Don't Miss!
- News ದೇವೇಗೌಡರು ಕಣ್ಣೀರು ಹಾಕುವಂತೆ ಯಾರು ಏನು ಮಾಡಿದ್ದಾರೆ? ಡಿ ಕೆ ಶಿವಕುಮಾರ್ ಹೇಳಿದ್ದೇನು?
- Sports ಟಿ20 ವಿಶ್ವಕಪ್-2024: "ಬಾಗಿಲು ಮುಚ್ಚಿದ್ದೇನೆ" ಎಂದಿದ್ದೇಕೆ ಸ್ಪಿನ್ ಮಾಂತ್ರಿಕ ನರೈನ್
- Lifestyle ರೆಸಿಪಿ: ಮಾವಿನ ಕಾಯಿ ತುರಿದು ಮಾಡುವ ಉಪ್ಪಿನಕಾಯಿ, ಎಣ್ಣೆ ಬಳಸಿಲ್ಲ, ವರ್ಷದವರೆಗೆ ಇಡಲೂ ಬಹುದು
- Technology Google: ಗೂಗಲ್ ಪಿಕ್ಸೆಲ್ 8a ಬೆಲೆ ಮಾಹಿತಿ ಲೀಕ್! ಈ ಫೋನ್ ಫೀಚರ್ಸ್ ಏನು?
- Automobiles ಯುವಕರಿಗೆ ಸಿಹಿಸುದ್ದಿ: ಕೈಗೆಟುಕುವ ಬೆಲೆ, ಮಾಸ್ ಲುಕ್ನಲ್ಲಿ ಬರುತ್ತಿದೆ ಹೊಸ ಬಜಾಜ್ ಪಲ್ಸರ್ 400 ಬೈಕ್
- Finance ಇನ್ಮುಂದೆ ನಿಮ್ಮ ಜಮೀನಿನಲ್ಲಿ ನೀವು ಮನೆ ಕಟ್ಟೋದಕ್ಕೂ ಸರ್ಕಾರದ ಅನುಮತಿ ಅಗತ್ಯ, ಏನಿದು ಹೋಸ ನಿಯಮ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಉಗ್ರಂ' ಹೆಸರಿಡುವುದಕ್ಕೂ ಮುಂಚೆ ರಿಜೆಕ್ಟ್ ಆಗಿದ್ದ ಆ ಎರಡು ಟೈಟಲ್ ಯಾವುದು?
Recommended Video
ಶ್ರೀಮುರಳಿ ವೃತ್ತಿ ಜೀವನದಲ್ಲಿ ಅದೃಷ್ಟ ತಂದುಕೊಟ್ಟ ಚಿತ್ರ ಉಗ್ರಂ. ಸತತ ಸೋಲಿನಿಂದ ಕಂಗೆಟ್ಟಿದ್ದ ರೋರಿಂಗ್ ಸ್ಟಾರ್ ಗೆ ಗೆಲುವಿನ ಮಾರ್ಗ ತೋರಿಸಿದ ಸೂಪರ್ ಹಿಟ್ ಚಿತ್ರ. ಪ್ರಶಾಂತ್ ನೀಲ್ ಎಂಬ ಅದ್ಭುತ ನಿರ್ದೇಶಕ ಸ್ಯಾಂಡಲ್ ವುಡ್ ಗೆ ಪರಿಚಯವಾದ ಚಿತ್ರ.
ಹರಿಪ್ರಿಯಾ ಜರ್ನಿಗೆ ಹೊಸ ತಿರುವು ನೀಡಿದ ಸಿನಿಮಾ. ಕನ್ನಡ ಚಿತ್ರರಂಗದಲ್ಲಿ ಹೊಸ ತಂತ್ರಜ್ಞಾನ ಹಾಗೂ ಮೇಕಿಂಗ್ ಮೂಲಕ ಸದ್ದು ಮಾಡಿದ ಹಿಟ್ ಸಿನಿಮಾ. ರವಿಬಸ್ರೂರು ಎಂಬ ಸಂಗೀತ ನಿರ್ದೇಶಕನಿಗೆ ಜೀವನ ಕೊಟ್ಟ ಚಿತ್ರ. ತಿಲಕ್ ಎಂಬ ನಟನ ಹೊಸ ಇನ್ನಿಂಗ್ಸ್ ಗೆ ಜೀವ ನೀಡಿದ ಚಿತ್ರ.
ಶ್ರೀ ಮುರಳಿ ಸಂಚಿಕೆಗೆ ಹೊಗಳಿಕೆಗಿಂತ ತೆಗಳಿಕೆಯೇ ಹೆಚ್ಚು!
