twitter
    For Quick Alerts
    ALLOW NOTIFICATIONS  
    For Daily Alerts

    ಅಮ್ಮಂದಿರ ಜೊತೆಗೆ ಹಾಡಿದ ವಿಜಯ ಪ್ರಕಾಶ್ ಮತ್ತು ಅರ್ಜುನ್ ಜನ್ಯ

    By Naveen
    |

    Recommended Video

    ಹೇಗಿದೆ ಸ್ಯಾಂಡಲ್ವುಡ್ ಸಿಂಗರ್ಸ್ ಅಮ್ಮ -ಮಕ್ಕಳ ಜೋಡಿ ? | Filmibeat Kannada

    'ಸರಿಗಮಪ ಸೀಸನ್ 14' ಕಾರ್ಯಕ್ರಮ ಅನೇಕ ವಿಶೇಷತೆಗಳನ್ನು ಹೊಂದಿತ್ತು. ಅದರಲ್ಲಿಯೂ ಕಾರ್ಯಕ್ರಮದಲ್ಲಿ ತೀರ್ಪುಗಾರರಾದ ವಿಜಯ್ ಪ್ರಕಾಶ್ ಹಾಗೂ ಅರ್ಜುನ್ ಜನ್ಯ ಅವರ ತಾಯಂದಿರು ಸೆಮಿ ಫೈನಲ್ ಸಂಚಿಕೆಗೆ ಆಗಮಿಸಿ ಮಕ್ಕಳ ಹಾಡು ಕೇಳಿ ಆನಂದಿಸಿದರು.

    ವಿಜಯ್ ಪ್ರಕಾಶ್ ಮತ್ತು ಅರ್ಜುನ್ ಜನ್ಯ ಇಬ್ಬರಿಗೆ ಸರ್ಪೈಸ್ ನೀಡುವ ಉದ್ದೇಶದಿಂದ ಅವರಿಗೆ ತಿಳಿಯದಂತೆ ಅವರ ಅಮ್ಮಂದಿರನ್ನು ಕಾರ್ಯಕ್ರಮಕ್ಕೆ ಕರೆ ತರಲಾಗಿತ್ತು. ಇದ್ದಕ್ಕಿದ್ದ ಹಾಗೆ, ಶೋ ನಲ್ಲಿ ತಮ್ಮ ತಾಯಂದಿರನ್ನು ನೋಡಿ ಇಬ್ಬರು ಖುಷಿ ಆದರು. ಆ ಸಂದರ್ಭ ನೋಡುಗರಿಗೆ ತುಂಬ ಇಷ್ಟ ಆಗುವಂತೆ ಇತ್ತು.

    'ಸರಿಗಮಪ 14' ಫೈನಲ್ ಗೆ ಆಯ್ಕೆ ಆದ ಟಾಪ್ 5 ಸ್ಪರ್ಧಿಗಳು ಇವರೇ! 'ಸರಿಗಮಪ 14' ಫೈನಲ್ ಗೆ ಆಯ್ಕೆ ಆದ ಟಾಪ್ 5 ಸ್ಪರ್ಧಿಗಳು ಇವರೇ!

    ಇನ್ನು ವಿಜಯ್ ಪ್ರಕಾಶ್ ಜೊತೆ ಸೇರಿ ಅವರ ತಾಯಿ ಹಾಡು ಹಾಡಿದರು. ಮಗನೇ ಹಾಡಿದ್ದ 'ಗೊಂಬೆ ಹೇಳುತೈತೆ..' ಹಾಗೂ 'ಬೆಳಗೆದ್ದು..' ಹಾಡಿಗೆ ವಿಪಿ ತಾಯಿ ಧ್ವನಿ ನೀಡಿದರು. ಅಮ್ಮ ಮಗ ಇಬ್ಬರ ಜೋಡಿಯ ಹಾಡುಗಳು ಸಖತ್ ಖುಷಿ ಕೊಟ್ಟಿತ್ತು.

    vijay prakash arjun janyas mother visited to Sarigamapa Season 14 set

    ಅರ್ಜುನ್ ಜನ್ಯ ಅವರ ತಾಯಿ ಸಹ ಮಗನ ಜೊತೆಗೆ ಹಾಡು ಹಾಡಿದರು. ಅರ್ಜುನ್ ಅವರ ಸಂಗೀತದ 'ಮಾಣಿಕ್ಯ' ಸಿನಿಮಾದ 'ಜೀವ ಜೀವ..' ಹಾಗೂ 'ಮುಕುಂದ ಮುರಾರಿ' ಸಿನಿಮಾದ 'ನೀನೇ ರಾಮ ನೀನೇ ಶಾಮ...' ಹಾಡನ್ನು ಗುನುಗಿದರು. ಇನ್ನು 'ಸರಿಗಮಪ ಸೀಸನ್ 14' ಅನ್ನು ಎಲ್ಲ ಅಪ್ಪ ಅಮ್ಮನಿಗಾಗಿ ಸಮರ್ಪಣೆ ಮಾಡಲಾಗಿದೆ.

    English summary
    Singer Vijay Prakash and music director Arjun Janya's mother visited Zee Kannada channel's popular reality show 'Sarigamapa Season 14' set.
    Monday, May 21, 2018, 13:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X