Don't Miss!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- News Lok Sabha Election 2024: ಮತದಾರರನ್ನು ಆಕರ್ಷಿಸಲು ಚುನಾವಣಾ ಆಯೋಗದ ವಿಭಿನ್ನ ಪ್ರಯತ್ನ
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಮನಗರಕ್ಕೆ ಬಂದು ಕನ್ನಡದಲ್ಲಿ ಡೈಲಾಗ್ ಹೇಳಿದ ವಿಜಯ್ ಸೇತುಪತಿ
ಭಾರತದ ಅತ್ಯುತ್ತಮ ನಟರಲ್ಲಿ ಒಬ್ಬರಾಗಿರುವ ವಿಜಯ್ ಸೇತುಪತಿ ಕನ್ನಡದಲ್ಲಿ ಈವರೆಗೆ ಒಂದೂ ಸಿನಿಮಾದಲ್ಲಿ ನಟಿಸಿಲ್ಲ. ಆದರೆ ಇತ್ತೀಚೆಗೆ ರಾಮನಗರಕ್ಕೆ ಬಂದಿದ್ದ ಅವರು ಕನ್ನಡದಲ್ಲಿ ಡೈಲಾಗ್ ಹೇಳಿದ್ದಾರೆ. ಅಲ್ಲದೆ ಕರ್ನಾಟಕದಲ್ಲಿ ಯಾವ ಸ್ಥಳ ತಮಗೆ ಇಷ್ಟವೆಂದು ಸಹ ಹೇಳಿದ್ದಾರೆ.
Recommended Video
ರಾಮನಗರದ ಇನ್ನೊವೇಟಿವ್ ಫಿಲಂ ಸಿಟಿಯಲ್ಲಿ ಮಾಸ್ಟರ್ ಶೆಫ್ ಕಾರ್ಯಕ್ರಮದ ಉದ್ಘಾಟನೆ ಮಾಡಿದ ವಿಜಯ್ ಸೇತುಪತಿ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದರು. ಜೊತೆಗೆ ನೆರೆದಿದ್ದವರ ಒತ್ತಾಯದ ಮೇರೆಗೆ ಕನ್ನಡದ ಒಂದು ಡೈಲಾಗ್ ಸಹ ಹೇಳಿ ರಂಜಿಸಿದರು.
ತಾವು ನಟಿಸಿದ ಸಿನಿಮಾ ಒಂದರ ಕನ್ನಡ ಡಬ್ ಡೈಲಾಗ್ ಹೇಳಿದ ವಿಜಯ್ ಸೇತುಪತಿ, ''ಡೈಲಾಗ್ ಅರ್ಥ ಕೆಟ್ಟದಾಗಿದೆ. ಆದರೆ ನನಗೆ ಅದು ಬರುತ್ತದೆ ಹಾಗಾಗಿ ಹೇಳುತ್ತಿದ್ದೀನಿ. ಸಿನಿಮಾದಲ್ಲಿ ನನ್ನ ತಂಗಿ ಹೀರೋ ಜೊತೆ ಓಡಿಹೋಗಿರುತ್ತಾಳೆ ಆಗ ಹೇಳುವ ಡೈಲಾಗ್ ಇದು'' ಎಂದು ಹೇಳಿ ಸಿನಿಮಾದ ಡೈಲಾಗ್ ಹೇಳಿದರು ಸೇತುಪತಿ.
ನನಗೆ ಮಡಿಕೇರಿ ಬಹಳ ಇಷ್ಟ: ವಿಜಯ್ ಸೇತುಪತಿ
ನಂತರ ನಿಮಗೆ ಕರ್ನಾಟಕದ ಯಾವ ಸ್ಥಳ ಬಹಳ ಇಷ್ಟ ಎಂದು ಕೇಳಿದ್ದಕ್ಕೆ, ನನಗೆ ಮಡಿಕೇರಿ, ಕೂರ್ಗ್ ಪ್ರದೇಶ ಬಹಳ ಇಷ್ಟವಾಗುತ್ತದೆ. ನಾನು ಮೂರು ದಿನಗಳ ಕಾಲ ಆ ಭಾಗದಲ್ಲಿ ಚಿತ್ರೀಕರಣ ಮಾಡಿದ್ದೇನೆ ಆ ಭಾಗ ನನಗೆ ಬಹಳ ಇಷ್ಟವಾಯಿತು ಎಂದಿದ್ದಾರೆ. ಕನ್ನಡದಲ್ಲಿ ಕೇಳಿದ ಪ್ರಶ್ನೆಗಳನ್ನು ಇಂಗ್ಲೀಷ್ಗೆ ತರ್ಜುಮೆ ಮಾಡಲು ಯತ್ನಿಸಿದಾಗ, ''ಬೇಡ ನನಗೆ ಕನ್ನಡ ಅರ್ಥವಾಗುತ್ತದೆ'' ಎಂದರು ವಿಜಯ್.
