Don't Miss!
- Technology Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
- News ಬೆಂಗಳೂರಿನಲ್ಲಿ ಮೋದಿ ಮತಬೇಟೆ; ರಾಜ್ಯಕ್ಕೆ ಪ್ರಧಾನಿ ಮೋದಿಯ ಕೊಡುಗೆ ಏನಿದೆ?: ಡಾ.ಜಿ ಪರಮೇಶ್ವರ್
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಣೇಶ್ ಗೆ ಸಿಕ್ಕ ಗೋಲ್ಡನ್ ಅವಕಾಶ ವಿಜಯ್ ರಾಘವೇಂದ್ರ ಪಾಲಾಗಿದಿದ್ರೆ.?!
ಗಣೇಶ್ ರವರನ್ನ ಏಕಾಏಕಿ ಸ್ಟಾರ್ ಪಟ್ಟಕ್ಕೆ ಏರಿಸಿದ ಸಿನಿಮಾ 'ಮುಂಗಾರು ಮಳೆ'. 2006 ರಲ್ಲಿ ಬಿಡುಗಡೆ ಆದ ಈ ಸಿನಿಮಾ ಗಣೇಶ್, ಯೋಗರಾಜ್ ಭಟ್ ಹಾಗೂ ಪೂಜಾ ಗಾಂಧಿ ವೃತ್ತಿ ಬದುಕಿಗೆ ದೊಡ್ಡ ತಿರುವು ನೀಡಿತು.
ಹೌದು, 'ಮುಂಗಾರು ಮಳೆ' ಕಥೆ ರೆಡಿ ಮಾಡಿಟ್ಟುಕೊಂಡು, ವಿಜಯ್ ರಾಘವೇಂದ್ರ ರವರ ಜೊತೆ ಮಾತುಕತೆ ನಡೆಸಲು ಯೋಗರಾಜ್ ಭಟ್ ನಿರ್ಧಾರ ಮಾಡಿದ್ದರಂತೆ. ಆದ್ರೆ, ಅಷ್ಟರಲ್ಲಿ ಪ್ಲಾನ್ ಚೇಂಜ್ ಆಯ್ತಂತೆ. ಹಾಗಂತ ಸ್ವತಃ ವಿಜಯ್ ರಾಘವೇಂದ್ರ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ವಿಜಯ್ ರಾಘವೇಂದ್ರ ಜೊತೆಗಿನ ಬಾಲ್ಯದ ನೆನಪು ಬಿಚ್ಚಿಟ್ಟ ಅಪ್ಪು, ಶಿವಣ್ಣ
ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿಜಯ್ ರಾಘವೇಂದ್ರ, ''ನನಗೆ 'ಮುಂಗಾರು ಮಳೆ' ಕಥೆ ಹೇಳಬೇಕು ಅಂತ ಯೋಗರಾಜ್ ಭಟ್ ಅಂದುಕೊಂಡಿದ್ದರಂತೆ. ಆದ್ರೆ ಬಿಜಿ ಇರಬೇಕು ಅಂತ ಹೇಳ್ಲಿಲ್ಲವಂತೆ. ಯೋಗರಾಜ್ ಭಟ್ ನನಗೆ ಪರಿಚಯ ಇದ್ದರು. ಅವರ 'ಮಣಿ' ಚಿತ್ರವನ್ನ ಶ್ರೀಮುರಳಿ ಮಾಡಬೇಕಿತ್ತು'' ಎಂದು ಹಳೆ ದಿನಗಳನ್ನ ಮೆಲುಕು ಹಾಕಿದರು.