ರಘು ದೀಕ್ಷಿತ್ ಬಗ್ಗೆ ಶಾರುಖ್, ಪ್ರಿಯಾಂಕ ಛೋಪ್ರಾ ಹೇಳಿದ್ದೇನು ಗೊತ್ತೇ?
ಗಾಯಕ, ಸಂಗೀತ ನಿರ್ದೇಶಕ ರಘು ದೀಕ್ಷಿತ್ ಈ ವಾರದ ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ 'ವೀಕೆಂಡ್ ವಿತ್ ರಮೇಶ್' ಅತಿಥಿ.
ಮೈಸೂರಿನಲ್ಲಿ ಹುಟ್ಟಿ ಬೆಳೆದ ರಘು ದೀಕ್ಷಿತ್, ತಮ್ಮದೇ ಆಲ್ಬಂ ಗಳ ಮೂಲಕ ಸಂಗೀತ ಲೋಕದಲ್ಲಿ ಸಂಚಲನ ಮೂಡಿಸಿದರು.
2008 ರಲ್ಲಿ ತೆರೆಕಂಡ ಕನ್ನಡ ಸಿನಿಮಾ 'ಸೈಕೋ' ಮೂಲಕ ಸಂಗೀತ ನಿರ್ದೇಶಕನ ಪಟ್ಟಕ್ಕೇರಿದ ರಘು ದೀಕ್ಷಿತ್, 'ಜಸ್ಟ್ ಮಾತ್ ಮಾತಲ್ಲಿ' ಸೇರಿದಂತೆ ಹಿಂದಿ ಹಾಗೂ ಮಲೆಯಾಳಂ ಚಿತ್ರಗಳಿಗೂ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.
ರಘು ದೀಕ್ಷಿತ್ ಬಗ್ಗೆ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಬಾಲಿವುಡ್ ನ ಖ್ಯಾತ ನಟರಾದ ಶಾರುಖ್ ಖಾನ್, ಪ್ರಿಯಾಂಕ ಛೋಪ್ರಾ ಮತ್ತು ಸಂಜಯ್ ದತ್ ಮಾತನಾಡಿರುವುದು ಸಖತ್ ಸ್ಪೆಷಲ್.
ಹಾಗಾದ್ರೆ, ರಘು ದೀಕ್ಷಿತ್ ಬಗ್ಗೆ ಬಾಲಿವುಡ್ ನಟರು ಮಾಡಿರುವ ಕಾಮೆಂಟ್ಸ್ ಏನು? ಅದನ್ನ ತಿಳಿಯಲು ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ....

ಶಾರುಖ್ ಖಾನ್
''After a long time, i have heard some one like Raghu Dixit. I think he has got a big voice'' ಎಂದಿದ್ದಾರೆ ಶಾರುಖ್ ಖಾನ್

ಪ್ರಿಯಾಂಕ ಛೋಷ್ರಾ
''Its very fresh sound. Its not something that we have heard at all. Extremely energetic'' - ಪ್ರಿಯಾಂಕ ಛೋಪ್ರಾ

ಸಂಜಯ್ ದತ್
''ಗ್ರೇಟ್ ಮ್ಯೂಸಿಷಿಯನ್ ಫ್ರಮ್ ದಿ ಸೌತ್'' ಅರ್ಥಾತ್ ದಕ್ಷಿಣ ಭಾರತದ ಉತ್ತಮ ಸಂಗೀತ ನಿರ್ದೇಶಕ ಅಂತ ಸಂಜಯ್ ದತ್ ಕೊಂಡಾಡಿದ್ದಾರೆ.
ವಿಡಿಯೋ ನೋಡಿ...
ರಘು ದೀಕ್ಷಿತ್ ಬಗ್ಗೆ ಪ್ರಿಯಾಂಕ ಛೋಪ್ರಾ, ಶಾರುಖ್ ಖಾನ್ ಮತ್ತು ಸಂಜಯ್ ದತ್ ಮಾತನಾಡಿರುವ ವಿಡಿಯೋ ಇಲ್ಲಿದೆ ನೋಡಿ....

ಕಣ್ಣೀರಿಟ್ಟಿದ್ದಾರೆ ರಘು ದೀಕ್ಷಿತ್
'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ರಘು ದೀಕ್ಷಿತ್ ಭಾವುಕರಾಗಿದ್ದಾರೆ.
ವಿಡಿಯೋ ನೋಡಿ....
ಸಹೋದರನ ಮದುವೆಗೆ ಹೋಗಲು ಆಗಲಿಲ್ಲ ಅಂತ ರಘು ದೀಕ್ಷಿತ್ ಕಣ್ಣೀರಿಟ್ಟಿರುವ ವಿಡಿಯೋ ಇದು....

ವಿಜಯ್ ಪ್ರಕಾಶ್ ಕೂಡ ಮಾತನಾಡಿದ್ದಾರೆ!
ರಘು ದೀಕ್ಷಿತ್ ಬಗ್ಗೆ ಗಾಯಕ ವಿಜಯ್ ಪ್ರಕಾಶ್ ಕೂಡ ಮಾತನಾಡಿದ್ದಾರೆ.
ವಿಡಿಯೋ ಇಲ್ಲಿದೆ
ರಘು ದೀಕ್ಷಿತ್ ಮತ್ತು ವಿಜಯ್ ಪ್ರಕಾಶ್ ರವರ ಸಂಭಾಷಣೆ ಇರುವ ಪ್ರೋಮೋ ಇಲ್ಲಿದೆ ನೋಡಿ...

ಪ್ರಸಾರ ಯಾವಾಗ?
ಮಾರ್ಚ್ 19 (ಶನಿವಾರ) ಮತ್ತು 20 (ಭಾನುವಾರ) 'ವೀಕೆಂಡ್ ವಿತ್ ರಮೇಶ್' ರಘು ದೀಕ್ಷಿತ್ ವಿಶೇಷ ಕಾರ್ಯಕ್ರಮ ಪ್ರಸಾರವಾಗಲಿದೆ.


Click it and Unblock the Notifications











