Don't Miss!
- News Lok Sabha Election 2024: ಈ 6 ಜಿಲ್ಲೆಗಳಲ್ಲಿ 0% ಮತದಾನ-ಎಲ್ಲಿ ಹಾಗೂ ಕಾರಣ ಏನು?
- Automobiles ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Lifestyle 5 ನಿಮಿಷದಲ್ಲಿ ಪಾತ್ರೆಯನ್ನು ಹೊಳೆಯುವಂತೆ ಮಾಡಿ..! ಸುಲಭದ ಟಿಪ್ಸ್ ಇಲ್ಲಿದೆ
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇದೇ ಭಾನುವಾರ 'ಸರೆಗಮಪ' ಗ್ರಾಂಡ್ ಫಿನಾಲೆ ನೇರ ಪ್ರಸಾರ
ಜೀ ಕನ್ನಡದ ಜನಪ್ರಿಯ ಕಾರ್ಯಕ್ರಮವಾದ 'ಸರೆಗಮಪ ಸೀಸನ್ 13' ಈಗ ಕೊನೆಯ ಹಂತ ತಲುಪಿದೆ. ಸತತ 21 ವಾರಗಳಿಂದ ಜನಮನ್ನಣೆಗೆ ಪಾತ್ರವಾಗಿರುವ 'ಸರೆಗಮಪ'ದ ವಿಜೇತರು ಯಾರಾಗುತ್ತಾರೆಂದು ತಿಳಿಯಲು ಕ್ಷಣಗಣನೆ ಶುರುವಾಗಿದೆ.
ಇದೇ ಭಾನುವಾರ ಸಂಜೆ 6 ಗಂಟೆಯಿಂದ ಆರಂಭವಾಗುವ ಗ್ರ್ಯಾಂಡ್ ಫಿನಾಲೆಯಲ್ಲಿ, 6 ಗಾಯಕರ ಪೈಕಿ ಒಬ್ಬರನ್ನು ವೀಕ್ಷಕರ ವೋಟುಗಳ ಆಧಾರದ ಮೇಲೆ ವಿಜೇತರನ್ನಾಗಿ ಆಯ್ಕೆ ಮಾಡಲಾಗುತ್ತದೆ.
ಮೆಗಾ ಆಡಿಷನ್ ನಲ್ಲಿ ಆಯ್ಕೆಯಾದ 30 ಗಾಯಕರಲ್ಲಿ ಅಂತಿಮವಾಗಿ 17 ಗಾಯಕರನ್ನು ಸೆಲೆಕ್ಟ್ ಮಾಡಲಾಗಿತ್ತು. ಅವರಲ್ಲಿ ವಾರದಿಂದ ವಾರಕ್ಕೆ ಸ್ಪರ್ಧಿಗಳ ಎಲಿಮಿನೇಷನ್ ನಡೆಸಿ, ಸೆಮಿ ಫಿನಾಲೆ ಹಂತದಲ್ಲಿ 10 ಗಾಯಕರು ಉಳಿದುಕೊಂಡರು.
ಗಾಯಕರ ಅಪ್ರತಿಮ ಪ್ರತಿಭಾ ಪ್ರದರ್ಶನ ನೋಡಿದ ತೀರ್ಪುಗಾರರಾದ ವಿಜಯ್ ಪ್ರಕಾಶ್, ಅರ್ಜುನ್ ಜನ್ಯ ಹಾಗೂ ರಾಜೇಶ್ ಕೃಷ್ಣನ್ ರವರಿಗೆ ಫಿನಾಲೆಗೆ ಯಾವ 6 ಗಾಯಕರನ್ನು ಆಯ್ಕೆ ಮಾಡಬೇಕೆಂಬ ಗೊಂದಲಕ್ಕೀಡಾದರು.
