Don't Miss!
- News Lok Sabha Election 2024: ಈ 6 ಜಿಲ್ಲೆಗಳಲ್ಲಿ 0% ಮತದಾನ-ಎಲ್ಲಿ ಹಾಗೂ ಕಾರಣ ಏನು?
- Automobiles ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Lifestyle 5 ನಿಮಿಷದಲ್ಲಿ ಪಾತ್ರೆಯನ್ನು ಹೊಳೆಯುವಂತೆ ಮಾಡಿ..! ಸುಲಭದ ಟಿಪ್ಸ್ ಇಲ್ಲಿದೆ
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೊಟ್ಟ ಬಿಲ್ಡಪ್ ಒಂದು, ಮಾದ ಮಾಡಿದ್ದು ಮತ್ತೊಂದು: ತಲೆ ಚಚ್ಚಿಕೊಂಡ ವೀಕ್ಷಕರು.!
'ಕಲರ್ಸ್ ಕನ್ನಡ' ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ರಾಧಾ ರಮಣ' ಧಾರಾವಾಹಿಯಲ್ಲಿ 'ಅವನಿ ಅಧ್ಯಾಯ' ಹಾಗೂ 'ವಿವಾಹ ವಾರ್ಷಿಕೋತ್ಸವ' ಅಧ್ಯಾಯಗಳು ಸಮಾಪ್ತಿ ಆಯ್ತು. ಆದರೂ, ಇಲ್ಲಿಯವರೆಗೂ ನಿಜವಾದ ಅವನಿ ಮನೆಯವರಿಗೆ ಸಿಕ್ಕಿಲ್ಲ. ರಾಧಾ-ರಮಣ ವಿವಾಹ ವಾರ್ಷಿಕೋತ್ಸವ ಆಚರಿಸಲಿಲ್ಲ.
ರಾಧಾ ಹಾಗೂ ರಮಣ ಸುತ್ತ ಸುತ್ತಬೇಕಿದ್ದ ಕಥೆ, ಇದೀಗ 'ಅವನಿ' ಸುತ್ತ ಗಿರಕಿ ಹೊಡೆಯುತ್ತಿದೆ. ನಿಜವಾದ 'ಅವನಿ'ಯನ್ನ ತೋರಿಸದೆ, ಡ್ಯೂಪ್ಲಿಕೇಟ್ ಅವನಿ ಹಾಗೂ ಅವಳ ನಾಟಕಗಳನ್ನೇ ಹೈಲೈಟ್ ಮಾಡಲಾಗುತ್ತಿದೆ.
ಅವನಿ ಹೆಸರಿನಲ್ಲಿ ಮನೆಗೆ ಬಂದಿರುವ 'ಕಳ್ಳಿ' ರಾಣಿ ಮುಖವಾಡ ಬಯಲಾಗಲ್ಲ. ಸಿತಾರ ದೇವಿ ಸಿಕ್ಕಿಬೀಳಲ್ಲ ಎಂಬಂತಾಗಿದೆ ಈಗಿನ ಧಾರಾವಾಹಿಯ ಸ್ಥಿತಿ.
ಇಲ್ಲಿಯವರೆಗೂ ''ಎಲ್ಲರ ಮುಂದೆ ಸತ್ಯ ಹೇಳಿ, ರಾಣಿಯನ್ನ ವಾಪಸ್ ಕರೆದುಕೊಂಡು ಹೋಗುವೆ'' ಅಂತ ಹೇಳಿ ಬಿಲ್ಡಪ್ ಕೊಡುತ್ತಿದ್ದ ಮಾದ ಇದೀಗ ಏಕಾಏಕಿ ಉಲ್ಟಾ ಹೊಡೆದಿದ್ದಾನೆ. ಸಿತಾರ ದೇವಿ ಪ್ಲಾನ್ ಗೆ ಕೌಂಟರ್ ಪ್ಲಾನ್ ಮಾಡಿದ್ದಾನೆ.
ವೀಕ್ಷಕರಿಗೆ ಇದನ್ನೆಲ್ಲ ನೋಡಿ ನೋಡಿ ಕಿರಿಕಿರಿ ಆಗಿದೆ. ಎಂದೂ ಮುಗಿಯದ 'ರಾಧಾ ರಮಣ' ಧಾರಾವಾಹಿ ಬಗ್ಗೆ ಬೇಸರಗೊಂಡ ವೀಕ್ಷಕರು ಫೇಸ್ ಬುಕ್ ನಲ್ಲಿ ಮಾಡಿರುವ ಕೆಲ ಕಾಮೆಂಟ್ಸ್ ಇಲ್ಲಿವೆ ನೋಡಿ...
ಹೊಸ ಸ್ಕೆಚ್ ಹಾಕಿದ ಮಾದ
ಅವನಿ (ರಾಣಿ) ಹೆಸರಿಗೆ ಸದ್ಯ ಆಸ್ಟ್ರೇಲಿಯಾ ಪ್ರಾಜೆಕ್ಟ್ ಹೋಗಿದೆ. ಅಲ್ಲಿಗೆ, ರಾಣಿ ಕೈಯಲ್ಲಿ ಕೋಟ್ಯಾಂತರ ರೂಪಾಯಿ ಆಸ್ತಿ ಇದೆ ಅಂತ ಗೊತ್ತಾದ್ಮೇಲೆ, ಮಾದ ಹೊಸ ಸ್ಕೆಚ್ ಹಾಕಿದ್ದಾನೆ. ''ಅವನಿ ಅಂದ್ರೆ ನನಗೆ ಇಷ್ಟ. ದಯವಿಟ್ಟು ಅವಳನ್ನ ನನ್ನಿಂದ ದೂರ ಮಾಡಬೇಡಿ'' ಅಂತ ರಮಣ್ ಮುಂದೆ ಮಾದ ಬೇಡಿಕೊಂಡಿದ್ದಾನೆ.