ಹೀಗೆ, ಹಲವು ಕಲಾವಿದರು ಹಾಗೂ ತಂತ್ರಜ್ಞರಿಗೆ ಜೀವ ಮತ್ತು ಜೀವನ ಕೊಟ್ಟ ಚಿತ್ರ ಉಗ್ರಂ. ಈ ಹೆಸರಿಡುವ ಮೊದಲು ಎರಡು ಟೈಟಲ್ ಬದಲಾಗಿತ್ತಂತೆ. ಹಾಗಿದ್ರೆ, ಉಗ್ರಂ ಹೆಸರಿಗೂ ಮುಂಚೆ ಇಟ್ಟಿದ ಆ ಹೆಸರುಗಳೇನು? ಈ ಸಿನಿಮಾ ಹೇಗೆ ಶುರುವಾಯ್ತು? ಮುಂದೆ ಓದಿ....
ಸರ್ಪ್ರೈಸ್ ನೀಡಿದ್ದ ಪ್ರಶಾಂತ್ ನೀಲ್
ಕಾಲೇಜಿನಲ್ಲಿ ಓದುತ್ತಿರುವಾಗ ನಿರ್ದೇಶಕ ಪ್ರಶಾಂತ್ ನೀಲ್ ಅವರ ತಂಗಿಯನ್ನ ನಟ ಶ್ರೀಮುರಳಿ ಪ್ರೀತಿಸುತ್ತಿದ್ದರಂತೆ. ಈ ವಿಷ್ಯದಲ್ಲಿ ಪ್ರಶಾಂತ್, ಶ್ರೀಮುರಳಿಗೆ ವಾರ್ನ್ ಕೂಡ ಮಾಡಿದ್ದರಂತೆ. ಹೀಗೆ ಒಂದು ದಿನ ಶ್ರೀಮುರಳಿ ಕಚೇರಿಗೆ ಬಂದ ಪ್ರಶಾಂತ್ ರೋರಿಂಗ್ ಸ್ಟಾರ್ ಗೆ ಸರ್ಪ್ರೈಸ್ ನೀಡಿದರಂತೆ.
ನಿನ್ನ ಸ್ಟಾರ್ ಮಾಡ್ತೀನಿ
ತಂಗಿ ವಿಚಾರಕ್ಕೆ ಬಂದಿರಬಹುದು ಎಂದುಕೊಂಡಿದ್ದ ಶ್ರೀಮುರಳಿಗೆ ಸರ್ಪ್ರೈಸ್ ನೀಡಿದ ಪ್ರಶಾಂತ್, ನಿನಗೊಂದು ಸಿನಿಮಾ ಮಾಡಬೇಕೆಂದುಕೊಂಡಿದ್ದೀನಿ, ಮಾಡೋಣ್ವಾ ಎಂದು ಕೇಳಿದ್ರಂತೆ. ಇದನ್ನ ಕೇಳಿ ಅಚ್ಚರಿಗೊಂಡು ಶ್ರೀಮುರಳಿ 'ಎಷ್ಟು ಬಜೆಟ್, ಹೇಗೆ ಮಾಡಬೇಕು ಅಂದುಕೊಂಡಿದ್ದೀರಾ' ಅಂದ್ರೆ, ಎಷ್ಟಾದರೂ ಆಗಲಿ, ಫ್ಲೈಟ್ ಬೇಕಾದರೆ ತರಿಸ್ತೀನಿ' ಎಂದು ಹೇಳ್ತಿದ್ದರಂತೆ.
'ಚಂದ್ರ ಚಕೋರಿ' ಸಿನಿಮಾಗೆ ಮುರಳಿ ಆಯ್ಕೆಯ ಹಿಂದಿದೆ ರೋಚಕ ಸಂಗತಿ
ಬೇಡ ಎಂದು ನಿರಾಕರಿಸಿದರಂತೆ ಶ್ರೀಮುರಳಿ
ಪ್ರಶಾಂತ್ ಸಿನಿಮಾ ಮಾಡಬೇಕು ಎಂದು ಹೋದಾಗ, ಸರಿ ನನ್ನ ಜೊತೆ ಬೇಡ ನನಗೆ ಸಮಯ ಸರಿಯಿಲ್ಲ. ಬೇರೆ ಯಾರನ್ನಾದರೂ ಹೀರೋ ಮಾಡೋಣ. ನಾನು ಮಾತಾಡಿ ಡೇಟ್ ಕೊಡಿಸುತ್ತೇನೆ ಎಂದು ಹೇಳಿದರಂತೆ. ಆದ್ರೆ, ಅದನ್ನ ಒಪ್ಪದ ಪ್ರಶಾಂತ್ 'ಈ ಸಿನಿಮಾ ಮಾಡೋದೇ ನಿಮಗಾಗಿ. ನಿಮಗೆ ಒಳ್ಳೆಯದಾಗಲಿ ಅಂತ. ನಿನ್ನ ಸ್ಟಾರ್ ಮಾಡ್ತೀನಿ' ಎಂದು ಧೈರ್ಯ ತುಂಬಿದರಂತೆ.