ಇದೊಂದು ಅದ್ಭುತ ಅನುಭವ ಆಗಲಿದೆ: ವಿಜಯ್
ಇನ್ನು ಮಾಸ್ಟರ್ ಚೆಫ್ ಕಾರ್ಯಕ್ರಮದ ಬಗ್ಗೆ ಮಾತನಾಡಿದ ವಿಜಯ್ ಸೇತುಪತಿ, ''ಕಾರ್ಯಕ್ರಮದ ಸೆಟ್ ಶಂಕರ್ ಸಿನಿಮಾ ಸೆಟ್ ರೀತಿ ಅದ್ಧೂರಿಯಾಗಿದೆ. ನಾನು ಈ ಕಾರ್ಯಕ್ರಮದಲ್ಲಿ ಯಾವುದೇ ಸ್ಕ್ರಿಪ್ಟ್ ಇಲ್ಲದೆ ಕ್ಯಾಮೆರಾ ಮುಂದೆ ಮಾತನಾಡಲಿದ್ದೇನೆ. ಇದೊಂದು ಹೊಸ ರೀತಿಯ ಅದ್ಭುತ ಅನುಭವ ನನಗೆ. ಈ ಹಿಂದೆ 'ನಮ್ಮ ಊರ ಹೀರೋ' ಹೆಸರಿನ ಟಿವಿ ಶೋ ಮಾಡಿದಾಗ ನಾನು ಆತಂಕಗೊಂಡಿದ್ದೆ ಆದರೆ ಈ ಬಾರಿ ಹಾಗೆ ಇಲ್ಲ'' ಎಂದಿದ್ದಾರೆ ವಿಜಯ್ ಸೇತುಪತಿ.
ಆಹಾರ ಮತ್ತು ಆತ್ಮಕ್ಕೆ ಸಂಬಂಧಿಸಿದ ಕಾರ್ಯಕ್ರಮ: ವಿಜಯ್
ಮಾಸ್ಟರ್ ಚೆಫ್ನಲ್ಲಿ ಭಾಗವಿಸಲಿರುವ ಸ್ಪರ್ಧಿಗಳಿಗೆ ಕಿವಿಮಾತು ಹೇಳಿದ ವಿಜಯ್ ಸೇತುಪತಿ, ''ನೀವು ಇಲ್ಲಿ ಸಾಕಷ್ಟು ಮಾತನಾಡಬಹುದು ಎಂಜಾಯ್ ಮಾಡಬಹುದು ಆದರೆ ಅಡುಗೆ ಮಾಡುವ ವಿಷಯದಲ್ಲಿ ಗಂಭೀರವಾಗಿರಲೇ ಬೇಕಾಗುತ್ತದೆ. ಈ ಕಾರ್ಯಕ್ರಮ ಕೇವಲ ಆಹಾರದ ಕಾರ್ಯಕ್ರಮವಲ್ಲ ಜೊತೆಗೆ ಆತ್ಮದ ಕಾರ್ಯಕ್ರಮ ಸಹ'' ಎಂದಿದ್ದಾರೆ ವಿಜಯ್ ಸೇತುಪತಿ.
ಕನ್ನಡದಲ್ಲಿ ಸುದೀಪ್ ನಿರೂಪಣೆ
'ಮಾಸ್ಟರ್ ಚೆಫ್' ಕಾರ್ಯಕ್ರಮವು ಎಲ್ಲ ಭಾಷೆಗಳಲ್ಲಿ ಮಾಡಲಾಗುತ್ತಿದೆ. ಕನ್ನಡದಲ್ಲಿ ಸುದೀಪ್ ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್ ಈ ಕಾರ್ಯಕ್ರಮದ ನಿರೂಪಕರಾಗಿದ್ದಾರೆ. ತಮನ್ನಾ, ವೆಂಕಟೇಶ್, ಹಿಂದಿಯಲ್ಲಿ ಅಕ್ಷಯ್ ಕುಮಾರ್ ನಿರೂಪಣೆ ಮಾಡಲಿದ್ದಾರೆ.