Don't Miss!
- Automobiles ಜೀವದ ಗೆಳೆಯನಿಗೆ ಸರ್ಪ್ರೈಸ್ ಆಗಿ 'ಬೈಕ್' ಉಡುಗೊರೆ ನೀಡಿದ ವಧು.. ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ!
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Lifestyle ಮೈ ತೂಕ ಕಡಿಮೆಯಾಗಲು ಈ ಪುದೀನಾ ನೀರು ಸಹಕಾರಿಯೇ? ಇದರ ಇತರ ಪ್ರಯೋಜನಗಳೇನು?
- News Poornachandra Tejaswi: ವಿಸ್ಮಯಲೋಕವನ್ನೇ ತೆರೆದಿಡುವ ತೇಜಸ್ವಿಯವರ ಪುಸ್ತಕಗಳು
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರೋಮೋ ನೋಡಿ: 'ವೀಕೆಂಡ್' ಸಾಧನೆಯ ಸೀಟ್ ಮೇಲೆ ಐಪಿಎಸ್ ಅಧಿಕಾರಿ.!
ಅಂತೂ ಜೀ ಕನ್ನಡ ವಾಹಿನಿಯ ಜನಪ್ರಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಮೇಲಿದ್ದ ದೊಡ್ಡ ಅಪವಾದಕ್ಕೆ ಮುಕ್ತಿ ಸಿಕ್ಕಂತಾಗಿದೆ. ಬರೀ ಚಿತ್ರರಂಗದ ತಾರೆಯರಿಗೆ ಮಾತ್ರ ಸಾಧನೆಯ ಕುರ್ಚಿ ಮೀಸಲು ಎಂದೇ ಬಿಂಬಿತವಾಗಿದ್ದ ಈ ಕಾರ್ಯಕ್ರಮದಲ್ಲಿ ಈಗ ಉಳಿದ ಕ್ಷೇತ್ರಗಳ ದಿಗ್ಗಜರ ಜೀವನ ಚರಿತ್ರೆ ಅನಾವರಣ ಆಗುತ್ತಿದೆ.
ಈಗಾಗಲೇ 'ಮಾತಿನ ಮಲ್ಲ' ಪ್ರಾಣೇಶ್ ರವರ ಲೈಫ್ ಹಿಸ್ಟರಿಯನ್ನ ಕರ್ನಾಟಕ ಜನತೆ ಕಣ್ತುಂಬಿಕೊಂಡಿದ್ದಾಗಿದೆ. ಈ ವಾರಾಂತ್ಯ 'ಕರ್ನಾಟಕದ ಸಿಂಗಂ' ಎಂದೇ ಖ್ಯಾತಿ ಗಳಿಸಿರುವ ರವಿ.ಡಿ.ಚನ್ನಣ್ಣನವರ್ ರವರ ಬದುಕಿನ ಪುಟಗಳನ್ನು ತೆರೆದಿಡುವ ಜವಾಬ್ದಾರಿ ಜೀ ಕನ್ನಡ ವಾಹಿನಿಯವರದ್ದು.!
ಸಾಧಕರ ಸೀಟ್ ಮೇಲೆ 'ಕರ್ನಾಟಕದ ಹುಲಿ'
ಖಡಕ್ ಪೊಲೀಸ್ ಅಧಿಕಾರಿ ರವಿ.ಡಿ.ಚನ್ನಣ್ಣನವರ್ ರವರ ಜೀವನಗಾಥೆಯನ್ನ ಕಳೆದ ಸೀಸನ್ ನಲ್ಲಿಯೇ ಕಣ್ತುಂಬಿಕೊಳ್ಳಬೇಕು ಎಂದು ಬಯಸಿದವರು ಅದೆಷ್ಟೋ ಮಂದಿ. ಆದ್ರೆ, ಕಳೆದ ಬಾರಿ ಇದು ಸಾಧ್ಯವಾಗಿರಲಿಲ್ಲ. ಈಗ ರವಿ.ಡಿ.ಚನ್ನಣ್ಣನವರ್ ರವರನ್ನ ಸಾಧನೆ ಸೀಟ್ ಮೇಲೆ ಕೂರಿಸುವಲ್ಲಿ ಜೀ ಕನ್ನಡ ವಾಹಿನಿ ಯಶಸ್ವಿ ಆಗಿದೆ.[ನಿಮ್ಮ ಆಸೆಯಂತೆ ಈ 'ವೀಕೆಂಡ್'ನ ಅತಿಥಿಯಾಗಲಿದ್ದಾರೆ 'ಕರ್ನಾಟಕದ ಸಿಂಗಂ']
ಕಷ್ಟದ ಬದುಕು ಅನಾವರಣ
ಇಂದು ಐ.ಪಿ.ಎಸ್ ಅಧಿಕಾರಿ ಆಗಿ, ರೌಡಿಗಳಿಗೆ ದುಃಸ್ವಪ್ನವಾಗಿರುವ ರವಿ.ಡಿ.ಚನ್ನಣ್ಣನವರ್ ರವರ ಕಷ್ಟದ ಬದುಕು ಈ ವಾರಾಂತ್ಯದಲ್ಲಿ ಅನಾವರಣವಾಗಲಿದೆ.
ಪ್ರೋಮೋ ನೋಡಿದ್ರಾ.?
'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ರವಿ ಡಿ ಚನ್ನಣ್ಣನವರ್ ಭಾಗವಹಿಸಿರುವ ಪ್ರೋಮೋ ಜೀ ಕನ್ನಡ ವಾಹಿನಿ ಕಡೆಯಿಂದ ಔಟ್ ಆಗಿದೆ. ಪ್ರೋಮೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ....
ಶನಿವಾರ ಮಿಸ್ ಮಾಡಬೇಡಿ
ಸಮಾಜದ ಶಾಂತಿ-ಸುವ್ಯವಸ್ಥೆ ಕಾಪಾಡುವ ಪೊಲೀಸ್ ಅಧಿಕಾರಿ ರವಿ.ಡಿ.ಚನ್ನಣ್ಣನವರ್ ರವರ ಸಂಚಿಕೆ ಪ್ರಸಾರ ಆಗಲು ಇನ್ನೊಂದೇ ದಿನ ಬಾಕಿ. ಶನಿವಾರದ 'ವೀಕೆಂಡ್ ವಿತ್ ರಮೇಶ್' ಮಿಸ್ ಮಾಡ್ಬೇಡಿ.