Just In
- 2 min ago
ಶಿವಮೊಗ್ಗದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್: 'ಬೆಸ್ಟ್ ವೀಕೆಂಡ್ ಎವರ್' ಎಂದ ನಟಿ
- 38 min ago
ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ; ಬಿಸ್ವಜಿತ್ ಗೆ ಭಾರತದ ವರ್ಷದ ವ್ಯಕ್ತಿ ಪ್ರಶಸ್ತಿ
- 1 hr ago
ಡಿ ಬಾಸ್ ದರ್ಶನ್ ಜೊತೆ ಬಾಲಿವುಡ್ ನಟಿ ಕಂಗನಾ ರಣಾವತ್: ಫೋಟೋ ವೈರಲ್
- 3 hrs ago
ರಮೇಶ್ ಅರವಿಂದ್ ಮಗಳ ಮದುವೆ ಆರತಕ್ಷತೆಯಲ್ಲಿ ಯಶ್, ಸುದೀಪ್ ಸುಮಲತಾ; ಫೋಟೋ ವೈರಲ್
Don't Miss!
- News
ಕಾಶ್ಮೀರದಲ್ಲಿ ಮೈನಸ್ 7.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲು
- Finance
Home Loan: ಅತ್ಯಂತ ಕಡಿಮೆ ಬಡ್ಡಿ ದರಕ್ಕೆ ಸಾಲ ನೀಡುವ 15 ಬ್ಯಾಂಕ್ ಗಳು
- Sports
ಭಾರತ vs ಆಸ್ಟ್ರೇಲಿಯಾ: ಶಾರ್ದೂಲ್- ಸುಂದರ್ ಆಟಕ್ಕೆ ಪ್ರಶಂಸೆ ವ್ಯಕ್ತಪಡಿಸಿದ ಕೊಹ್ಲಿ
- Automobiles
ಅನಾವರಣವಾಯ್ತು 2021ರ ಎಪ್ರಿಲಿಯಾ ಆರ್ಎಸ್ವಿ4 ಬೈಕುಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಹ ಸ್ಪರ್ಧಿ ಮೇಲೆ ಹಲ್ಲೆ: ಬಿಗ್ಬಾಸ್ ಮನೆಯಿಂದ ಹೊರದಬ್ಬಿಸಿಕೊಂಡ ವಿಕಾಸ್
ಎಲಿಮಿನೇಶನ್ ಮುಖಾಂತರ ಬಿಗ್ಬಾಸ್ ಮನೆಯಿಂದ ಸ್ಪರ್ಧಿಗಳು ಹೊರಬರುವುದು ಸಾಮಾನ್ಯ ಪ್ರತಿಕ್ರಿಯೆ. ಆದರೆ ಕೆಲವೊಮ್ಮೆ ಸ್ಪರ್ಧಿಗಳು ತಮ್ಮ ಕೆಟ್ಟ ನಡವಳಿಕೆಯಿಂದಾಗಿಯೂ ಬಿಗ್ಬಾಸ್ ಮನೆಯಿಂದ ಹೊರದಬ್ಬಿಸಿಕೊಳ್ಳುತ್ತಾರೆ.
ಹಿಂದಿ ಬಿಗ್ಬಾಸ್ ನಲ್ಲಿ ಆಗಾಗ್ಗೆ ಸ್ಪರ್ಧಿಗಳ ಕೆಟ್ಟ ನಡವಳಿಕೆಯಿಂದ ಬಿಗ್ಬಾಸ್ ಆಯೋಜಕರು ಸ್ಪರ್ಧಿಗಳ ಮೇಳೆ ಕಠಿಣ ಕ್ರಮ ಕೈಗೊಳ್ಳುತ್ತಲೇ ಇರುತ್ತಾರೆ. ಇದೀಗ ಬಿಗ್ಬಾಸ್ ಸೀಸನ್ 14 ರಲ್ಲಿ ಇಂಥಹುದೇ ಘಟನೆ ನಡೆದಿದೆ.
