Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಾಂಬೆಯಲ್ಲಿದ್ದ ಕಾಯ್ಕಿಣಿ ಬೆಂಗಳೂರಿಗೆ ಬರಲು ಪ್ರೇರಣೆ ಯಾರು ಗೊತ್ತಾ?
ನಿಮಗೆಲ್ಲಾ ಗೊತ್ತಿರುವಂತೆ ಸಾಹಿತಿ ಜಯಂತ್ ಕಾಯ್ಕಿಣಿ ರವರು ತಮ್ಮ 21 ನೇ ವರ್ಷಕ್ಕೆ ಮುಂಬೈಗೆ ಹೋದವರು. ನಂತರ ಅಲ್ಲಿಯೇ ಶಿಕ್ಷಣ ಮುಗಿಸಿ ಬಯೋ ಕೆಮಿಸ್ಟ್ ಆಗಿ ಉದ್ಯೋಗ ಆರಂಭಿಸಿದರು. ಬಾಂಬೆಯಲ್ಲಿಯೇ ಇದ್ದುಕೊಂಡು ಉದ್ಯೋಗದ ಜೊತೆಗೆ ಸಾಹಿತ್ಯ ಚಟುವಟಿಕೆಗಳನ್ನು ಮಾಡುತ್ತಿದ್ದವರು. ಹಾಗೆ ಉದ್ಯೋಗ ಮಾಡುತ್ತಿದ್ದ ಕಂಪನಿಯಲ್ಲಿದ್ದ ಸ್ಮಿತಾ ರವರ ಮೇಲೆ ಪ್ರೇಮವಾಗಿ ಮದುವೆ ಸಹ ಆಯಿತು.[ಭಾವಲೋಕದ ರಾಯಭಾರಿ ಕಾಯ್ಕಿಣಿ ಪ್ರೇಮಕಥೆ ಸುಂದರ-ಸುಮಧುರ!]
ಆದರೆ ಕಾಯ್ಕಿಣಿ ಬಾಂಬೆಯಲ್ಲಿ ಸೆಟೆಲ್ಡ್ ಆಗಿದ್ದವರು, ಬೆಂಗಳೂರಿಗೆ ಬರಲು ಕಾರಣವೇನು? ಪ್ರೇರಣೆ ಯಾರು?.... ಈ ಬಗ್ಗೆ ಕಾಯ್ಕಿಣಿ ಅವರೇ ಹೇಳಿದ ಮಾತುಗಳು ಇಲ್ಲಿದೆ ಓದಿ..
"ನಾನು ಬೆಂಗಳೂರಿಗೆ ಬರಲು ಮುಖ್ಯವಾದ ಪ್ರೇರಣೆ, ಶಕ್ತಿ ಎಲ್ಲ ಬಂದಿದ್ದು ಸ್ಮಿತಾಳಿಂದ. ನೀವು ಕನ್ನಡ ರೈಟರ್. ಕನ್ನಡ ನಿನ್ನ ಕರ್ಮ ಭೂಮಿ. ಅದೇ ನಿಮ್ಮ ಸಾಂಸ್ಕೃತಿಕ ನೆಲೆ. ತಂದೆ-ತಾಯಿ ಗೋಕರ್ಣದಲ್ಲಿದ್ದಾರೆ. ಏನೇ ಸಮಸ್ಯೆ ಬಂದರೂ ನೋಡಿಕೊಳ್ಳೋಣ. ಹೇಗಿದ್ರು ಬಾಂಬೆಯಲ್ಲಿಯೇ ಬೇರೆ ಕೆಲಸ ಹುಡುಕ ಬೇಕಲ್ಲ. ಬದಲಾಗಿ ಬೆಂಗಳೂರಿನಲ್ಲೇ ಹುಡುಕಿ ಅಂತ ಪ್ರೇರಣೆ ನೀಡಿದ್ದು ಸ್ಮಿತಾ. ಅವಳ ಮಾತು ಕೇಳಿಯೇ ನಾನು ಬಾಂಬೆಯಿಂದ ಬೆಂಗಳೂರಿಗೆ ಬಂದಿದ್ದು" ಎಂದು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಜಯಂತ್ ಕಾಯ್ಕಿಣಿ ಹೇಳಿದರು.[ಕಾಯ್ಕಿಣಿ ಸಾಹಿತ್ಯವನ್ನು ಮುಕ್ತಕಂಠದಿಂದ ಹೊಗಳಿದ ಪ್ರಕಾಶ್ ರೈ, ಸೀತಾರಾಂ]
"ನಾನು ಬಾಂಬೆಯಿಂದ ವಾಪಸ್ಸು ಬಂದು, ಇವತ್ತು ನಾನು ಕನ್ನಡ ನಾಡಲ್ಲಿ ಇದ್ದುಕೊಂಡು ನನ್ನ ಜೀವನದಲ್ಲಿ ಏನಾದ್ರು ಬದಲಾವಣೆ, ಬೆಳವಣಿಗೆ ಆಗಿದೆ ಅಂದ್ರೆ, ಅದರ ಎಲ್ಲಾ ಕ್ರೆಡಿಟ್ ಸ್ಮಿತಾ ಅವರಿಗೆ" - ಜಯಂತ್ ಕಾಯ್ಕಿಣಿ, ಸಾಹಿತಿ.[ಯುವ ಬರಹಗಾರರಿಗೆ ಜಯಂತ್ ಕಾಯ್ಕಿಣಿ'ಯ ಸ್ಫೂರ್ತಿಯ ಕಿವಿಮಾತುಗಳಿವು..!]