Don't Miss!
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- News ಸಿಯಾಚಿನ್ ಬಳಿ ಚೀನಾ ಆಕ್ರಮಿತ ಕಾಶ್ಮೀರದಲ್ಲಿ ಹೊಸ ರಸ್ತೆ ನಿರ್ಮಾಣ; ಖಚಿತಪಡಿಸಿದ ಉಪಗ್ರಹ ಚಿತ್ರಗಳು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇದೇ ಮೊಟ್ಟ ಮೊದಲ ಬಾರಿಗೆ ಕಿರುತೆರೆಯಲ್ಲಿ ಶರಣ್ 'ಸತ್ಯ ಹರಿಶ್ಚಂದ್ರ'
'ಸತ್ಯ ಹರಿಶ್ಚಂದ್ರ'... ಕಳೆದ ವರ್ಷ ಅಕ್ಟೋಬರ್ 20 ರಂದು ಬಿಡುಗಡೆಯಾದ ಚಿತ್ರ. ನಟ ಶರಣ್, ಸಂಚಿತಾ ಪಡುಕೋಣೆ ಮತ್ತು ಭಾವನಾ ರಾವ್ ನಟಿಸಿರುವ ಈ ಚಲನಚಿತ್ರವನ್ನು ಕೆ.ಮಂಜು ಬ್ಯಾನರ್ ಅಡಿಯಲ್ಲಿ ದಯಾಳ್ ಆಕ್ಷನ್ ಕಟ್ ಹೇಳಿದ್ದರು.
ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದ ಹಾಸ್ಯಭರಿತ 'ಸತ್ಯಹರಿಶ್ಚಂದ್ರ' ಇದೇ ಭಾನುವಾರ (11.02.2018) ಸಂಜೆ 6ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.
ಸುಳ್ಳನ್ನೇ ತನ್ನ ಜೀವನದ ಕಸುಬಾಗಿ ಇಟ್ಟುಕೊಂಡು ಅದರಿಂದಲೇ ತನ್ನ ಜೀವನೋಪಾಯ ಮಾಡುತ್ತಿರುವ ಶರಣ್, ಆ ಸುಳ್ಳಿನಿಂದ ಹೇಗೆ ತೊಂದರೆಯಲ್ಲಿ ಸಿಲುಕಿ ಕೊಳ್ಳುತ್ತಾನೆ? ಹಾಗೆ ಹುಡುಗಿಯನ್ನು ಗೆಲ್ಲಲು ಹೇಗೆ ಹೋರಾಟ ಮಾಡುತ್ತಾನೆ ಎಂಬುದೇ ಈ ಚಿತ್ರದ ಕಥೆ.
ಹೆಸರಾಂತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಈ ಚಿತ್ರಕ್ಕೆ ಸಂಗೀತ ನಿರ್ದೇಶನವನ್ನು ನೀಡಿದ್ದಾರೆ. ದಯಾಳ್ ಹಾಸ್ಯಭರಿತ ಕಥೆಯನ್ನು ಬರೆದಿದ್ದಾರೆ. ಹಾಗೆ ಶರಣ್ ಚಿತ್ರದ ಉದ್ದಗಲಕ್ಕೂ ತಮ್ಮ ನಟನೆ ಮತ್ತು ಸಂಭಾಷಣೆಯನ್ನು ಹೇಳುತ್ತಾ ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಾರೆ. ಇನ್ನು ಭಾವನಾ ಮತ್ತು ಸಂಚಿತಾ ತಮ್ಮ ನೈಜವಾದ ಅಭಿನಯದಿಂದ ಎಲ್ಲರ ಮನಸೆಳೆಯುತ್ತಾರೆ.
ಒಟ್ಟಾರೆ 'ಸತ್ಯ ಹರಿಶ್ಚಂದ್ರ' ಆಕ್ಷನ್ ಮತ್ತು ಹಾಸ್ಯಮಯವಾಗಿದ್ದು ಎಲ್ಲರನ್ನು ರಂಜಿಸುವುದು ಖಂಡಿತ. ಕನ್ನಡದ ಟೆಲಿವಿಷನ್ ನಲ್ಲಿ ಪ್ರಪ್ರಥಮ ಬಾರಿಗೆ 'ಸತ್ಯಹರಿಶ್ಚಂದ್ರ' ಉದಯ ಟಿವಿಯಲ್ಲಿ ಇದೇ ಭಾನುವಾರ (11.02.2018) ಸಂಜೆ 6ಕ್ಕೆ ಪ್ರಸಾರವಾಗಲಿದೆ.