ಗಣೇಶ್ ಗೆ ಸಿಕ್ಕ ಗೋಲ್ಡನ್ ಅವಕಾಶ ವಿಜಯ್ ರಾಘವೇಂದ್ರ ಪಾಲಾಗಿದಿದ್ರೆ.?!
ಗಣೇಶ್ ರವರನ್ನ ಏಕಾಏಕಿ ಸ್ಟಾರ್ ಪಟ್ಟಕ್ಕೆ ಏರಿಸಿದ ಸಿನಿಮಾ 'ಮುಂಗಾರು ಮಳೆ'. 2006 ರಲ್ಲಿ ಬಿಡುಗಡೆ ಆದ ಈ ಸಿನಿಮಾ ಗಣೇಶ್, ಯೋಗರಾಜ್ ಭಟ್ ಹಾಗೂ ಪೂಜಾ ಗಾಂಧಿ ವೃತ್ತಿ ಬದುಕಿಗೆ ದೊಡ್ಡ ತಿರುವು ನೀಡಿತು.
ಹೌದು, 'ಮುಂಗಾರು ಮಳೆ' ಕಥೆ ರೆಡಿ ಮಾಡಿಟ್ಟುಕೊಂಡು, ವಿಜಯ್ ರಾಘವೇಂದ್ರ ರವರ ಜೊತೆ ಮಾತುಕತೆ ನಡೆಸಲು ಯೋಗರಾಜ್ ಭಟ್ ನಿರ್ಧಾರ ಮಾಡಿದ್ದರಂತೆ. ಆದ್ರೆ, ಅಷ್ಟರಲ್ಲಿ ಪ್ಲಾನ್ ಚೇಂಜ್ ಆಯ್ತಂತೆ. ಹಾಗಂತ ಸ್ವತಃ ವಿಜಯ್ ರಾಘವೇಂದ್ರ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿಜಯ್ ರಾಘವೇಂದ್ರ, ''ನನಗೆ 'ಮುಂಗಾರು ಮಳೆ' ಕಥೆ ಹೇಳಬೇಕು ಅಂತ ಯೋಗರಾಜ್ ಭಟ್ ಅಂದುಕೊಂಡಿದ್ದರಂತೆ. ಆದ್ರೆ ಬಿಜಿ ಇರಬೇಕು ಅಂತ ಹೇಳ್ಲಿಲ್ಲವಂತೆ. ಯೋಗರಾಜ್ ಭಟ್ ನನಗೆ ಪರಿಚಯ ಇದ್ದರು. ಅವರ 'ಮಣಿ' ಚಿತ್ರವನ್ನ ಶ್ರೀಮುರಳಿ ಮಾಡಬೇಕಿತ್ತು'' ಎಂದು ಹಳೆ ದಿನಗಳನ್ನ ಮೆಲುಕು ಹಾಕಿದರು.
More from Filmibeat
English summary
Kannada Actor Vijay Raghavendra speaks about Director Yogaraj Bhat in Colors Super Channel's popular show 'Super Talk Time'.
akul balaji vijaya raghavendra yogaraj bhat colors channel tv reality show ಅಕುಲ್ ಬಾಲಾಜಿ ವಿಜಯ್ ರಾಘವೇಂದ್ರ ಕಲರ್ಸ್ ವಾಹಿನಿ ಟಿವಿ ರಿಯಾಲಿಟಿ ಶೋ ಯೋಗರಾಜ್ ಭಟ್


Click it and Unblock the Notifications