ಮೊದಲ ಟೈಟಲ್ 'ನಂದೇ'
'ಸಿನಿಮಾ ಮಾಡಬೇಕು ಎಂದು ಫಿಕ್ಸ್ ಆದ್ವಿ. ಆಗ ಆ ಚಿತ್ರಕ್ಕೆ 'ನಂದೇ' ಅಂತ ಟೈಟಲ್ ಕೂಡ ಇಟ್ಟರು. ಅದರಲ್ಲೇ ಪ್ರಚಾರ ಕೂಡ ಆರಂಭವಾಯಿತು. ಬಟ್, ನಮ್ಮ ಸುತ್ತಮುತ್ತಲಿನವರು ಕೆಲವರು ಈ ಟೈಟಲ್ ಬಗ್ಗೆ ಅಸಡ್ಡೆ ತೋರಿದರು. ಯಾಕೋ ಮನಸ್ಸಲ್ಲಿ ಗೊಂದಲ. ಟೈಟಲ್ ಬದಲಾಯಿಸೋಣ ಅಂತ ನಿರ್ಧಾರ ಮಾಡಿದ್ವಿ''
ಶ್ರೀಮುರಳಿ ಎಪಿಸೋಡ್ ಗೆ ಮುಂಚೆಯೇ ಸದ್ದು ಮಾಡ್ತಿರುವ ಈ ಹುಡುಗಿ ಯಾರು?
ಪ್ರಶಾಂತ್ ಬೇಡ ಅಂದ್ರು
'ನಂದೇ' ಟೈಟಲ್ ಅಷ್ಟಾಗಿ ನಮಗೆ ಆಗ್ತಿಲ್ಲ. ಬೇರೇ ಏನಾದರೂ ಬದಲಾಯಿಸೋಣ ಅಂತ ಪ್ರಶಾಂತ್ ಗೆ ಹೇಳಿದೆ. ಆದ್ರೆ, ಪ್ರಶಾಂತ್ ಯಾಕೆ, ಆಗಲ್ಲ ಅಂದ್ರು. ಆಮೇಲೆ ಸೂಕ್ಷ್ಮವಾಗಿ ಪರಿಸ್ಥಿತಿ ಹೇಳಿದಾಗ ಸರಿ ಬೇರೆ ಟೈಟಲ್ ಇಡೋಣ ಅಂತ ಡಿಸೈಡ್ ಆದರು. ಆಗ ಉಗ್ರಂ ವೀರಂ ಅಂತ ಬಂದ್ರು. ವೀರಂ ತೆಗೆದು ಉಗ್ರಂ ಸೌಂಡ್ ಚೆನ್ನಾಗಿದೆ. ಅದನ್ನೇ ಇಡೋಣ ಅಂತ ಫಿಕ್ಸ್ ಆದ್ವಿ.
'ಉಗ್ರಂ' ವೀರ ಕಷ್ಟದಲ್ಲಿದ್ದಾಗ ಕೈಹಿಡಿದಿದ್ದರಂತೆ ದಾಸ ದರ್ಶನ್
5 ವರ್ಷ ಆಯಿತು
ಫೆಬ್ರವರಿ 21, 2014ರಲ್ಲಿ ಉಗ್ರಂ ಸಿನಿಮಾ ತೆರೆಕಂಡಿತ್ತು. ತೂಗುದೀಪ ಪ್ರೊಡಕ್ಷನ್ ಈ ಚಿತ್ರ ವಿತರಣೆ ಮಾಡಿತ್ತು. ಶ್ರೀಮುರಳಿ, ಹರಿಪ್ರಿಯಾ, ತಿಲಕ್ ಈ ಸಿನಿಮಾದಲ್ಲಿ ನಟಿಸಿದ್ದರು. ಶತದಿನ ಆಚರಿಸಿ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಈಗ ಉಗ್ರಂ ಸಿನಿಮಾಗೆ ಐದು ವರ್ಷ ಕಳೆದಿದೆ.