Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಣೇಶ್ ಗೆ ಸಿಕ್ಕ ಗೋಲ್ಡನ್ ಅವಕಾಶ ವಿಜಯ್ ರಾಘವೇಂದ್ರ ಪಾಲಾಗಿದಿದ್ರೆ.?!
ಗಣೇಶ್ ರವರನ್ನ ಏಕಾಏಕಿ ಸ್ಟಾರ್ ಪಟ್ಟಕ್ಕೆ ಏರಿಸಿದ ಸಿನಿಮಾ 'ಮುಂಗಾರು ಮಳೆ'. 2006 ರಲ್ಲಿ ಬಿಡುಗಡೆ ಆದ ಈ ಸಿನಿಮಾ ಗಣೇಶ್, ಯೋಗರಾಜ್ ಭಟ್ ಹಾಗೂ ಪೂಜಾ ಗಾಂಧಿ ವೃತ್ತಿ ಬದುಕಿಗೆ ದೊಡ್ಡ ತಿರುವು ನೀಡಿತು.
ಹೌದು, 'ಮುಂಗಾರು ಮಳೆ' ಕಥೆ ರೆಡಿ ಮಾಡಿಟ್ಟುಕೊಂಡು, ವಿಜಯ್ ರಾಘವೇಂದ್ರ ರವರ ಜೊತೆ ಮಾತುಕತೆ ನಡೆಸಲು ಯೋಗರಾಜ್ ಭಟ್ ನಿರ್ಧಾರ ಮಾಡಿದ್ದರಂತೆ. ಆದ್ರೆ, ಅಷ್ಟರಲ್ಲಿ ಪ್ಲಾನ್ ಚೇಂಜ್ ಆಯ್ತಂತೆ. ಹಾಗಂತ ಸ್ವತಃ ವಿಜಯ್ ರಾಘವೇಂದ್ರ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ವಿಜಯ್ ರಾಘವೇಂದ್ರ ಜೊತೆಗಿನ ಬಾಲ್ಯದ ನೆನಪು ಬಿಚ್ಚಿಟ್ಟ ಅಪ್ಪು, ಶಿವಣ್ಣ
ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿಜಯ್ ರಾಘವೇಂದ್ರ, ''ನನಗೆ 'ಮುಂಗಾರು ಮಳೆ' ಕಥೆ ಹೇಳಬೇಕು ಅಂತ ಯೋಗರಾಜ್ ಭಟ್ ಅಂದುಕೊಂಡಿದ್ದರಂತೆ. ಆದ್ರೆ ಬಿಜಿ ಇರಬೇಕು ಅಂತ ಹೇಳ್ಲಿಲ್ಲವಂತೆ. ಯೋಗರಾಜ್ ಭಟ್ ನನಗೆ ಪರಿಚಯ ಇದ್ದರು. ಅವರ 'ಮಣಿ' ಚಿತ್ರವನ್ನ ಶ್ರೀಮುರಳಿ ಮಾಡಬೇಕಿತ್ತು'' ಎಂದು ಹಳೆ ದಿನಗಳನ್ನ ಮೆಲುಕು ಹಾಕಿದರು.