Don't Miss!
- Sports 'ಟಿ20 ವಿಶ್ವಕಪ್ಗೆ ಈತನನ್ನು ಆಯ್ಕೆ ಮಾಡಿ'; ಅಜಿತ್ ಅಗರ್ಕರ್ಗೆ ಬಂತು ದೊಡ್ಡ ಮನವಿ!
- Finance ಡಾ. ರಾಜ್ಕುಮಾರ್ ಜನ್ಮದಿನದಂದು ಹೊಸ ಉದ್ಯಮ ಆರಂಭಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- News Realme Narzo 70: ಭರ್ಜರಿ ಕ್ಯಾಮೆರಾ ಫೀಚರ್ಗಳೊಂದಿಗೆ ರಿಯಲ್ಮಿ ನಾರ್ಜೊ 70 ಗ್ರ್ಯಾಂಡ್ ಲಾಂಚ್
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡಾ ವಿಷ್ಣುವರ್ಧನ್ ಭಕ್ತಿ ಬಗ್ಗೆ ವೀರೇಂದ್ರ ಹೆಗ್ಗಡೆ ಹೇಳಿದ ಕಥೆ ಕೇಳಿ
Recommended Video
ಧರ್ಮಸ್ಥಳಕ್ಕೂ ಸಿನಿಮಾರಂಗದವರಿಗೂ ಅವಿನಾಭಾವ ಸಂಬಂಧ. ಡಾ ರಾಜ್ ಕುಮಾರ್, ವಿಷ್ಣುವರ್ಧನ್ ಅವರಿಂದ ಹಿಡಿದು, ಇಂದಿನ ನಟರವರೆಗೂ ಎಲ್ಲರೂ ಆ ಕ್ಷೇತ್ರಕ್ಕೆ ಭಕ್ತರೇ. ಅದರಲ್ಲೂ ಅಣ್ಣಾವ್ರು ಮತ್ತು ವಿಷ್ಣುವರ್ಧನ್ ಅವರಿಗೆ ಈ ಕ್ಷೇತ್ರದ ಮೇಲೆ ಹೆಚ್ಚು ಅಭಿಮಾನವಿತ್ತು.
ಈ ಬಗ್ಗೆ ಸ್ವತಃ ವೀರೇಂದ್ರ ಹೆಗ್ಗಡೆ ಅವರೇ ಹೇಳಿದ್ದಾರೆ. 'ರಾಜ್ ಕುಮಾರ್ ಅವರು ಧರ್ಮಸ್ಥಳಕ್ಕೆ ಬಹಳ ಭಕ್ತಿಯಿಂದ ನಡೆದುಕೊಳ್ಳುತ್ತಿದ್ದರು. ಅವರ ಸಿನಿಮಾವೊಂದು ಕೂಡ ಅಲ್ಲಿ ಚಿತ್ರೀಕರಣ ಆಗಿದೆ' ಎಂದು ರಾಜ್ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು, ರಾಜ್ ಮತ್ತು ವಿಷ್ಣು ಅವರ ಭಕ್ತಿ ಬಗ್ಗೆ ವಿವರಿಸಿದರು. ಇದೇ ಸಂದರ್ಭದಲ್ಲಿ ಯಶ್, ಪುನೀತ್, ರಾಘಣ್ಣ ಹೆಗ್ಗಡೆ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗಿದ್ರೆ, ವಿಷ್ಣು ಬಗ್ಗೆ ಹೆಗ್ಗಡೆ ಹೇಳಿದ ಕಥೆ ಏನು? ಮುಂದೆ ಓದಿ...
ಕಾಲ ಬಳಿ ಕೂರುತ್ತಿದ್ದ ವಿಷ್ಣುವರ್ಧನ್
ವಿಷ್ಣುವರ್ಧನ್ ಅವರ ಬಗ್ಗೆ ಹೇಳುತ್ತಾ 'ವಿಷ್ಣುವರ್ಧನ್ ಬಹಳ ಗೌರವ ಕೊಡುತ್ತಿದ್ದರು. ಎಲ್ಲಿಯವರೆಗೂ ಅಂದ್ರೆ ಅವರು ಬಂದಾಗ 'ನೀವು ಕುರ್ಚಿಯಲ್ಲಿ ಕುಳಿತುಕೊಳ್ಳಿ ಅಂದ್ರೆ ಇಲ್ಲ ಇಲ್ಲ ಎಂದು ಕಾಲು ಬಳಿಯೇ ಕೂರುತ್ತಿದ್ದರು'' ಎಂದು ವೀರೇಂದ್ರ ಹೆಗ್ಗಡೆ ಅವರು ಹೇಳಿದ್ದಾರೆ
ಊಟಕ್ಕೂ ಹೋಗುತ್ತಿರಲಿಲ್ಲ
ಹೀಗೆ ಮಾತನಾಡುತ್ತಾ ಕೂರುತ್ತಿದ್ದ ವಿಷ್ಣುವರ್ಧನ್, 'ಆಮೇಲೆ ನಿಮಗೆ ಸಮಯ ಆಯ್ತು, ಊಟಕ್ಕೆ ಹೋಗಿ ಅಂದ್ರೆ ಇಲ್ಲ ಗುರುಗಳೇ ನೀವು ಮಾತಾಡಿ, ನಾನು ಕೇಳ್ತಾ ಇರ್ತಿನಿ' ಅಂತ ಇರ್ತಿದ್ರು' ಎಂದು ಅವರ ಭಕ್ತಿಯ ಬಗ್ಗೆ ವಿವರಿಸಿದರು.
ಸಿನಿಮಾರಂಗದವರು ಪ್ರದರ್ಶನ ಮಾಡಲ್ಲ
''ಸಿನಿಮಾದವರು ತುಂಬಾ ಜನರ ಬರ್ತಾರೆ, ಆದ್ರೆ ಇಲ್ಲಿ ಬಂದು ಯಾರೂ ಪ್ರದರ್ಶನ ಮಾಡಲ್ಲ. ಬಹಳ ಸಂಯಮದಿಂದ, ಸೌಜನ್ಯದಿಂದ ಬಂದು ದರ್ಶನ ಮಾಡಿಕೊಂಡಿ ಹೋಗ್ತಾರೆ'' ಎಂದು ವೀರೇಂದ್ರ ಹೆಗ್ಗಡೆ ಅವರು ಹೇಳಿದರು.
ಸ್ಟಾರ್ ನಟರು ಮೆಚ್ಚುಗೆ
ಇನ್ನು ವೀಕೆಂಡ್ ವಿತ್ ರಮೇಶ್ ಸಾಧಕರ ಕುರ್ಚಿಯಲ್ಲಿ ಕೂತಿದ್ದ ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ಮಾತನಾಡಿದ ನಟ ಯಶ್, ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಎಲ್ಲರೂ ಧರ್ಮಸ್ಥಳದ ಪುಣ್ಯ ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.