ದಾರಿ ತಪ್ಪುತ್ತಿದೆ 'ರಾಧಾ ರಮಣ' ಕಥೆ: ವೀಕ್ಷಕರದ್ದು ಬರೀ ವ್ಯಥೆ.!
ರಮಣ್ ಒಪ್ಪಿದರೆ ಮಾದನ ಲೈನ್ ಕ್ಲಿಯರ್
ಮಾದನ ಪ್ರೀತಿಗೆ ರಮಣ್ ಸಮ್ಮತಿಸಿದರೆ... ಇಡೀ ಜೀವನ ಪೂರ್ತಿ ರಾಣಿ-ಮಾದ ಕೂತು ತಿನ್ನಬಹುದು. ಹೀಗಾಗಿ, ಮಾದ ಈ ಪ್ಲಾನ್ ಮಾಡಿದ್ದಾನೆ. ಮಾದ ಹೀಗೆ ಉಲ್ಟಾ ಹೊಡೆದಿರುವುದು ದೀಪಿಕಾಗೆ ಗೊತ್ತಿಲ್ಲ. ಅಸಲಿಗೆ, ಈ ರಾಣಿ, ಮಾದ, ಸಿತಾರ ಮಾಡುತ್ತಿರುವ ನಾಟಕ ದೀಪಿಕಾ ಹಾಗೂ ದಿನಕರ್ ಗೆ ಬಿಟ್ಟರೆ ಇನ್ಯಾರಿಗೂ ಗೊತ್ತಿಲ್ಲ. ಗೊತ್ತಾಗುವುದಕ್ಕೆ ನಿರ್ದೇಶಕರು ಬಿಡುತ್ತಲೇ ಇಲ್ಲ. ಇದಕ್ಕೆ ನೋಡಿ ವೀಕ್ಷಕರಿಗೆ ಕಿರಿಕಿರಿ ಆಗಿರುವುದು.!
ಫ್ಲಾಪ್ ಆಯ್ತು ಸಿತಾರ ದೇವಿ ಪ್ಲಾನ್: ಪೊಲೀಸ್ ಸ್ಟೇಷನ್ ನಲ್ಲಿ ರಮಣ್.!
ಸೀರಿಯಲ್ ಬೋರಿಂಗ್.!
'ರಾಧಾ ರಮಣ' ಸೀರಿಯಲ್ ತುಂಬಾ ಬೋರಿಂಗ್ ಆಗಿದೆ. ವೀಕ್ಷಕರು ಇಂಟ್ರೆಸ್ಟ್ ಕಳೆದುಕೊಳ್ಳುತ್ತಿದ್ದಾರೆ ಅನ್ನೋದಕ್ಕೆ ಈ ಕಾಮೆಂಟ್ ಗಳೇ ಸಾಕ್ಷಿ.
ಸಿತಾರ ದೇವಿ ಆಸೆ ನುಚ್ಚುನೂರು: ಅವನಿ ಹೆಸರಿಗೆ ಕೋಟ್ಯಾಂತರ ರೂಪಾಯಿ ಆಸ್ತಿ.!
ಅವನಿ ಮದುವೆ ಸ್ಟೋರಿ ಶುರುವಾಗುತ್ತೆ...
'ರಾಧಾ ರಮಣ' ಕಥೆಯ ದಿಕ್ಕು ಹೋಗುತ್ತಿರುವುದನ್ನು ನೋಡಿದರೆ, ಮುಂದಿನ ವಾರದಿಂದ 'ಅವನಿ ಮದುವೆ ಅಧ್ಯಾಯ' ಶುರುವಾಗುತ್ತೆ ಅಂತ ಲೇವಡಿ ಮಾಡುತ್ತಿದ್ದಾರೆ ವೀಕ್ಷಕರು.
ಕರ್ಮ ಕರ್ಮ
''ಸಿತಾರ ಆಡುವ ಆಟ ಸಾಲದು ಅಂತ ಇವನು ಬೇರೆ ಹುಟ್ಟುಕೊಂಡ, ಅಯ್ಯೋ ಕರ್ಮ ಕರ್ಮ ನೋಡುವವರಿಗೆ ಹುಚ್ಚು'' ಅಂತ ವೀಕ್ಷಕರು ತಲೆ ಚಚ್ಚಿಕೊಳ್ತಿದ್ದಾರೆ.
ಫ್ಯಾನ್ಸ್ ಗೆ ಬೇಸರ
'ರಾಧಾ ರಮಣ' ಧಾರಾವಾಹಿ ಹೋಗುತ್ತಿರುವ ರೀತಿ ನೋಡಿ ಫ್ಯಾನ್ಸ್ ಗೆ ಬೇಸರ ಆಗಿದೆ. ಈಗಲೇ ನಿರ್ದೇಶಕರು ಎಚ್ಚೆತ್ತುಕೊಂಡು, ಕಥೆಗೆ ವೇಗ ಕೊಟ್ಟರೆ ಒಳಿತು. ಇಲ್ಲದಿದ್ದರೆ, ಟಿ.ಆರ್.ಪಿಯಲ್ಲಿ ಅವರಿಗೇ ಲಾಸು.!