ರಮೇಶ್ ಬಾಯಿಂದ ಹೊರಬಂದ ಎಚ್.ಡಿ.ದೇವೇಗೌಡ ಸಾಧನೆಯ ವಿವರ..
'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಸಾಧಕರ ಸೀಟ್ ಗೆ ಹೊಸ ಕಳೆ ಬಂದಿದ್ದು ರಾಜಕೀಯ ನಾಯಕ, ಜೆ.ಡಿ.ಎಸ್ ವರಿಷ್ಟ ಎಚ್.ಡಿ.ದೇವೇಗೌಡ ಆಸೀನರಾದ ಮೇಲೆ.
ಹೆಚ್ಚಾಗಿ ಕನ್ನಡ ಚಿತ್ರರಂಗದ ತಾರೆಯರೇ ಭಾಗವಹಿಸುತ್ತಿದ್ದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ ಪಾಲ್ಗೊಂಡು, ತಮ್ಮ ಜೀವನವನ್ನು ರಿವೈಂಡ್ ಮಾಡಿ ನೋಡಿದರು.
ನಟ ರಮೇಶ್ ಅರವಿಂದ್ ಬಾಯಿಂದ ಎಚ್.ಡಿ.ದೇವೇಗೌಡ ರವರ ಸಾಧನೆಯ ಹೆಜ್ಜೆ ಗುರುತು ಹೊರಬಂದಿದ್ದು ಹೀಗೆ....

ಎಚ್.ಡಿ.ದೇವೇಗೌಡ ಕುರಿತು...
ನಿಜ ನಾಮ : ಹರದನಹಳ್ಳಿ ದೊಡ್ಡೇಗೌಡ ದೇವೇಗೌಡ
ಜನನ: ಮೇ 18, 1933
ಊರು: ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ಜನನ
ತಂದೆ: ದಿವಂಗತ ಶ್ರೀ ದೊಡ್ಡೇಗೌಡ
ತಾಯಿ: ದಿವಂಗತ ಶ್ರೀ ಲಕ್ಷ್ಮಿದೇವಮ್ಮ
ತಮ್ಮ: ದಿವಂಗತ ಶ್ರೀ ಬಸವೇಗೌಡ
ತಂಗಿಯರು: ಶ್ರೀಮತಿ ಅಕ್ಕಯ್ಯಮ್ಮ, ಪುಟ್ಟಮ್ಮ
ಪತ್ನಿ: ಚನ್ನಮ್ಮ
ಮಕ್ಕಳು: ಎಚ್.ಡಿ.ಬಾಲಕೃಷ್ಣ, ಎಚ್.ಡಿ.ರೇವಣ್ಣ, ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ರಮೇಶ್, ಅನಸೂಯ, ಶೈಲಜಾ

ಗುತ್ತಿಗೆದಾರನಾಗಿ ಕೆಲಸ ಮಾಡಿದ್ದ ಎಚ್.ಡಿ.ಡಿ
1952ರಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ನಲ್ಲಿ ಸಿವಿಲ್ ಡಿಪ್ಲೊಮ ಪದವಿ ಪಡೆದ ಎಚ್.ಡಿ.ದೇವೇಗೌಡ ರವರು ಹತ್ತು ವರ್ಷಗಳ ಕಾಲ ಗುತ್ತಿಗೆದಾರರಾಗಿ ಕೆಲಸ ಮಾಡಿದರು.

ಕಾಂಗ್ರೆಸ್ ಪಕ್ಷದಿಂದ ರಾಜಕೀಯ ಪ್ರವೇಶ
1952-53 ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರಾಗಿ ರಾಜಕೀಯಕ್ಕೆ ಎಂಟ್ರಿಕೊಟ್ಟ ಎಚ್.ಡಿ.ದೇವೇಗೌಡ ರವರು, 1962ರಲ್ಲಿ ಕಾಂಗ್ರೆಸ್ ಪಕ್ಷ ಬಿಟ್ಟು ಪಕ್ಷೇತರರಾಗಿ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರು.

ವಿರೋಧ ಪಕ್ಷದ ನಾಯಕ
1972 ರಲ್ಲಿ ಎಸ್.ನಿಜಲಿಂಗಪ್ಪ ರವರ ಸಂಸ್ಥಾ ಕಾಂಗ್ರೆಸ್ ಪಕ್ಷದಿಂದ ಚುನಾವಣೆಯಲ್ಲಿ ಗೆದ್ದು, ಪ್ರಪ್ರಥಮ ಬಾರಿಗೆ ವಿರೋಧ ಪಕ್ಷದ ನಾಯಕರಾದರು ಎಚ್.ಡಿ.ದೇವೇಗೌಡ.

ಜನತಾ ಪಾರ್ಟಿ
1977ರಲ್ಲಿ ಸಂಸ್ಥಾ ಕಾಂಗ್ರೆಸ್, ಜನತಾ ಪಕ್ಷಕ್ಕೆ ವಿಲೀನವಾದ ಮೇಲೆ ಜನತಾ ಪಾರ್ಟಿ ಸ್ಟೇಟ್ ಪ್ರೆಸಿಡೆಂಟ್ ಆದರು ಎಚ್.ಡಿ.ದೇವೇಗೌಡ.

ಸಚಿವರಾಗಿ ಕೆಲಸ...
1983 ರಲ್ಲಿ ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಎಚ್.ಡಿ.ದೇವೇಗೌಡ ಮಂತ್ರಿ ಆದರು. ನೀರಾವರಿ ಹಾಗೂ ಲೋಕೋಪಯೋಗಿ ಸಚಿವರಾಗಿ ಕೆಲಸ ನಿರ್ವಹಿಸಿದರು.

ಕರ್ನಾಟಕದ ಹದಿನಾಲ್ಕನೇ ಮುಖ್ಯಮಂತ್ರಿ...
1994 ರಲ್ಲಿ ಜನತಾದಳದಿಂದ ಕರ್ನಾಟಕದ 14ನೇ ಮುಖ್ಯಮಂತ್ರಿ ಆದರು ಎಚ್.ಡಿ.ದೇವೇಗೌಡ.

ಭಾರತದ ಹನ್ನೊಂದನೇ ಪ್ರಧಾನ ಮಂತ್ರಿ
1996 ರಲ್ಲಿ ರಾಷ್ಟ್ರ ರಾಜಕಾರಣದ ಅತ್ಯುನ್ನತ ಪದವಿ ಆದ ಭಾರತ ದೇಶದ ಹನ್ನೊಂದನೇ ಪ್ರಧಾನ ಮಂತ್ರಿ ಆದರು.

ಏಕೈಕ ಕನ್ನಡಿಗ
ದೆಹಲಿಯ ಕೆಂಪುಕೋಟೆ ಮೇಲೆ ಧ್ವಜಾರೋಹಣ ಮಾಡಿದ ಏಕೈಕ ಕನ್ನಡಿಗ, ಮಣ್ಣಿನ ಮಗ ಎಚ್.ಡಿ.ದೇವೇಗೌಡ.


Click it and Unblock the Notifications











