Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದೂರು ಕೊಟ್ಟ ಕವಿತಾ ವಿರುದ್ಧ ಹೊಸ ಬಾಂಬ್ ಸಿಡಿಸಿದ ಆಂಡ್ರ್ಯೂ.!
Recommended Video
ಕವಿತಾ ಮತ್ತು ಆಂಡ್ರ್ಯೂ ನಡುವಿನ ಕಿತ್ತಾಟ ಸದ್ಯಕ್ಕೆ ಮುಗಿಯುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. 'ಬಿಗ್ ಬಾಸ್' ಮನೆಯಲ್ಲಿ ಇರುವಾಗ ಹಲವು ಬಾರಿ ಜಗಳ ಮಾಡಿಕೊಂಡಿದ್ದ ಆಂಡ್ರ್ಯೂ-ಕವಿತಾ ಇದೀಗ ಕಾರ್ಯಕ್ರಮ ಮುಗಿದ ಮೇಲೂ ಅದನ್ನೇ ಮುಂದುವರೆಸಿದ್ದಾರೆ.
'ಬಿಗ್ ಬಾಸ್' ಮನೆಯಲ್ಲಿ ಆದ ಕೆಲವು ಘಟನೆಗಳನ್ನು ಇಟ್ಟುಕೊಂಡು ಮತ್ತು ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಆಂಡಿ ಕಡೆಯಿಂದ ಪರ್ಸನಲ್ ಅಟ್ಯಾಕ್ ಆಯ್ತು ಎಂದು ಆರೋಪಿಸಿ ಕವಿತಾ ಗೌಡ ಇತ್ತೀಚೆಗಷ್ಟೇ ಮಹಿಳಾ ಆಯೋಗಕ್ಕೆ ದೂರು ಕೊಟ್ಟಿದ್ದರು.
'ಬಿಗ್ ಬಾಸ್' ಮುಗಿದ್ಮೇಲೂ ತೊಂದರೆ ತಪ್ಪಿಲ್ಲ: ಆಂಡ್ರ್ಯೂ ವಿರುದ್ಧ ಮಹಿಳಾ ಆಯೋಗಕ್ಕೆ ಕವಿತಾ ದೂರು.!
ಕವಿತಾ ರವರ ಈ ನಡೆ ಆಂಡ್ರ್ಯೂಗೆ ಬೇಸರ ಮೂಡಿಸಿದೆ. ''ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಕವಿತಾ ಬಗ್ಗೆ ನಾನು ಕೆಟ್ಟದಾಗಿ ಮಾತನಾಡಿಲ್ಲ'' ಎಂದು ಸ್ಪಷ್ಟ ಪಡಿಸಿರುವ ಆಂಡ್ರ್ಯೂ, ಸಂದರ್ಶನವೊಂದರಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ. ಅದೇನಪ್ಪಾ ಅಂದ್ರೆ, ''ಆಂಡ್ರ್ಯೂ ಕ್ರಿಶ್ಚಿಯನ್ ಎಂಬ ಕಾರಣಕ್ಕೆ ಅವರನ್ನ ಕವಿತಾ ಒಂಥರಾ ನೋಡುತ್ತಿದ್ದರಂತೆ.!''
ಕವಿತಾ ಬಗ್ಗೆ ಆಂಡಿ ಏನೇನೆಲ್ಲಾ ಹೇಳಿದ್ದಾರೆ ಅಂತ ನೀವೇ ಓದಿರಿ ಕೆಳಗಿರುವ ಫೋಟೋ ಸ್ಲೈಡ್ ಗಳಲ್ಲಿ...
ಕವಿತಾಗೆ ಇದ್ಯಾ ಹೊಟ್ಟೆ ಉರಿ.?
''ಜನ ನನ್ನನ್ನ ಕ್ಷಮಿಸಿ, ಪ್ರೀತಿ ತೋರಲು ಆರಂಭಿಸಿದ್ದಾರೆ. ನನಗೆ ಕೆಲ ಆಫರ್ ಗಳು ಕೂಡ ಬಂದಿವೆ. ಹೀಗಾಗಿ ಇವನು ಯಾಕೆ ಉದ್ಧಾರ ಆಗಬೇಕು ಅಂತ ಅವರಿಗೆ ಅನಿಸುತ್ತಿರಬೇಕು. ಕವಿತಾ ಮಾತ್ರ ಯಾಕೆ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ.? ಬೇರೆ ಹುಡುಗಿಯರನ್ನೂ ಕೇಳಿ ನಾನು ಹೇಗೆ ನಡೆದುಕೊಂಡಿದ್ದೇನೆ ಅಂತ'' ಎಂದು ಹೇಳುತ್ತಾರೆ ಆಂಡ್ರ್ಯೂ.