ವಿಕಾಸ್ ಮತ್ತು ಆರ್ಶಿ ಜಗಳಕ್ಕೆ ಇಳಿದಿದ್ದರು. ಇಬ್ಬರ ಜಗಳ ತಾರಕಕ್ಕೆ ಏರಿತು. ವಿಕಾಸ್ ಹಾಗೂ ಆರ್ಶಿ ಪರಸ್ಪರ ಕೈ-ಕೈ ಮಿಲಾಯಿಸಿದರು ಸಹ, ಆಗ ಸಹ ಸ್ಪರ್ಧಿಗಳು ಜಗಳ ಬಿಡಿಸಿದರು. ವಿಕಾಸ್ ತನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಆರ್ಶಿ ಆರೋಪಿಸಿದರು.
ನಂತರವೂ ವಿಕಾಸ್ ಮತ್ತು ಆರ್ಶಿ ಜಗಳ ಹಾಗೆಯೇ ಮುಂದುವರೆಯಿತು, ಜಗಳದ ನಡುವೆ ಕುಟುಂಬ ಸದಸ್ಯರ ಬಗ್ಗೆಯೂ ಮಾತುಗಳು ಆಡಲಾಯಿತು, ಕೊನೆಗೆ ವಿಕಾಸ್, ಆರ್ಶಿಯನ್ನು ಸ್ವಮ್ಮಿಂಗ್ ಪೂಲ್ಗೆ ತಳ್ಳಿ, ಕೆಟ್ಟದಾಗಿ ಬೈದರು.
ಇತರೆ ಸ್ಪರ್ಧಿಗಳು ವಿಕಾಸ್ ಅನ್ನು ಸಮಾಧಪಡಿಸಿದರೆ, ಇನ್ನು ಕೆಲವರು ಆರ್ಶಿಯನ್ನು ಸಮಾಧಾನಪಡಿಸಿದರು. ಆರ್ಶಿ ಅಳುತ್ತಾ, ಕ್ಯಾಮೆರಾ ಮುಂದೆ, ವಿಕಾಸ್ ವಿರುದ್ಧ ದೂರುಗಳನ್ನು ಹೇಳಿದರು. ಕೊನೆಗೆ ಬಿಗ್ಬಾಸ್ ವಿಕಾಸ್ರದ್ದು ತಪ್ಪು ಎಂದು ಪರಿಗಣಿಸಿ ಅವರನ್ನು ಬಿಗ್ಬಾಸ್ ಮನೆಯಿಂದ ಹೊರಗೆ ಹಾಕಿದರು.
'ನಾನು ಕೋಪೋದ್ರೇಕಗೊಳ್ಳುವಂತೆ ಮಾಡಲಾಯಿತು' ಎಂದು ವಿಕಾಸ್ ಹೇಳಿದರು, ಆದರೆ ಇದಕ್ಕೆ ಉತ್ತರಿಸಿದ ಬಿಗ್ಬಾಸ್, 'ಕೋಪೋದ್ರೇಕಗೊಳಿಸುವುದು ಆಟದ ಒಂದು ತಂತ್ರ' ಎಂದು ಉತ್ತರಿಸಿದರು. ಕೊನೆಗೆ ವಿಕಾಸ್ ಕೆಟ್ಟ ನಡವಳಿಕೆಯಿಂದ ಬಿಗ್ಬಾಸ್ನಿಂದ ಹೊರಗೆ ಹೋಗಬೇಕಾಯಿತು.
ಆ ನಂತರ ಆರ್ಶಿಯ ತಂತ್ರ ಕೆಟ್ಟದಾಗಿತ್ತು, ಆಕೆ ಬೇಕೆಂದೇ ವಿಕಾಸ್ ಉದ್ರೇಕಗೊಳ್ಳುವಂತೆ ಮಾತನಾಡಿ, ಆತ ಹಲ್ಲೆ ಮಾಡುವಂತೆ ಮಾಡಿ, ಆತನನ್ನು ಬಿಗ್ಬಾಸ್ ಮನೆಯಿಂದ ಹೊರಗೆ ಹಾಕಿಸಿದಳು ಎಂದು ಕೆಲವು ಸ್ಪರ್ಧಿಗಳು ಮಾತನಾಡಿಕೊಂಡರು.