Don't Miss!
- News Karnataka rain: ಗುಡುಗು, ಸಿಡಿಲು ಬಡಿತದಿಂದ ರಕ್ಷಣೆ ಪಡೆಯಲು ಏನೇನು ಮಾಡಬೇಕು? ಸಲಹೆಗಳು ಇಲ್ಲಿವೆ
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Technology ನಿಮ್ಮ ಬಳಿ ರೆಡ್ಮಿಯ ಈ ಫೋನ್ ಇದ್ರೆ, ಇಲ್ಲಿದೆ ನಿಮಗೆ ಗುಡ್ನ್ಯೂಸ್!
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿರಾಸೆ ಅನುಭವಿಸಿದ ಕೋಟ್ಯಧಿಪತಿಯ ಎರಡನೇ ಸ್ಪರ್ಧಿ ವಸಂತ್
ಕನ್ನಡದ ಕೋಟ್ಯಧಿಪತಿಯ ಮೊದಲ ಸ್ಪರ್ಧಿ ದೀಪಾ ಶ್ರೀನಿವಾಸ್ ಅವರ 12.50 ಲಕ್ಷ ಗೆದ್ದು ಖುಷಿಯಿಂದ ಹೋದರು. ಬಳಿಕ ಹಾಟ್ ಸೀಟ್ ಗೆ ಆಯ್ಕೆಯಾದ ವಸಂತ್ ಉತ್ತಮ ಆಟ ಆಡಿದ್ರು. ಆದರೆ, ನಿರೀಕ್ಷಿತ ಹಣವನ್ನ ಗೆಲ್ಲುವಲ್ಲಿ ವಿಫಲವಾದರು.
ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಕೂಲಿಯಾಗಿ ಕೆಲಸ ಮಾಡುವ ವಸಂತ್ ಅವರು ಕೋಟ್ಯಧಿಪತಿಯ ಐ ಕ್ಯೂಬ್ ಟೆಸ್ಟ್ ನಲ್ಲಿ ಅತಿ ಹೆಚ್ಚು ಅಂಕ ಪಡೆದು, ಪ್ರವೇಶ ಪಡೆದುಕೊಂಡಿದ್ದರು. ಬೈಕ್ ಅಪಘಾತದಲ್ಲಿ ಕೈಗೆ ಗಾಯ ಮಾಡಿಕೊಂಡಿರುವ ವಸಂತ್, ತಮ್ಮ ಶಸ್ತ್ರ ಚಿಕಿತ್ಸೆಗಾಗಿ ಈ ಆಟ ಆಡಲು ಮುಂದಾಗಿದ್ದರು.
ಕೋಟ್ಯಧಿಪತಿಯ ಮೊದಲ ಅಭ್ಯರ್ಥಿಗೆ ಕೈಕೊಟ್ಟ 25 ಲಕ್ಷದ ಆ ಪ್ರಶ್ನೆ ಇದೇ.!
ಒಂದು ಕೋಟಿ ನನ್ನ ಟಾರ್ಗೆಟ್ ಆದರೆ 3.20 ಲಕ್ಷ ಹಣ ನಾನು ಗೆದ್ದೇ ಗೆಲ್ಲುತ್ತೇನೆ'' ಎಂಬ ಆತ್ಮವಿಶ್ವಾಸದಲ್ಲಿ ಕೋಟ್ಯಧಿಪತಿ ಆಟವಾಡಿದ ವಸಂತ್ ಗೆ ನಿರಾಸೆ ಆಯಿತು. ಹಾಗಂತ ಹಣವನ್ನೇ ಗೆದ್ದಿಲ್ಲ ಅಂತಲ್ಲ. ನಿರೀಕ್ಷೆಯ ಹಣ ಗೆಲ್ಲಲು ಸಾಧ್ಯವಾಗಲಿಲ್ಲ ಅಂತ. ಅದಕ್ಕೆ ಕಾರಣವಾಗಿದ್ದು ಆ ಒಂದು ಪ್ರಶ್ನೆ? ಮುಂದೆ ಓದಿ...