ಕೊನೆಗೆ, ಇಷ್ಟೂ ವಾರಗಳ ಪ್ರದರ್ಶನವನ್ನು ಮನಗಂಡು, 6 ಫೈನಲಿಸ್ಟುಗಳನ್ನು ಆಯ್ಕೆ ಮಾಡಿದರು. ಧನುಷ್, ಸುನಿಲ್, ಶ್ರೀಹರ್ಷ, ದೀಕ್ಷಾ, ಮೆಹಬೂಬ್ ಸಾಬ್ ಹಾಗೂ ಅರವಿಂದ್ ಇದೇ ಭಾನುವಾರ ಲಕ್ಷಾಂತರ ವೀಕ್ಷಕರ ಸಮ್ಮುಖದಲ್ಲಿ ಹಾಡಲಿದ್ದಾರೆ. ಅವರಲ್ಲಿ ಒಬ್ಬ ವಿಜೇತರನ್ನು ಜನರ ಸಮ್ಮುಖದಲ್ಲೇ ಆಯ್ಕೆ ಮಾಡಲಾಗುವುದು. ಪ್ರೇಕ್ಷಕರು ಮನೆಯಲ್ಲೇ ಕುಳಿತು ಲೈವ್ ಆಗಿ ಕಾರ್ಯಕ್ರಮವನ್ನು ವೀಕ್ಷಿಸಬಹುದು.
ರಾಜ್ಯದ ವಿವಿದೆಡೆಯಿಂದ ಬಂದ ಪ್ರತಿಭೆಗಳು ತಮ್ಮ ಕಲೆಯಿಂದಷ್ಟೇ ಅಲ್ಲದೆ, ತಮ್ಮ ಮುಗ್ಧತೆಯಿಂದ, ವಾಕ್ಚಾತುರ್ಯದಿಂದ, ನೃತ್ಯದಿಂದ, ಸ್ಟಾರ್ ಪಟ್ಟವನ್ನು ತಮ್ಮದಾಗಿಸಿಕೊಂಡರು. ಫಿನಾಲೆಗೆ ಆಯ್ಕೆಯಾಗದ ಸುಹಾನ ಸೈಯ್ಯದ್, ಲಹರಿ, ಇಂಪನ ಹಾಗೂ ಇತರ ಗಾಯಕರೂ ಸಹ ಯಾವುದರಲ್ಲೂ ಕಮ್ಮಿಯಿಲ್ಲ ಅಂತ ತೋರಿಸಿಕೊಟ್ಟಿದ್ದಾರೆ.
ಇದೇ ಮೊದಲಬಾರಿಗೆ 'ಸರೆಗಮಪ' ಫಿನಾಲೆ ಕಾರ್ಯಕ್ರಮ ಲೈವ್ ಆಗಿ ಪ್ರಸಾರವಾಗಲಿದ್ದು, ಪ್ರೇಕ್ಷಕರಲ್ಲಿ ಹೊಸ ಕುತೂಹಲ ಮೂಡಿಸಿದೆ. ಈಗಾಗಲೇ ವೋಟಿಂಗ್ ಲೈನ್ಸ್ ಕೂಡ ತೆರೆದಿದ್ದು, ಕೊನೆಯ ಹಂತದವರೆಗೆ ವೋಟ್ ಮಾಡುವ ಅವಕಾಶವಿರುತ್ತದೆ. ಫಿನಾಲೆಯಲ್ಲಿ ಎಂದಿನಂತೆ ಎರಡು ಸುತ್ತುಗಳಿರುತ್ತದೆ. ಮೊದಲನೇ ಸುತ್ತಿನ ನಂತರ ಮೂರು ಜನ ಮಾತ್ರ ಮುಂದಿನ ಸುತ್ತಿಗೆ ಆಯ್ಕೆಯಾಗುತ್ತಾರೆ.
ಗ್ರಾಂಡ್ ಫಿನಾಲೆಗೆ ನಾದಬ್ರಹ್ಮ ಹಂಸಲೇಖ ವಿಶೇಷ ತೀರ್ಪುಗಾರರಾಗಿ ಆಗಮಿಸಲಿದ್ದಾರೆ. ಅವರ ಜೊತೆ ವಿಜಯಪ್ರಕಾಶ್, ಅರ್ಜುನ್ ಜನ್ಯ ಹಾಗೂ ರಾಜೇಶ್ ಕೃಷ್ಣನ್ ಕೂಡ ಉಪಸ್ಥಿತರಿರುತ್ತಾರೆ. ಜನರ ವೋಟಿಂಗ್ ಪರಿಗಣಿಸಿ, ಒಬ್ಬ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.