತಃ ಉಪ್ಪಿಟ್ಟು ತಯಾರಿಸಿದ್ದು ವಿಶೇಷ. ಆ ಬಳಿಕ ಮಾತನಾಡಿದ ಉಪೇಂದ್ರ 'ಅಡುಗೆ ಅನ್ನೋದು ಬ್ರಹ್ಮ ವಿದ್ಯೆ. ಅದೂ ಒಂದು ಕಲೆ. ಊಟವನ್ನು ನಾನು ಎಂಜಾಯ್ ಮಾಡ್ತೀನಿ. ಮಾಮೂಲಿಯಾಗಿ ಅಡುಗೆ ಹೇಗೆ ಇದ್ದರೂ ಉಪ್ಪಿನಕಾಯಿ, ಸಾಂಬಾರುಗಳನ್ನು ಸೇರಿಸಿ ನಾನೇ ಒಂದು ರುಚಿ ಕ್ರಿಯೇಟ್ ಮಾಡಿಕೊಳ್ತೀನಿ'' ಅಂತಾರೆ.
ಈ ವಿಶೇಷ ಕಾರ್ಯಕ್ರಮ ವರಮಹಾಲಕ್ಷ್ಮಿ ಹಬ್ಬದ ಶುಕ್ರವಾರದಂದು ಮಧ್ಯಾಹ್ನ 1 ರಿಂದ 2 ಘಂಟೆಯ ವರೆಗೆ ಜೀ ವಾಹಿನಿಯಲ್ಲಿ ಪ್ರಸಾರವಾಗಲಿದೆ.


Click it and Unblock the Notifications











