Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ 'ಅವನಿ' ರಿಯಲ್ಲೋ, ಡ್ಯೂಪ್ಲಿಕೇಟೋ.? ಫೇಸ್ ಬುಕ್ ನಲ್ಲಿ ಫುಲ್ ಡಿಬೇಟು.!
Recommended Video
ತಲೆಬುಡ ಇಲ್ಲದ ಟ್ವಿಸ್ಟ್ ಕೊಟ್ಟು ಧಾರಾವಾಹಿಯನ್ನ ರಬ್ಬರ್ ಎಳೆದ ಹಾಗೆ ಎಳೆಯೋದು ಬಿಟ್ಟು, ಸೀರಿಯಲ್ ಗೆ ಬೇಗ ಶುಭಂ ಹಾಡಿ ಅಂತ ವೀಕ್ಷಕರು ಬೊಂಬಡ ಹೊಡೆಯುವುದುಂಟು. ಅಚ್ಚರಿ ಅಂದ್ರೆ, 'ರಾಧಾ ರಮಣ' ಧಾರಾವಾಹಿ ಬಗ್ಗೆ ಹಾಗಾಗುತ್ತಿಲ್ಲ.
'ರಾಧಾ ರಮಣ' ಧಾರಾವಾಹಿಯಲ್ಲಿ 'ಅವನಿ ಆಗಮನ' ಅಧ್ಯಾಯ ಶುರುವಾಗಿ ವಾರಗಳೇ ಉರುಳಿವೆ. ಇಷ್ಟು ದಿನ ''ಅವನಿ'ಯನ್ನ ಬೇಗ ರಮಣ್ ಕೈ ಸೇರಿಸಿ'' ಅಂತ ವೀಕ್ಷಕರು ಒತ್ತಾಯ ಮಾಡುತ್ತಿದ್ದರು. ವೀಕ್ಷಕರ ಇಚ್ಛೆಯಂತೆ 'ಅವನಿ' ರಮಣ್ ಗೆ ಸಿಕ್ಕಿದ್ದಾಯ್ತು. ಇದಕ್ಕೆ ಖುಷಿ ಪಡುವುದು ಬಿಟ್ಟು, ಹೊಸ ಡಿಬೇಟ್ ನಲ್ಲಿ ವೀಕ್ಷಕರು ತೊಡಗಿದ್ದಾರೆ.
''ರಮಣ್ ಗೆ ಸಿಕ್ಕಿರುವ 'ಅವನಿ' ರಿಯಲ್ ಅಲ್ಲ. ಆಕೆ ಡ್ಯೂಪ್ಲಿಕೇಟ್. ಸಿತಾರ ದೇವಿ ರಾತ್ರೋರಾತ್ರಿ ಮಾಸ್ಟರ್ ಪ್ಲಾನ್ ಮಾಡಿ, ಆಂಬ್ಯುಲೆನ್ಸ್ ನಿಂದ ಒರಿಜಿನಲ್ 'ಅವನಿ'ಯನ್ನ ಎಸ್ಕೇಪ್ ಮಾಡಿಸಿ, ಆ ಜಾಗಕ್ಕೆ ಬೇರೆಯವರನ್ನ ತಂದಿದ್ದಾರೆ'' ಅಂತ ವೀಕ್ಷಕರು ಊಹೆ ಮಾಡ್ತಿದ್ದಾರೆ.
ಅಷ್ಟಕ್ಕೂ, ಈ ಐಡಿಯಾ 'ರಾಧಾ ರಮಣ' ಧಾರಾವಾಹಿಯ ನಿರ್ದೇಶಕರಿಗೆ ಹೊಳೆದಿದ್ಯೋ, ಇಲ್ವೋ.. ಗೊತ್ತಿಲ್ಲ. ಆದ್ರೆ, ವೀಕ್ಷಕರು ಮಾತ್ರ ಕಲ್ಪನೆ ಮಾಡಿಕೊಳ್ತಿದ್ದಾರೆ. 'ರಾಧಾ ರಮಣ' ಧಾರಾವಾಹಿಯನ್ನ ತಪ್ಪದೆ ನೋಡುವ ವೀಕ್ಷಕರು, ಕ್ಯಾರೆಕ್ಟರ್ ಗಳ ಬಗ್ಗೆ ಎಷ್ಟು ಡೀಪ್ ಗಾಗಿ ಯೋಚನೆ ಮಾಡ್ತಿದ್ದಾರೆ ಅನ್ನೋದಕ್ಕೆ ಇದೇ ಸಾಕ್ಷಿ. ಮುಂದೆ ಓದಿರಿ...
ಕಾಮೆಂಟ್ ಮಾಡುತ್ತಿದ್ದಾರೆ ವೀಕ್ಷಕರು
'ರಾಧಾ ರಮಣ' ಧಾರಾವಾಹಿಯಲ್ಲಿ ಇರಬಹುದಾದ ಹೊಸ ಟ್ವಿಸ್ಟ್ ಬಗ್ಗೆ ವೀಕ್ಷಕರು ಕಲರ್ಸ್ ಕನ್ನಡ ವಾಹಿನಿಯ ಅಫೀಶಿಯಲ್ ಫೇಸ್ ಬುಕ್ ಪುಟದಲ್ಲಿಯೇ ಕಾಮೆಂಟ್ ಮಾಡುತ್ತಿದ್ದಾರೆ. ಅಂತಹ ಕೆಲವು ಕಾಮೆಂಟ್ ಗಳು ಇಲ್ಲಿವೆ, ನೋಡಿ...
