Don't Miss!
- News ಧಾರವಾಡ; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ವಾಪಸ್, ಕಣದಲ್ಲಿ 17 ಮಂದಿ
- Lifestyle ಮೊಲದ ಜೊತೆ ಓಡಿ ಮತ್ತೊಮ್ಮೆ ರೇಸ್ ಗೆದ್ದ ಆಮೆ..! ಈ ಕಥೆ ನಿಜವಾಗಿದ್ದು ಹೇಗೆ ನೋಡಿ.!
- Finance Bangalore Karaga: ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್, ಬದಲಿ ಮಾರ್ಗ ವಿವರ
- Automobiles ಸಾಮಾನ್ಯರಂತೆ ಹಳ್ಳಿಯಲ್ಲಿರುವ ದೇಶದ 55ನೇ ಶ್ರೀಮಂತ ಶ್ರೀಧರ್ ವೆಂಬು: ಕಚೇರಿಗೆ ಹೋಗಲು ಎಲೆಕ್ಟ್ರಿಕ್ ಆಟೋ ಖರೀದಿ!
- Technology Google Chrome: ಗೂಗಲ್ ಕ್ರೋಮ್ ಬಳಕೆದಾರರು ಹ್ಯಾಕಿಂಗ್ ಅಪಾಯದಲ್ಲಿ! ಸುರಕ್ಷಿತವಾಗಿರೋದು ಹೇಗೆ?
- Sports IPL 2024: ವಿರಾಟ್ ಕೊಹ್ಲಿ ವಿವಾದಾತ್ಮಕ ಔಟ್; ಅಂಪೈರಿಂಗ್ ವಿರುದ್ಧ ಕೆಂಡಕಾರಿದ ಮೊಹಮ್ಮದ್ ಕೈಫ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಸರಿಗಮಪ 14' ಗ್ರಾಂಡ್ ಫಿನಾಲೆಯ ವಿನ್ನರ್ ಆದ ಬೆಳಗಾವಿಯ ವಿಶ್ವ ಪ್ರಸಾದ್
ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ 'ಸರಿಗಮಪ ಸೀಸನ್ 14' ಕಾರ್ಯಕ್ರಮದ ಗ್ರಾಂಡ್ ಫಿನಾಲೆ ನಿನ್ನೆ ನಡೆಯಿತು. ಇದರಲ್ಲಿ ಬೆಳಗಾವಿಯ ಹುಡುಗ ವಿಶ್ವ ಪ್ರಸಾದ್ ಮೊದಲ ಸ್ಥಾನವನ್ನು ಪಡೆದಿದ್ದಾರೆ.
ಸರಿಗಪಮ ಕಾರ್ಯಕ್ರಮದ ಫೈನಲ್ ಗೆ ಐದು ಮಕ್ಕಳು ಆಯ್ಕೆ ಆಗಿದ್ದರು. ಕೀರ್ತನ, ಜ್ಞಾನೇಶ್, ಅಭಿಜಾತ್, ವಿಶ್ವಪ್ರಸಾದ್ ಹಾಗೂ ತೇಜಸ್ ಶಾಸ್ತ್ರಿ ಫೈನಲ್ ನಲ್ಲಿ ಹಾಡು ಹಾಡಿದರು. ಆದರೆ ಈ ಪೈಕಿ ವಿಶ್ವ ಪ್ರಸಾದ್ ಪ್ರಶಸ್ತಿ ಮುಡಿಗೇರಿಸಿಕೊಂಡರು. ಪ್ರತಿ ಸಂಚಿಕೆಯಲ್ಲಿ ಅಮೋಘವಾಗಿ ಹಾಡುತ್ತಿದ್ದ ವಿಶ್ವ ಪ್ರಸಾದ್ ಗ್ರಾಂಡ್ ಫಿನಾಲೆಯಲ್ಲಿಯೂ ತಮ್ಮ ಹಾಡಿನ ಮೂಲಕ ಸಿಕ್ಸರ್ ಬಾರಿಸಿದರು. ಫೈನಲ್ ನಲ್ಲಿ 'ಹಠವಾದಿ' ಚಿತ್ರದ ಒಂದು ಹಾಡು ಹಾಗೂ 'ನಾದಮಯ...' ಹಾಡನ್ನು ವಿಶ್ವ ಪ್ರಸಾದ್ ಹಾಡಿದ್ದರು.
ವಿಶ್ವಪ್ರಸಾದ್ ಮೊದಲ ಸ್ಥಾನ ಪಡೆದಿದ್ದು, ಎರಡನೇ ಸ್ಥಾನವನ್ನು ಕೀರ್ತನ ಹಾಗೂ ಜ್ಞಾನೇಶ್ ಹಂಚಿಕೊಂಡಿದ್ದಾರೆ. ವಿನ್ನರ್ ಟ್ರೋಫಿಯ ಜೊತೆಗೆ ವಿಶ್ವಪ್ರಸಾದ್ ಐದು ಲಕ್ಷ ರೂಪಾಯಿಯನ್ನು ಬಹುಮಾನವಾಗಿ ಪಡೆದಿದ್ದಾರೆ.
ಅಂದಹಾಗೆ, ಸರಿಗಮಪ ಕಾರ್ಯಕ್ರಮದ ಈ ತೀರ್ಪು ಹಂಸಲೇಖ, ವಿಜಯಪ್ರಕಾಶ್, ಅರ್ಜುನ್ ಜನ್ಯ ಈ ಮೂರು ಜನರ ನಿರ್ಧಾರ ಹಾಗೂ ವೀಕ್ಷಕರು ಮಾಡಿದ ವೋಟ್ ಈ ಎರಡರ ಮೇಲೆ ನೀಡಲಾಗಿದೆ.