ಮಹಿಳಾ ಆಯೋಗಕ್ಕೆ ಕವಿತಾ ದೂರು: ಆಂಡ್ರ್ಯೂ ಹೇಳಿದ್ದೇನು.?
ಕ್ರಿಶ್ಚಿಯನ್ ಎಂಬ ಕಾರಣ.?
''ಕವಿತಾಗೆ ಮೊದಲಿನಿಂದಲೂ ನನ್ನ ಕಂಡ್ರೆ ಇಷ್ಟ ಇಲ್ಲ. ಅವರಿಗೆ ನನ್ನ ಹೆಸರು ಇಷ್ಟ ಇಲ್ಲ. ಆಂಡಿ ಅಂದ್ರೆ ನೀವು ಕ್ರಿಶ್ಚಿಯನ್ನಾ ಅಂತೆಲ್ಲಾ ಕೇಳಿದ್ದಾರೆ. ನನ್ನ ಧರ್ಮವನ್ನೇ ಇಟ್ಟುಕೊಂಡು ಅವರು ಒಂಥರಾ ನೋಡಿದ್ದಾರೆ'' ಎಂದಿದ್ದಾರೆ ಆಂಡ್ರ್ಯೂ.
''ಆಂಡಿ ಹಾಗೆಲ್ಲ ಮಾಡಲ್ಲ'' ಎಂದು ಕಡ್ಡಿ ತುಂಡು ಮಾಡಿದ ಹಾಗೆ ಹೇಳಿದ ಮುರಳಿ.!
ಕವಿತಾ ಹೀಗೆ ಹೇಳಿದ್ರಾ.?
''ಸ್ವಿಮ್ಮಿಂಗ್ ಪೂಲ್ ನಲ್ಲಿ ಮೈಕ್ ಇಲ್ಲದೇ ಇರುವಾಗಲೂ, ''ಇಂಥ ಜಾತಿಯವರನ್ನೆಲ್ಲಾ ಒಳಗೆ ಬಿಟ್ಟಿದ್ದಾರೆ'' ಅಂತ ಕವಿತಾ ಮಾತನಾಡಿದ್ದಾರೆ. ಆದರೂ ನಾನು ಈ ವಿಷಯದ ಬಗ್ಗೆ ಎಲ್ಲೂ ಮಾತನಾಡಿಲ್ಲ'' - ಆಂಡ್ರ್ಯೂ
ಕವಿತಾ ಹೊರಗೆ ಬಂದ್ಮೇಲೆ ಕಪಾಳಕ್ಕೆ ಹೊಡೆಯುವೆ ಎಂದು ಗುಡುಗಿದ ಅಕ್ಷತಾ.! ಯಾಕೆ.?
ಕವಿತಾ ಮಾಡಿರುವುದು ಸುಳ್ಳು ಆರೋಪ.!
''ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಎಲ್ಲರಿಗೂ ಮೈಕ್ ಕೊಟ್ಟಿದ್ದರು. ತುಟಿಕ್ ಪಿಟಿಕ್ ಅಂದರೂ ಕೇಳಿಸುತ್ತೆ. ಅಲ್ಲಿ ಸ್ಟೇಜ್ ಮೇಲೆ ಎಲ್ಲರೂ ಇದ್ದರು. ಹೀಗಿರುವಾಗ ನಾನು ಅಲ್ಲಿ ಕೆಟ್ಟ ಪದ ಬಳಸಿದ್ದರೆ, ಯಾರಿಗಾದರೂ ಕೇಳಿಸದೇ ಇರುತ್ತಾ.? ಆ ಸ್ಟುಡಿಯೋದಲ್ಲಿ ಎಷ್ಟು ಜನ ಇದ್ದರು... ಎಲ್ಲರನ್ನೂ ಕೇಳಿ ನಾನು ಹಾಗೆ ಮಾಡಿದ್ದೀನಾ ಅಂತ. ಕವಿತಾ ಆಡಿರುವ ಈ ಮಾತು ಸುಳ್ಳು. ಆಗದೇ ಇರುವ ವಿಷಯವನ್ನ ಆಗಿದೆ ಅಂತ ಹೇಳುವುದು ತಪ್ಪು. ಇದನ್ನ ನಾನು ಒಪ್ಪಲ್ಲ'' ಅಂತಾರೆ ಆಂಡ್ರ್ಯೂ. (ಕೃಪೆ: ಫಸ್ಟ್ ನ್ಯೂಸ್)