'ರಾಧಾ ರಮಣ': ವೀಕ್ಷಕರಿಗೆ ಕಾದಿದ್ಯಾ ಬ್ಯಾಡ್ ನ್ಯೂಸ್.?
ಆಶಿತಾ ಒರಿಜಿನಲ್ 'ಅವನಿ' ಅಲ್ಲ
''ಆಶಿತಾ ಒರಿಜಿನಲ್ 'ಅವನಿ' ಅಲ್ಲ. ಸಿತಾರ ದೇವಿ ಅದಾಗಲೇ 'ಅವನಿ'ಯನ್ನ ಕಿಡ್ನ್ಯಾಪ್ ಮಾಡಿದ್ದಾಗಿದೆ. ಇದೇ ಕಾರಣಕ್ಕೆ ಮೊದಲಿನಿಂದಲೂ, 'ಅವನಿ' ಮುಖವನ್ನ ತೋರಿಸಿಲ್ಲ'' ಎಂಬುದು ವೀಕ್ಷಕರ ಅಭಿಪ್ರಾಯ
ಇಷ್ಟು ದಿನ ಸಸ್ಪೆನ್ಸ್ ಕೊಟ್ಟಿದ್ದು ಅವಳಿಗಾ? 'ಬಿಗ್ ಬಾಸ್' ಬಳಿಕ ಆಶಿತಾ ಮಾಡ್ತಿರೋದು ಇದೇನಾ?
ಇನ್ನೊಬ್ಳು ವಿಲನ್
''ಆಶಿತಾ ಇನ್ನೊಬ್ಳು ವಿಲನ್ ಇರಬೇಕು. ಆಶಿತಾ ಕೂಡ ಸಿತಾರ ಕಡೆಯವಳು ಅನ್ಸುತ್ತೆ. ಪ್ರೀ ಪ್ಲಾನ್ ಮಾಡಿ, ಅವಳ ಜಾಗಕ್ಕೆ ಬೇರೆಯವಳನ್ನ ಇಟ್ಟಿದ್ದಾಳೆ ಅನ್ಸುತ್ತೆ'' ಅಂತ ವೀಕ್ಷಕರು ಊಹೆ ಮಾಡ್ತಿದ್ದಾರೆ.
ಅಂತೂ ಇಂತೂ 'ಅವನಿ' ಸಿಕ್ಕಳು: ಎಲ್ಲರ ಮೊಗದಲ್ಲೂ ಮೂಡಿದೆ ನಗು.!
ಆಕೆ 'ಅವನಿ' ಯಾಕಲ್ಲ ಅಂದ್ರೆ...
''ಆಶಿತಾ 'ಅವನಿ' ಅಲ್ಲ. ಯಾಕಂದ್ರೆ, 'ಅವನಿ'ಯನ್ನ ಭಿಕ್ಷುಕ ನೋಡಿದಾಗ, ಅವನ ಎಕ್ಸ್ ಪ್ರೆಶನ್ ಒಂಥರಾ ಇತ್ತು'' ಅಂತ ನಿರ್ಧಾರಕ್ಕೆ ಬಂದುಬಿಟ್ಟಿದ್ದಾರೆ ವೀಕ್ಷಕರು.
ರಮಣ್ ಕೈಗೆ 'ಅವನಿ' ಸಿಗಲ್ಲ: ಧಾರಾವಾಹಿ ಮುಗಿಯಲ್ಲ.!
ಡ್ಯೂಪ್ಲಿಕೇಟ್ 'ಅವನಿ'
''ಅವನಿ'ಯನ್ನ ಸಿತಾರ ದೇವಿ ಎಸ್ಕೇಪ್ ಮಾಡಿ ಆಯ್ತು. ಇದು ಡ್ಯೂಪ್ಲಿಕೇಟ್ ಅವನಿ'' ಅನ್ನೋದು ವೀಕ್ಷಕರ ಲೆಕ್ಕಾಚಾರ.
ಅತ್ತ ವಿನಯ್ ಕೊಲೆ, ಇತ್ತ 'ಅವನಿ' ಕಾಣೆ: ಅಯ್ಯೋ ದೇವರೇ.!
ದಿನಕರ್ ಮರ್ಡರ್ ಆಗಿರಬಹುದು.!
''ಅವನಿ'ಗೆ ಸಂಬಂಧಪಟ್ಟಂತೆ ಒಂದೇ ದಿನ ಎರಡು ಮರ್ಡರ್ ಆಗಿದೆ'' ಅಂತ ಪೊಲೀಸರು ಹೇಳಿದ್ರಿಂದ ''ದಿನಕರ್ ಕೂಡ ಮರ್ಡರ್ ಆಗಿರಬಹುದು'' ಅಂತ ವೀಕ್ಷಕರು ಡಿಬೇಟ್ ಮಾಡ್ತಿದ್ದಾರೆ.