Don't Miss!
- News ಎಸ್ಸಿ, ಎಸ್ಟಿ ಮೀಸಲಾತಿ ಮುಸ್ಲಿಮರಿಗೆ ಹಂಚಿಕೆ: ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟಿ ಹೇಮಶ್ರೀ ಮರಣೋತ್ತರ ಪರೀಕ್ಷೆ ಏನಾಯಿತು?
ಹೇಮಶ್ರೀ ಅವರ ಪತಿ ಸುರೇಂದ್ರ ಬಾಬು ಅವರನ್ನು ಪೊಲೀಸರು ವಿಚಾರಣೆಗೆ ಗುರಿಪಡಿಸಿದ್ದು ಅವರಿಂದ ಸಾಕಷ್ಟು ಮಾಹಿತಿಯನ್ನು ಕಲೆಹಾಕಿದ್ದಾರೆ. ಅವುಗಳನ್ನು ದೃಢೀಕರಿಸಲು ವಿಧಿ ವಿಜ್ಞಾನ ಪ್ರಯೋಗಾಲಯದ ಪೂರ್ಣ ವರದಿ ಬರಬೇಕಾಗಿದೆ.
ಅನುಮಾನಾಸ್ಪದವಾಗಿ ಮೃತಪಟ್ಟ ಹೇಮಶ್ರೀ ಅವರ ಹೊಟ್ಟೆಯಲ್ಲಿ ದ್ರಾವಣವೊಂದು ಪತ್ತೆಯಾಗಿತ್ತ್ತು. ಆದರೆ ಈ ದ್ರಾವಣ ಏನು ಎಂದು ಪತ್ತೆ ಹಚ್ಚಲು ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದರು.
ಆದರೆ ವರದಿ ಬರುವುದು ಇನ್ನೂ ತಡವಾಗುತ್ತವೆ ಎನ್ನುತ್ತವೆ ಮೂಲಗಳು. ಏತನ್ಮಧ್ಯೆ ಸುರೇಂದ್ರ ಬಾಬು ಅವರ ಪೊಲೀಸ್ ಕಸ್ಟಡಿ ಅವಧಿ ಸಹ ಪೂರ್ಣಗೊಂಡಿದೆ. ಪೊಲೀಸರ ಮುಂದಿನ ನಡೆಯೇನು ಎಂಬುದು ಕುತೂಹಲ ಕೆರಳಿಸಿದೆ. [ಹೇಮಶ್ರೀ ಕಟ್ಟಕಡೆಯ ಮಾತುಗಳು]
ಅಕ್ಟೋಬರ್ 1೦ರಂದು ಹೇಮಶ್ರೀ ಅವರ ಸಾವಿನ ಪ್ರಕರಣ ಬಯಲಿಗೆ ಬಂದಿತ್ತು. ಅದಾದ ಬಳಿಕ ಅ.10ರಂದೇ ಹೇಮಶ್ರೀ ಅವರ ಮರಣೋತ್ತರ ಪರೀಕ್ಷೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದಿತ್ತು. ವೈದ್ಯರಾದ ಡಾ.ಸುಮಂಗಲಾ, ಡಾ.ವೆಂಕಟರಾಘವ ರಾವ್ ಹಾಗೂ ಡಾ. ಕೆ.ವಿ ಸತೀಶ್ ಅವರು ನಡೆಸಿದ್ದರು.
ಹೇಮಶ್ರೀ ದೇಹದಲ್ಲಿ ಮೂರು ಕಡೆ ಗಾಯದ ಗುರುತುಗಳಾಗಿದ್ದು, ಹೊಟ್ಟೆಯಲ್ಲಿ ರಸಾಯನಿಕವೂ ಪತ್ತೆಯಾಗಿತ್ತು. ಬಹುಶಃ ವಿಷಪ್ರಾಶನವಾಗಿರುವ ಸಾಧ್ಯತೆಗಳಿವೆ ಎಂಬ ಅನುಮಾನಗಳು ವ್ಯಕ್ತವಾಗಿದ್ದವು. ಹೆಚ್ಚಿನ ತನಿಖೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಕ್ಕೆ ಕಳುಹಿಸಲಾಗಿತ್ತು. (ಏಜೆನ್ಸೀಸ್)