9 ಪ್ರಶ್ನೆಗೆ ಎಲ್ಲ ಲೈಫ್ ಲೈನ್ ಮುಗಿಯಿತು
ಉತ್ತಮ ಆರಂಭ ಪಡೆದುಕೊಂಡ ವಸಂತ್ ಅವರು ಮೊದಲ ಹಂತವನ್ನ ಸೇಫ್ ಆಗಿ ದಾಟಿದರು. ನಂತರ ಎರಡನೇ ಹಂತವನ್ನ ದಾಟಲು ಬರುವಷ್ಟರಲ್ಲಿ ತಮ್ಮ ಬಳಿ ಇದ್ದ ಎಲ್ಲ ಲೈಫ್ ಲೈನ್ ಗಳನ್ನ ಬಳಸಿಕೊಂಡು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದರು. ಹೀಗಾಗಿ, ಎರಡನೇ ಸೇಫ್ ಝೋನ್ ದಾಟಲು ಸಾಧ್ಯವಾಗಲಿಲ್ಲ.
ಹತ್ತನೇ ಪ್ರಶ್ನೆಗೆ ಉತ್ತರಿಸಲಿಲ್ಲ
ನಾಲ್ಕು ಲೈಫ್ ಲೈನ್ ಸಹಾಯದಿಂದ ಒಂಭತ್ತು ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದ ವಸಂತ್, ಹತ್ತನೇ ಪ್ರಶ್ನೆಗೆ ಉತ್ತರ ಕೊಟ್ಟಿಲ್ಲ. ಒಂದು ವೇಳೆ ಪ್ರಶ್ನೆಗೆ ಉತ್ತರ ಕೊಟ್ಟಿದ್ದರೇ ತಮ್ಮ ಕೈಯಲ್ಲಿ 3.20 ಲಕ್ಷ ಹಣವನ್ನ ಸೇಫ್ ಮಾಡಿಕೊಳ್ಳಬಹುದಿತ್ತು. ಆದರೆ, ಕೈಗೆ ಬಂದಿದ್ದು ಬಾಯಿಗೆ ಬಂದಿಲ್ಲ ಎನ್ನುವಂತೆ ಎರಡನೇ ಸೇಫ್ ಝೋನ್ ದಾಟಲಿಲ್ಲ.
ಮೊದಲ ಸಂಚಿಕೆಯಲ್ಲೇ ದೊಡ್ಡ ಮೊತ್ತ ಗೆದ್ದ ಕೋಟ್ಯಧಿಪತಿಯ ಮೊದಲ ಅಭ್ಯರ್ಥಿ
3.20 ಲಕ್ಷದ ಆ ಪ್ರಶ್ನೆ ಯಾವುದು?
1991ರಲ್ಲಿ ಮೊಟ್ಟಮೊದಲ ಬಾರಿ ಹೈಕೋರ್ಟ್ ಗೆ ಮಹಿಳಾ ಮುಖ್ಯನಾಯಾಧೀಶರನ್ನು ಪಡೆದ ರಾಜ್ಯ ಯಾವುದು?
A ಹಿಮಾಚಲ ಪ್ರದೇಶ
B ತಮಿಳುನಾಡು
C ಗುಜರಾತ್
D ಕೇರಳ
ಆಟ ಕ್ವಿಟ್ ಮಾಡಿದ ವಸಂತ್
ಹತ್ತನೇ ಪ್ರಶ್ನೆ ಉತ್ತರಿಸಿದ್ದರೇ ಎರಡನೇ ಸೇಫ್ ಝೋನ್ ತಲುಪಬಹುದಿತ್ತು. ಬಟ್ ಯಾವುದೇ ಲೈಫ್ ಲೈನ್ ಇಲ್ಲದ ಕಾರಣ, ಉತ್ತರದ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ ವಸಂತ್ ಅವರು ಆಟವನ್ನ ಕ್ವಿಟ್ ಮಾಡಿದರು. ಒಂಭತ್ತು ಪ್ರಶ್ನೆಗೆ ಉತ್ತರ ಕೊಟ್ಟಿದ್ದ ಕಾರಣ 1.60 ಲಕ್ಷವನ್ನ ಮನೆಗೆ ತೆಗೆದುಕೊಂಡು ಹೋದರು.
(ಹತ್ತನೇ ಪ್ರಶ್ನೆಗೆ ಸರಿ ಉತ್ತರ, A ಹಿಮಾಚಲ ಪ್ರದೇಶ)