Don't Miss!
- Lifestyle ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- News 140 ಕೋಟಿ ಜನ ನಿಮ್ಮನ್ನು ತಿರಸ್ಕರಿಸಿರುವುದರಲ್ಲಿ ಅಚ್ಚರಿ ಏನಿಲ್ಲ: ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ಟೀಕೆ
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಶಾಂತಿ ನಿವಾಸ'ವಾಗಿದ್ದ 'ಬಿಗ್ ಬಾಸ್' ಮನೆಯಲ್ಲಿ ಬೀಸಿದೆ ಅಶಾಂತಿಯ ಬಿರುಗಾಳಿ!
Recommended Video
ಕಳೆದ ನಾಲ್ಕು ಆವೃತ್ತಿಗಳಿಗೆ ಹೋಲಿಸಿದರೆ, 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಸಪ್ಪೆ ಅಂತ ಅನೇಕ ಮಂದಿ ಮೂಗು ಮುರಿಯುತ್ತಿರುವಾಗಲೇ, 'ಬಿಗ್ ಬಾಸ್' ಮನೆಯಲ್ಲಿ ಗದ್ದಲ-ಗಲಾಟೆ ಆರಂಭವಾಗಿದೆ.
ಇಷ್ಟು ದಿನ 'ಶಾಂತಿ ನಿವಾಸ'ದಂತೆ ಇದ್ದ 'ಬಿಗ್ ಬಾಸ್' ಮನೆಯಲ್ಲಿ ಇದೀಗ ಅಶಾಂತಿಯ ಬಿರುಗಾಳಿ ಬೀಸಿದೆ.
'ದೊಡ್ಮನೆ'ಯಲ್ಲಿ ನಟಿ ತೇಜಸ್ವಿನಿ ಹಾಗೂ 'ಮಾತಿನ ಮಲ್ಲ' ದಿವಾಕರ್ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಮುಂದೆ ಓದಿರಿ...
ಎರಡನೇ ವಾರವೂ ಟಾರ್ಗೆಟ್ ಆಗುತ್ತಾರಾ ದಿವಾಕರ್.?
'ಬಿಗ್ ಬಾಸ್' ಮನೆಯಲ್ಲಿ ದಿವಾಕರ್ ಕಂಡ್ರೆ ಸೆಲೆಬ್ರಿಟಿ ಸ್ಪರ್ಧಿಗಳಿಗೆ ಅಷ್ಟಕಷ್ಟೆ. ಅನೇಕ ಕಾರಣಗಳನ್ನು ನೀಡಿ ಮೊದಲ ವಾರವೇ ದಿವಾಕರ್ ರವರನ್ನ ಬಹುತೇಕ ಮಂದಿ ನಾಮಿನೇಟ್ ಮಾಡಿದ್ದರು. ಮೊದಲ ವಾರ ಬಚಾವ್ ಆಗಿದ್ದ ದಿವಾಕರ್ ಈಗ ಎರಡನೇ ವಾರವೂ ಟಾರ್ಗೆಟ್ ಆಗುವಂತೆ ಕಾಣುತ್ತಿದೆ.
ಮೊದಲ ದಿನವೇ ನಾಮಿನೇಟ್ ಆದ 'ಸೇಲ್ಸ್ ಮ್ಯಾನ್' ದಿವಾಕರ್ ಬದುಕಿನ ಕಥೆ-ವ್ಯಥೆ
ದಿವಾಕರ್ ವರ್ಸಸ್ ತೇಜಸ್ವಿನಿ
ದಿವಾಕರ್ ಹಾಗೂ ನಟಿ ತೇಜಸ್ವಿನಿ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಅದಕ್ಕೆ ಕಾರಣವೇನು ಎಂಬುದನ್ನು ತಿಳಿಯಲು ನೀವು ಇಂದಿನ ಸಂಚಿಕೆ ಪ್ರಸಾರ ಆಗುವವರೆಗೂ ಕಾಯಲೇಬೇಕು.
ವಿಷ್ಣುವರ್ಧನ್ ಮಗಳಾಗಿದ್ದ ತೇಜಸ್ವಿನಿ ಪ್ರಕಾಶ್ ಈಗ 'ಬಿಗ್ ಬಾಸ್' ಮೆಟ್ಟಿಲೇರಿದ್ದಾರೆ!
ಪ್ರೋಮೋ ನೋಡಿ
'ಬಿಗ್ ಬಾಸ್' ಮನೆಯಲ್ಲಿ ದಿವಾಕರ್ ಮತ್ತು ತೇಜಸ್ವಿನಿ ನಡುವೆ ಆದ ಗಲಾಟೆಯ ಪ್ರೋಮೋ ಸದ್ಯ ಔಟ್ ಆಗಿದೆ. ಅದನ್ನ ನೋಡಲು ಈ ಲಿಂಕ್ ಕ್ಲಿಕ್ ಮಾಡಿ....
ಇಂದು ನಡೆಯಲಿದೆ ನಾಮಿನೇಷನ್ ಪ್ರಕ್ರಿಯೆ
ಅಂದ್ಹಾಗೆ, ಇಂದು ಎರಡನೇ ವಾರದ ನಾಮಿನೇಷನ್ ಪ್ರಕ್ರಿಯೆ ಕೂಡ ನಡೆಯಲಿದೆ. ಈ ಬಾರಿ ಯಾರೆಲ್ಲ ಡೇಂಜರ್ ಝೋನ್ ಗೆ ಹೋಗ್ತಾರೋ, ಕಾದು ನೋಡೋಣ.