Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಮಣ್ ಕೈಗೆ 'ಅವನಿ' ಸಿಗಲ್ಲ: ಧಾರಾವಾಹಿ ಮುಗಿಯಲ್ಲ.!
Recommended Video
ಕಲರ್ಸ್ ಕನ್ನಡ ವಾಹಿನಿಯಲ್ಲಿ 'ರಾಧಾ ರಮಣ' ಧಾರಾವಾಹಿಯಲ್ಲಿ 'ಅವನಿ ಆಗಮನ' ಅಧ್ಯಾಯ ಆರಂಭ ಆಗಿ ವಾರಗಳೇ ಉರುಳಿವೆ. ಆದರೆ ಇನ್ನೂ, 'ಅವನಿ' ದರ್ಶನ ವೀಕ್ಷಕರಿಗೆ ಆಗಿಲ್ಲ. ಕುಟುಂಬದವರ ಕೈಗೂ ಇನ್ನೂ 'ಅವನಿ' ಸಿಕ್ಕಿಲ್ಲ.
'ಅವನಿ'ಗೆ ಆಪರೇಷನ್ ಮುಗಿದ್ಮೇಲೆ, ಆಸ್ಪತ್ರೆಯಿಂದಲೇ ಆಂಬ್ಯುಲೆನ್ಸ್ ಮೂಲಕ ಆಕೆಯನ್ನ ರುದ್ರ ಕಿಡ್ನ್ಯಾಪ್ ಮಾಡಿಕೊಂಡು ಹೋಗಿದ್ದಾನೆ. ಆಂಬ್ಯುಲೆನ್ಸ್ ಹಿಂದೆ ರಮಣ್ ಓಡಿ ಹೋಗಿ, ಆಂಬ್ಯುಲೆನ್ಸ್ ಹತ್ತಿದರೂ ಪ್ರಯೋಜನ ಆಗಲಿಲ್ಲ. 'ಅವನಿ' ರಮಣ್ ಕೈಗೆ ಸಿಗಲಿಲ್ಲ.
ಬೇರೆ ದಾರಿ ಕಾಣದೆ, ರಮಣ್ ಸದ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕುತಂತ್ರಿ ಸಿತಾರ ದೇವಿಗೆ ಸದ್ಯ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಂಥ ಅನುಭವ ಆಗಿದೆ. ಇತ್ತ ರುದ್ರ ಚಾಲನೆ ಮಾಡುತ್ತಿದ್ದ ಆಂಬ್ಯುಲೆನ್ಸ್ ಪಂಚರ್ ಆಗಿ ದೇವಸ್ಥಾನವೊಂದರ ಮುಂಭಾಗ ಸೇರಿದೆ.
ಹೀಗೆ, ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಟ್ಟು, ಧಾರಾವಾಹಿಯ ಕಥೆಯನ್ನು ರಬ್ಬರ್ ಎಳೆದ ಹಾಗೆ ಎಳೆಯುತ್ತಿರುವುದನ್ನ ನೋಡಿ ನೋಡಿ ವೀಕ್ಷಕರಿಗೆ ಬೇಸರ ಆಗಿದೆ. ''ರಮಣ್ ಕೈಗೆ ಅವನಿ ಸಿಗಲ್ಲ. ಧಾರಾವಾಹಿ ಮುಗಿಯಲ್ಲ'' ಎಂದು ವೀಕ್ಷಕರು 'ಕಲರ್ಸ್ ಕನ್ನಡ' ಅಫೀಶಿಯಲ್ ಫೇಸ್ ಬುಕ್ ಪುಟದಲ್ಲೇ ಕಾಮೆಂಟ್ ಮಾಡುತ್ತಿದ್ದಾರೆ. ಮುಂದೆ ಓದಿರಿ...
ಕೈಗೆ ಸಿಗಲ್ಲ, ಹುಡುಕಾಟ ನಿಲ್ಲಲ್ಲ.!
''ರಮಣ್ ಕೈಗೆ ಅವನಿ ಸಿಗಲ್ಲ. ಹುಡುಕಾಟ ನಿಲ್ಲಲ್ಲ. ಧಾರಾವಾಹಿ ಮುಗಿಯುವುದಿಲ್ಲ ಎಂಬುದು ನಮಗೆ ಗೊತ್ತು'' ಎಂದು ವೀಕ್ಷಕರು ಕಲರ್ಸ್ ಕನ್ನಡ ವಾಹಿನಿಯ ಅಫೀಶಿಯಲ್ ಫೇಸ್ ಬುಕ್ ಪುಟದಲ್ಲೇ ವ್ಯಂಗ್ಯವಾಡುತ್ತಿದ್ದಾರೆ.
'ಅವನಿ' ಅಲ್ಲಿರಲ್ಲ, ಚಾಲೆಂಜ್ ಮಾಡ್ತೀರಾ.? ಬೇಕಾದರೆ ಬೆಟ್ ಕಟ್ಟಿ.!
ಗೋಳು ಕೇಳೋರು ಯಾರು ಇಲ್ಲವೇ.?
'ರಾಧಾ ರಮಣ' ಧಾರಾವಾಹಿ ಕಥೆ ಸಾಗುತ್ತಿರುವ ರೀತಿ ನೋಡಿ ಸಿಟ್ಟಾದ ವೀಕ್ಷಕರು ಮಾಡಿರುವ ತರಹೇವಾರಿ ಕಾಮೆಂಟ್ಸ್ ಇಲ್ಲಿದೆ ನೋಡಿ...
ಭಪ್ಪರೇ!! 'ಅವನಿ' ಬದುಕಿರುವ ಗುಟ್ಟು ರಾಧಾ ಮುಂದೆ ರಟ್ಟು!
ಶತಮಾನ ಕಳೆದರೂ ಸಿಗುವುದು ಅನುಮಾನ
''ಬಹುಶಃ ಅವನಿ ನೋಡಬೇಕು ಅಂದ್ರೆ ಇನ್ನೂ ಸಾವಿರಾರು ವರ್ಷ ಕಾಯಿರಿ. ಶತಮಾನ ಕಳೆದರೂ ಸಿಗುವುದು ಅನುಮಾನ'' ಎಂದು ವೀಕ್ಷಕರು ಫೇಸ್ ಬುಕ್ ನಲ್ಲಿ ಲೇವಡಿ ಮಾಡಿದ್ದಾರೆ.
ಅತ್ತ ವಿನಯ್ ಕೊಲೆ, ಇತ್ತ 'ಅವನಿ' ಕಾಣೆ: ಅಯ್ಯೋ ದೇವರೇ.!
ನಿಮ್ಮ ಅಭಿಪ್ರಾಯ ಏನು.?
'ರಾಧಾ ರಮಣ' ಧಾರಾವಾಹಿ ಹಾಗೂ ಅವನಿ ಅಧ್ಯಾಯದ ಬಗ್ಗೆ ನಿಮ್ಮ ಅಭಿಪ್ರಾಯ ಏನು.? ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.