Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಣೇಶ್ ಗೆ ಸಿಕ್ಕ ಗೋಲ್ಡನ್ ಅವಕಾಶ ವಿಜಯ್ ರಾಘವೇಂದ್ರ ಪಾಲಾಗಿದಿದ್ರೆ.?!
ಗಣೇಶ್ ರವರನ್ನ ಏಕಾಏಕಿ ಸ್ಟಾರ್ ಪಟ್ಟಕ್ಕೆ ಏರಿಸಿದ ಸಿನಿಮಾ 'ಮುಂಗಾರು ಮಳೆ'. 2006 ರಲ್ಲಿ ಬಿಡುಗಡೆ ಆದ ಈ ಸಿನಿಮಾ ಗಣೇಶ್, ಯೋಗರಾಜ್ ಭಟ್ ಹಾಗೂ ಪೂಜಾ ಗಾಂಧಿ ವೃತ್ತಿ ಬದುಕಿಗೆ ದೊಡ್ಡ ತಿರುವು ನೀಡಿತು.
ಹೌದು, 'ಮುಂಗಾರು ಮಳೆ' ಕಥೆ ರೆಡಿ ಮಾಡಿಟ್ಟುಕೊಂಡು, ವಿಜಯ್ ರಾಘವೇಂದ್ರ ರವರ ಜೊತೆ ಮಾತುಕತೆ ನಡೆಸಲು ಯೋಗರಾಜ್ ಭಟ್ ನಿರ್ಧಾರ ಮಾಡಿದ್ದರಂತೆ. ಆದ್ರೆ, ಅಷ್ಟರಲ್ಲಿ ಪ್ಲಾನ್ ಚೇಂಜ್ ಆಯ್ತಂತೆ. ಹಾಗಂತ ಸ್ವತಃ ವಿಜಯ್ ರಾಘವೇಂದ್ರ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ವಿಜಯ್ ರಾಘವೇಂದ್ರ ಜೊತೆಗಿನ ಬಾಲ್ಯದ ನೆನಪು ಬಿಚ್ಚಿಟ್ಟ ಅಪ್ಪು, ಶಿವಣ್ಣ
ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿಜಯ್ ರಾಘವೇಂದ್ರ, ''ನನಗೆ 'ಮುಂಗಾರು ಮಳೆ' ಕಥೆ ಹೇಳಬೇಕು ಅಂತ ಯೋಗರಾಜ್ ಭಟ್ ಅಂದುಕೊಂಡಿದ್ದರಂತೆ. ಆದ್ರೆ ಬಿಜಿ ಇರಬೇಕು ಅಂತ ಹೇಳ್ಲಿಲ್ಲವಂತೆ. ಯೋಗರಾಜ್ ಭಟ್ ನನಗೆ ಪರಿಚಯ ಇದ್ದರು. ಅವರ 'ಮಣಿ' ಚಿತ್ರವನ್ನ ಶ್ರೀಮುರಳಿ ಮಾಡಬೇಕಿತ್ತು'' ಎಂದು ಹಳೆ ದಿನಗಳನ್ನ ಮೆಲುಕು ಹಾಕಿದರು.